ಇದೇ ವೇಳೆ ಸ್ನೇಹಿತರಾದರೂ ಬದಲಾಗುತ್ತಾರೆ, ಆದರೆ, ನೆರೆಯವರು ಬದಲಾಗಲ್ಲ ಎಂಬ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಹೇಳಿಕೆಯನ್ನು ಉಲ್ಲೇಖಿಸಿರುವ ಫರೂಖ್, ಅಹಂಕಾರ ಹಾಗೂ ಮೊಂಡುತನದ ವರ್ತನೆಗಳು ಯಾವುದೇ ದೇಶದ ಪ್ರಗತಿ ಹಾಗೂ ಅಭಿವೃದ್ಧಿಯಾಗಲು ಬಿಡುವುದಿಲ್ಲ. ಸ್ನೇಹಿತರಾದರೂ ಬದಲಾಗುತ್ತಾರೆ, ಆದರೆ, ನೆರೆಯವರು ಬದಲಾಗಲ್ಲ ಎಂಬ ವಾಯಪೇಯಿಯವರ ಹೇಳಿಕೆಯನ್ನು ಈ ವೇಳೆ ಸ್ಮರಿಸಬೇಕಿದೆ. ಮಿತ್ರತ್ವವನ್ನು ಮುಂದುವರೆಸಬೇಕಾದರೆ ಒಬ್ಬರಾದರೂ ಮುಂದಕ್ಕೆ ಹೆಜ್ಜೆಯನ್ನು ಇಡಬೇಕು. ಇಲ್ಲವೇ, ಶತ್ರುಗಳಾಗುವ ಮೂಲಕ ಅವರನ್ನು ಹಿಮ್ಮೆಟ್ಟಿಸಬೇಕು.