ಕೊಯಂಬತ್ತೂರು: ಚಿನ್ನದ ಆಭರಣಕ್ಕಾಗಿ ದಿವ್ಯಾಂಗ ಮಹಿಳೆಯೊಬ್ಬರ ಕಿವಿ ಕತ್ತರಿಸಿರುವ ಕಿರಾತಕರು, ಆಭರಣ ದೋಚಿ ನಂತರ ಕೊಲೆ ಮಾಡಿರುವ ಅಮಾನವೀಯ ಘಟನೆ ಮೈಲೇರಿಪಾಲಯಂ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.ಇದಕ್ಕೂ ಮುನ್ನ ದಿವ್ಯಾಂಗ ಮಹಿಳೆಯ ಕಿರಾಣಿ ಅಂಗಡಿಗೆ ಬೆಂಕಿ ಹಚ್ಚಿ ಕ್ರೂರತನ ಮೆರೆದಿದ್ದಾರೆ.
ತಿರುವಳ್ಳೂರು ಜಿಲ್ಲೆಯ ಮನಾಲಿ ನಿವಾಸಿ ದೇವಾಗಿ (45) ಮೃತ ಮಹಿಳೆ.ತಡರಾತ್ರಿ 2-30 ರ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಹೊತ್ತಿ ಉರಿಯುತ್ತಿದ್ದ ಕಿರಾಣಿ ಅಂಗಡಿ ಬಗ್ಗೆ ನೆರೆಹೊರೆಯವರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ದೇವಾಗಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಆಕೆಯ ಕತ್ತನ್ನು ಕತ್ತರಿಸಿ ಚಿನ್ನದ ಆಭರಣ ಕಳ್ಳತನವಾಗಿರುವುದು ಕಂಡುಬಂದಿದೆ. ಒಂದು ಸವಾರಿನ್ ನ ಚಿನ್ನದ ಸ್ಟಡ್ ಕಳ್ಳತನವಾಗಿರುವುದಾಗಿ ಆಕೆಯ ಸಂಬಂಧಿಕರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಗಳು ಮಹಿಳೆಯನ್ನು ಕೊಂದು ಹತ್ಯೆ ಮಾಡಿರುವುದು ಕಂಡುಬಂದಿದೆ. ಮನೆಗೆ ಹಚ್ಚಿ ಹಾನಿ ಮಾಡಿರುವುದಕ್ಕೆ ಸಾಕ್ಷ್ಯಧಾರ ದೊರೆತಿವೆ. ಹಂತಕರು ಮೆಣಸಿನ ಪುಡಿಯನ್ನು ಸ್ಥಳದಲ್ಲಿ ಎರಚಿದ್ದಾರೆ. ಸ್ಥಳದಲ್ಲಿ ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
Advertisement