ತಮಿಳುನಾಡು ಸರ್ಕಾರವು ದ್ವಿಭಾಷಾ ಸೂತ್ರವನ್ನು ಮುಂದುವರಿಸಲಿದೆ ಎಂದು ಹೇಳಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ತಮಿಳು ಭಾಷೆಯ ಸರಣಿ ಟ್ವೀಟ್ ಮಾಡಿದ್ದು "ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ ಅರ್ಥವೇನು?ಕೇಂದ್ರ ಸರ್ಕಾರ ಹಿಂದಿ ಕಡ್ಡಾಯ ಆಗಿಸಲು ಬಯಸುತ್ತಿದೆ, ಹಿಂದಿ ಭಾಷೆ ಕಡ್ಡಾಯ ವಿಷಯವಾಗಿದ್ದರೆ ಇದು ಅವರ ಹಿಂದಿ ಹೇರಿಕೆಯ ಸಾಕ್ಷಿಯಾಗಲಿದೆ" ಅವರು ಹೇಳಿದ್ದಾರೆ. ಅಲ್ಲದೆ "ಹಿಂದಿ ಹೇರಿಕೆಯ ಮೂಲಕ ಬಿಜೆಪಿ ಸರ್ಕಾಅದ ನೈಜ ಮುಖ ಹೊರಹೊಮ್ಮುತ್ತಿದೆ" ಎಂದೂ ಚಿದಂಬರಂ ಹೇಳಿದರು.