ಬೆಂಗಳೂರು: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆ.06 ರಂದು ರಾತ್ರಿ ನಮ್ಮನ್ನು ಅಗಲಿದ್ದಾರೆ. ಅಗಾಧ ಪಾಂಡಿತ್ಯ, ಜನತೆಯೆಡೆಗೆ ಸೂಕ್ಷ್ಮ ಸಂವೇದನೆ, ಸ್ಪಂದನೆ ಹೊಂದಿದ್ದ ಅವರಿಗೆ ಕರ್ನಾಟಕದ ಜೊತೆ ಅವಿನಾಭಾವ ನಂಟು ಇತ್ತು. 1999 ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಯಲ್ಲಿ ಕನ್ನಡದಲ್ಲೇ ಮಾತನಾಡಿ ಜನ ಮನ ಗೆದ್ದಿದ್ದರು.