ತಿರುಪತಿ: ಕೊರೋನಾ ವೈರಸ್ ಲಾಕ್'ಡೌನ್ ಪರಿಣಾಮ ಮಾ.20ರಿಂದ ಭಕ್ತರ ಪಾಲಿಗೆ ಬಂದ್ ಆಗಿದ್ದ ತಿರುಮಲದ ವೆಂಕಟೇಶ್ವರ ದೇವಾಲಯ ಜೂನ್.8ರಿಂದು ಬಾಗಿಲು ತೆರೆಯಲಿದೆ.
ದೇವಾಲಯ ಬಾಗಿಲು ತೆರೆದ ಮೊದಲಿನ 3 ದಿನ ಪ್ರಾಯೋಗಿಕವಾಗಿ ಕೇವಲ ಸಿಬ್ಬಂದಿಗೆ ವೆಂಕಟೇಶನ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಕೊರೋನಾ ವೈರಸ್ ಹರಡುವಿಕೆಗಾಗಿ ಮುನ್ನೆಚ್ಚರಿಕೆ ಕ್ರಮ ಜರುಗಿಸಲಾಗಿದೆ. ಪ್ರತಿ ಭಕ್ತರ ನಡುವೆ 6 ಅಡಿ ಅಂತರ ಇರುವಂತೆ ಸರದಿ ಸಾಲನ್ನು ನಿಯೋಜಿಸಲಾಗುತ್ತದೆ. ಜೂನ್8 ರಿಂದ 2-3 ದಿನ ಕೇವಲ ದೇಗುಲ ಸಿಬ್ಬಂದಿಗೆ ಈ ಮಾದರಿಯಲ್ಲಿ ಸರದಿ ಸಾಲಿನಲ್ಲಿ ಆಗಮಿಸುವಂತೆ ಅವಕಾಶ ನೀಡಿ ದರ್ಶನ ಮಾಡಿಸಲಾಗುತ್ತದೆ ಎಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಮಂಗಳವಾರ ತಿಳಿಸಿದ್ದಾರೆ.
Advertisement