ಗೃಹ ಬಂಧನದಲ್ಲಿರುವ ಉಗ್ರ ಸಯೀದ್ 2008ರ 26/11 ಮುಂಬೈದಾಳಿಯ ಪ್ರಮುಖ ರುವಾರಿಯಾಗಿದ್ದು, ಭಾರತ-ಅಮೆರಿಕಾ ರಾಷ್ಟ್ರಗಳಿಗೆ ಬೇಕಿರುವ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದಾನೆ. ಮುಂಬೈ ದಾಳಿಯಲ್ಲಿ ಹಲವಾರು ಅಮಾಯಕ ಜೀವಗಳ ಸಾವಿಗೆ ಕಾರಣನಾಗಿದ್ದ ಸಯೀದ್ ನನ್ನು ವಿಶ್ವ ಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಲ್ಲಿ ಸೇರಿಸುವಂತೆ ಭಾರತ ಈ ಹಿಂದಿನಿಂದಲೂ ಆಗ್ರಹಿಸುತ್ತಲೇ ಬಂದಿದ್ದರೂ, ಪಾಕಿಸ್ತಾನ ಮಾತ್ರ ಆತನನ್ನು ರಕ್ಷಿಸುವ ತನ್ನ ಪ್ರಯತ್ನವನ್ನು ಮುಂದುವರೆಸುತ್ತಲೇ ಬಂದಿತ್ತು. ಇದೀಗ ಪಾಕಿಸ್ತಾನ ಸರ್ಕಾರವೇ ಹಫೀಜ್'ಗೆ ಗೃಹಬಂಧನದಲ್ಲಿ ಇರಿಸಿರುವ ಹಿನ್ನಲೆ ಈ ಬಗ್ಗೆ ಪಾಕಿಸ್ತಾನ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ನಡೆಯುತ್ತಿದೆ.