ಪ್ರಮುಖವಾಗಿ ಇಡೀ ಕಾಶ್ಮೀರ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಸಾಯಿಸಿದ್ದೀರಿ. ಇದು ಜನರನ್ನೇ ಹತ್ಯೆ ಮಾಡಿದಂತೆ. ಆತನನ್ನು ಹತ್ಯೆ ಮಾಡಿದ ನೀವು, ನಮ್ಮೆಲ್ಲರನ್ನೇಕೆ ಹತ್ಯೆ ಮಾಡುತ್ತಿಲ್ಲ. ಇಮ್ತಿಯಾಜ್ ಅವರನ್ನೇ ನಂಬಿ ಬದುಕುತ್ತಿದ್ದ ಅವರ ತಾಯಿ, ತಂದೆ, ಸಹೋದರನನ್ನೇಕೆ ಹತ್ಯೆ ಮಾಡಲಿಲ್ಲ. ಬನ್ನಿ ನಮ್ಮೆಲ್ಲರನ್ನೂ ಸಾಯಿಸಿ. ಅವರನ್ನು ಬಿಟ್ಟು ನಮಗೆ ಬದುಕಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಮ್ಮ ದುಃಖವನ್ನು ಹೇಳಿಕೊಂಡಿದ್ದಾರೆ.