ಇದೇ ವೇಳೆ ಚೀನಾದ ನಡೆಯನ್ನೂ ಟೀಕಿಸಿರುವ ಕಾಂಗ್ರೆಸ್, ಪುಲ್ವಾಮ ಉಗ್ರ ದಾಳಿ ಹಿಂದೆ ಮಸೂದ್ ಅಜರ್ ಮತ್ತು ಆತನ ಸಂಘಟನೆಯ ಪಾತ್ರವಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೂ ಚೀನಾ ಪದೇ ಪದೇ ಭಾರತದ ಪ್ರಯತ್ನಕ್ಕೆ ತಡೆ ನೀಡುವುದು ಸರಿಯಲ್ಲ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಇದು ಹಿನ್ನಡೆಯಾಗಿದೆ. ಇದು ಮೋದಿ ಸರ್ಕಾರದ ವಿದೇಶಾಂಗ ನೀತಿ ಸರಣಿ ವೈಫಲ್ಯ ಹೊಂದುತ್ತಿದೆ ಎಂದು ಟೀಕಿಸಿದ್ದಾರೆ.