ಸೇನಾ ಸಾಮರ್ಥ್ಯ ಸಾಬೀತಾಗಿದೆ, ಪಾಕ್ ವಿರುದ್ಧ ಇದೀಗ ಕೇಂದ್ರ ಸಾಮರ್ಥ್ಯ ಪ್ರದರ್ಶಿಸಬೇಕು: ಶಿವಸೇನೆ
ಭಾರತದ ಗಡಿ ನುಸುಳಲು ನೆರವಾಗುತ್ತಿದ್ದ ಗಡಿ ನಿಯಂತ್ರಣ ರೇಖೆ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಸೇನೆ ತನ್ನ ಸಾಮರ್ಥ್ಯವೇನು ಎಂಬುದನ್ನು ಸಾಬೀತು ಪಡಿಸಿದೆ. ಇದೀಗ ಕೇಂದ್ರ ಪಾಕಿಸ್ತಾನದ ವಿರುದ್ಧ ಕಠಿಣ ಕೈಗೊಳ್ಳುವ ಮೂಲಕ...
ನವದೆಹಲಿ: ಭಾರತದ ಗಡಿ ನುಸುಳಲು ನೆರವಾಗುತ್ತಿದ್ದ ಗಡಿ ನಿಯಂತ್ರಣ ರೇಖೆ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಸೇನೆ ತನ್ನ ಸಾಮರ್ಥ್ಯವೇನು ಎಂಬುದನ್ನು ಸಾಬೀತು ಪಡಿಸಿದೆ. ಇದೀಗ ಕೇಂದ್ರ ಪಾಕಿಸ್ತಾನದ ವಿರುದ್ಧ ಕಠಿಣ ಕೈಗೊಳ್ಳುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ ಎಂದು ಶಿವಸೇನೆ ಬುಧವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕ ಮನೀಷ ಕಯಾಂಡೆ, ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿದ್ದು, ಸೇನೆ ಇದೇ ರೀತಿ ಮತ್ತಷ್ಟು ಉಗ್ರರ ನೆಲೆಗಳನ್ನು ನಾಶಪಡಿಸಬೇಕು ಎಂದು ಹೇಳಿದ್ದಾರೆ.
ಧೈರ್ಯ ಹಾಗೂ ವೀರತ್ವದ ಕ್ರಮಕ್ಕೆ ಸೇನೆಗೆ ಶುಭಾಶಯಗಳನ್ನು ಹೇಳಲೇಬೇಕು. ಸೇನೆ ತಾನೇನು ಎಂಬುದನ್ನು ಸಾಬೀತು ಪಡಿಸಿದೆ. ಇದೀಗ ಕೇಂದ್ರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ. ಪಾಕಿಸ್ತಾನದ ಮತ್ತಷ್ಟು ಉಗ್ರ ನೆಲೆಗಳನ್ನು ಧ್ವಂಸಗೊಳಿಸಬೇಕಿದೆ ಎಂದು ತಿಳಿಸಿದ್ದಾರೆ.