ಚೆನ್ನೈ: ಆ್ಯಪಲ್ ಆಯ್ತು ಈಗ ಇಡ್ಲಿ ತಿಂದ ವ್ಯಕ್ತಿ ಸಾವು!

ಇಡ್ಲಿ ತಿನ್ನುವ ಸ್ಪರ್ಧೆ ವೇಳೆ ತಿಂದ ಇಡ್ಲಿ ಗಂಟಲ್ಲಲ್ಲಿ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಪುದುಕೋಟೈನಲ್ಲಿ ಗುರುವಾರ ನಡೆದಿದೆ.
ಇಡ್ಲಿ ತಿನ್ನುವ ಸ್ಪರ್ಧೆ ವೇಳೆ ಸಾವನ್ನಪ್ಪಿದ ವ್ಯಕ್ತಿ
ಇಡ್ಲಿ ತಿನ್ನುವ ಸ್ಪರ್ಧೆ ವೇಳೆ ಸಾವನ್ನಪ್ಪಿದ ವ್ಯಕ್ತಿ
Updated on
ಚೆನ್ನೈ: ಇಡ್ಲಿ ತಿನ್ನುವ ಸ್ಪರ್ಧೆ ವೇಳೆ ತಿಂದ ಇಡ್ಲಿ ಗಂಟಲ್ಲಲ್ಲಿ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಪುದುಕೋಟೈನಲ್ಲಿ ಗುರುವಾರ ನಡೆದಿದೆ.
ತಮಿಳುನಾಡಿನ ಸಾಂಪ್ರದಾಯಿಕ ಹಬ್ಬ ಪೊಂಗಲ್ ನಿಮಿತ್ತ ಪುದುಕೋಟೈ ಜಿಲ್ಲೆಯಲ್ಲಿ 'ಕಾಣುಂ ಪೊಂಗಲ್‌' ಅಂಗವಾಗಿ ಭಾರತೀಯಾರ್ ಯೂಥ್ ಅಸೋಸಿಯೇಷನ್ ಏರ್ಪಡಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವ್ಯಕ್ತಿ  ಇಡ್ಲಿ ತಿಂದು ಸಾವನ್ನಪ್ಪಿದ್ದಾನೆ. ಮೃತನನ್ನು 42 ವರ್ಷದ ಚಿನ್ನತಂಬಿ ಎಂದು ಗುರುತಿಸಲಾಗಿದ್ದು, ಆತ ವೃತ್ತಿಯಲ್ಲಿ ಅಡುಗೆ ಭಟ್ಟನಾಗಿದ್ದನಂತೆ.
ಮೂಲಗಳ ಪ್ರಕಾರ ಪುದುಕೋಟೈನ ಪಂಡಿಕುಡಿ ಗ್ರಾಮದಲ್ಲಿ 'ಕಾಣುಂ ಪೊಂಗಲ್' ಅಂಗವಾಗಿ ಹಲವಾರು ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಇಡ್ಲಿ ತಿನ್ನುವ ಸ್ಪರ್ಧೆ ಕೂಡ ಸೇರಿತ್ತು. ಈ ಸ್ಪರ್ಧೆಯಲ್ಲಿ ಚಿನ್ನತಂಬಿ  ಉತ್ಸಾಹದಿಂದಲೇ ಭಾಗವಹಿಸಿದ್ದರು. 12 ಇಡ್ಲಿಯನ್ನು ತಿನ್ನುವ ಮೂಲಕ ಸ್ಪರ್ಧೆಯಲ್ಲಿ ಮುಂಚಿತವಾಗಿದ್ದ ಚಿನ್ನತಂಬಿ ಅವರಿಗೆ ಅದೇ ಇಡ್ಲಿ ಅವರ ಸಾವಿಗೆ ಕಾರಣವಾಗುತ್ತದೆ ಎಂದು ತಿಳಿಯಲಿಲ್ಲ. ಸ್ಪರ್ಧೆಯಲ್ಲಿ ಜಯಿಸಬೇಕೆನ್ನುವ  ಕಾರಣಕ್ಕೆ ಹೆಚ್ಚೆಚ್ಚು ಇಡ್ಲಿಗಳನ್ನು ಬಾಯಿಗೆ ಹಾಕಿಕೊಂಡಿದ್ದಾರೆ. ಈ ವೇಳೆ ಇಡ್ಲಿ ಗಂಟಲಿನಲ್ಲಿ ಸಿಕ್ಕಿ ಹಾಕಿ ಕೊಂಡು, ಸ್ಥಳದಲ್ಲಿಯೇ ಕುಸಿದರು. 
ಕೂಡಲೇ ಸ್ಥಳೀಯರು ಹಾಗೂ ಆಯೋಜಕರು ಆಂಬ್ಯುಲೆನ್ಸ್‌ಗೆ ಫೋನ್‌ ಮಾಡಿದರು.. ಆ್ಯಂಬುಲೆನ್ಸ್ ಬರುವ ವೇಳೆ ಚಿನ್ನತಂಬಿ ಕೊನೆಯುಸಿರೆಳೆದಿದ್ದರು. ಚಿನ್ನತಂಬಿಗೆ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಸ್ಥಳೀಯ  ಶಾಸಕರು ಚಿನ್ನತಂಬಿ ಕುಟುಂಬಕ್ಕೆ ಪರಿಹಾರ ಕೂಡ ನೀಡುವುದಾಗಿ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com