ಬಿಹಾರ ಉಪ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮಾಧ್ಯಮಗಳಿಗೆ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶರದ್ ಯಾದವ್ ಅವರು, ಈ ಹಿಂದೆ ನಾನು ಕೈಗೊಂಡಿದ್ದ ನಿರ್ಧಾರಕ್ಕೆ ಹಾಲಿ ಉಪ ಚುನಾವಣಾ ಫಲಿತಾಂಶ ಸಮರ್ಥನೀಯವಾಗಿದೆ ಎಂದು ಹೇಳಿದ್ದಾರೆ. ಫಲಿತಾಂಶ ಬಿಜೆಪಿ ಸಖ್ಯ ತೊರೆದ ನನ್ನ ನಿರ್ಧಾರ ಸೂಕ್ತವಾಗಿತ್ತು ಎಂಬುದನ್ನು ತೋರಿಸುತ್ತಿದ್ದು, ವಿಪಕ್ಷಗಳ ಏಕತೆಗೆ ಸಂದ ಗೆಲುವಾಗಿದೆ ಎಂದು ಹೇಳಿದ್ದಾರೆ.