ಚೆನ್ನೈ: ಅತಿವೇಗದ ಕಾರು ಡಿಕ್ಕಿ; ಇಬ್ಬರು ಮಹಿಳಾ ಟೆಕ್ಕಿಗಳ ದುರ್ಮರಣ

ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳಾ ಸಾಫ್ಟ್‌ವೇರ್ ಟೆಕ್ಕಿಗಳು ಸಾವನ್ನಪ್ಪಿರುವ ಘಟನೆ ಇಂದು ಇಲ್ಲಿನ ಒಎಂಆರ್‌ ನಲ್ಲಿ ನಡೆದಿದೆ.
ಲಕ್ಷ್ಮೀ-ಲಾವಣ್ಯ
ಲಕ್ಷ್ಮೀ-ಲಾವಣ್ಯ

ಚೆನ್ನೈ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳಾ ಸಾಫ್ಟ್‌ವೇರ್ ಟೆಕ್ಕಿಗಳು ಸಾವನ್ನಪ್ಪಿರುವ ಘಟನೆ ಇಂದು ಇಲ್ಲಿನ ಒಎಂಆರ್‌ ನಲ್ಲಿ ನಡೆದಿದೆ.

ಕಾರು ಚಾಲಕನ ನಿಯಂತ್ರಣ ತಪ್ಪಿ ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಕಾರು ಡಿಕ್ಕಿ ಹೊಡೆದಿದ್ದು ಈ ಘಟನೆ ನಡೆದಿದೆ.

ಅಪಘಾತದ ವೇಳೆ ಸ್ಥಳದಲ್ಲೇ ಒಬ್ಬರು ಮೃತಪಟ್ಟಿದ್ದು ಇನ್ನೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಪಾಲಕ್ಕಾಡ್‌ನ 23 ವರ್ಷದ ಆರ್ ಲಕ್ಷ್ಮಿ ಮತ್ತು 24 ವರ್ಷದ ತಿರುಪತಿಯ ಎಸ್ ಲಾವಣ್ಯ ಗುರುತಿಸಲಾಗಿದೆ.

ಕಾರು ಚಾಲಕ ಶೋಲಿಂಗನಲ್ಲೂರಿನ ಎಂ.ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.

ಮತ್ತೊಂದು ಘಟನೆಯಲ್ಲಿ ಇಂದು ನೆರೆಯ ತಿರುಪತ್ತೂರು ಜಿಲ್ಲೆಯ ಅಂಬರ್ ಬಳಿ ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದು ಇಬ್ಬರು ಶಾಲಾ ಬಾಲಕಿಯರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com