ಚೆನ್ನೈನಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ದಿನಕರನ್, ತಮಿಳುನಾಡು ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಐಟಿ ದಾಳಿ ಮತ್ತು ಅದರ ಹಿನ್ನಲೆ ಏನು ಎಂಬುದನ್ನೂ ಕೂಡ ಅವರು ಅರಿತಿದ್ದು, ಎಲ್ಲದಕ್ಕೂ ಚುನಾವಣೆ ವೇಳೆ ಉತ್ತರಿಸುತ್ತಾರೆ. ಐಟಿ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಐಟಿ ದಾಳಿ ಹಿಂದೆ ಕೇಂದ್ರ ಸರ್ಕಾರದ ನೇರ ಕೈವಾಡವಿದೆ. ಐಟಿ ದಾಳಿ ಮೂಲಕ ನಮ್ಮನ್ನು ಬೆದರಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಇದಕ್ಕೆಲ್ಲಾ ತಾವು ಹೆದರುವುದಿಲ್ಲ ಎಂದು ದಿನಕರನ್ ಹೇಳಿದ್ದಾರೆ.