ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಹೆಸರಿನಲ್ಲಿ ಆರಂಭವಾದ ಜಯಾ ಟಿವಿಯನ್ನು ಶಶಿಕಲಾ ಅವರ ಸಹೋದರ ಸಂಬಂಧಿ ವಿವೇಕ್ ಜಯರಾಮನ್ ಅವರು ಮುನ್ನಡೆಸುತ್ತಿದ್ದು, ದಶಕಗಳ ಕಾಲ ಜಯಾ ಟಿವಿ ಎಐಎಡಿಎಂಕೆ ಪಕ್ಷದ ಮುಖವಾಣಿಯಾಗಿತ್ತು. ಎಐಎಡಿಎಂಕೆಯಲ್ಲಿನ ಬಣ ರಾಜಕೀಯದ ಬಳಿಕ ಪನ್ನೀರ್ ಸೆಲ್ವಂ ಬಣದಿಂದ ಜಯಾ ಟಿವಿ ಅಂತರ ಕಾಯ್ದುಕೊಂಡಿತ್ತು. ಇದೀಗ ಪನ್ನೀರ್ ಸೆಲ್ವಂ ಬಣ ಸಿಎಂ ಪಳನಿಸಾಮಿ ಬಣದೊಂದಿಗೆ ವಿಲೀನವಾಗಿದ್ದು, ಅಲ್ಲದೆ ಜಯಾ ಟಿವಿ ಮತ್ತು ನಮದು ಎಂಜಿಆರ್ ಪತ್ರಿಕೆಗಳನ್ನು ಮತ್ತೆ ಪಕ್ಷದ ಹಿಡಿತಕ್ಕೆ ವಾಪಸ್ ಪಡೆಯಲು ಮುಂದಾಗಿದೆ. ಇದೇ ಕಾರಣಕ್ಕೆ ಪ್ರಸ್ತುತ ಜಯಾ ಟಿವಿ ಮತ್ತು ನಮದು ಎಂಜಿಆರ್ ಪತ್ರಿಕೆಗಳಲ್ಲಿರುವ ಶಶಿಕಲಾ ಅವರ ಆಪ್ತರನ್ನು ದೂರವಿಡಲು ಸಂಘಟಿತ ಎಐಎಡಿಎಂಕೆ ಪಕ್ಷ ಒಕ್ಕೋರಲಿನ ನಿರ್ಧಾರ ಕೈಗೊಂಡಿದೆ.