ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸಿ ಫತ್ವಾ; ಜೀವ ಬೆದರಿಕೆ ಹೊರತಾಗಿಯೂ ಗಣೇಶ ಕೂರಿಸಿ ವಿಸರ್ಜಿಸಿದ 'ರೂಬಿ ಆಸಿಫ್ ಖಾನ್'!

ಮುಸ್ಲಿಂ ಧರ್ಮಗುರುಗಳ ವಿರೋಧದ ಹೊರತಾಗಿಯೂ ತಮ್ಮ ನಿವಾಸದಲ್ಲಿ ಗಣೇಶ ಕೂರಿಸಿ ವಿಸರ್ಜಿಸಿದ ಉತ್ತರ ಪ್ರದೇಶ ಬಿಜೆಪಿ ನಾಯಕಿ 'ರೂಬಿ ಆಸಿಫ್ ಖಾನ್' ಅವರು ಇದೀಗ ಜೀವಬೆದರಿಕೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ಗಣೇಶ ಮೂರ್ತಿ ವಿಸರ್ಜನೆಯಲ್ಲಿ ರೂಬಿ ಆಸಿಫ್ ಖಾನ್
ಗಣೇಶ ಮೂರ್ತಿ ವಿಸರ್ಜನೆಯಲ್ಲಿ ರೂಬಿ ಆಸಿಫ್ ಖಾನ್
Updated on

ಅಲಿಘಡ: ಮುಸ್ಲಿಂ ಧರ್ಮಗುರುಗಳ ವಿರೋಧದ ಹೊರತಾಗಿಯೂ ತಮ್ಮ ನಿವಾಸದಲ್ಲಿ ಗಣೇಶ ಕೂರಿಸಿ ವಿಸರ್ಜಿಸಿದ ಉತ್ತರ ಪ್ರದೇಶ ಬಿಜೆಪಿ ನಾಯಕಿ 'ರೂಬಿ ಆಸಿಫ್ ಖಾನ್' ಅವರು ಇದೀಗ ಜೀವಬೆದರಿಕೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಅಲಿಘಢದಲ್ಲಿರುವ ತಮ್ಮ ನಿವಾಸದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಕ್ಕಾಗಿ ಬಿಜೆಪಿ ನಾಯಕಿ ರೂಬಿ ಆಸಿಫ್ ಖಾನ್‌ಗೆ ಜೀವ ಬೆದರಿಕೆ ಮತ್ತು ಫತ್ವಾ ಹೊರಡಿಸಲಾಗಿತ್ತು. ಜೀವ ಬೆದರಿಕೆ ಕರೆಗಳ ನಡುವೆಯೇ ಭಾರೀ ಭದ್ರತೆಯೊಂದಿಗೆ ಅವರು ನರೋರಾ ಘಾಟ್‌ನಲ್ಲಿ ಭಕ್ತಿ ಶ್ರದ್ಧೆಯೊಂದಿಗೆ ವಿಗ್ರಹವನ್ನು ನಿಮಜ್ಜನ ಮಾಡಿದ್ದಾರೆ. ಈ ವೇಳೆ ಆಕೆಯ ಇಬ್ಬರು ಸಹೋದರಿಯರು ಮತ್ತು ಆಕೆಯ ಪತಿ ಆಸಿಫ್ ಜೊತೆಗಿದ್ದರು.

ತಮ್ಮ ನಿವಾಸದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದಂದಿನಿಂದ ರೂಬಿ ಆಸಿಫ್ ಖಾನ್ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದರು. ಇದೇ ವಿಚಾರವಾಗಿ ಮಾತನಾಡಿದ್ದ ರೂಬಿ, ಫತ್ವಾ ಮತ್ತು ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನಾನು ನರೋರಾ ಘಾಟ್‌ನಲ್ಲಿ ಗಣೇಶನ ವಿಗ್ರಹವನ್ನು ನಿಮಜ್ಜನಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ. ನಾನು ಆಗಸ್ಟ್ 31 ರಂದು ನನ್ನ ನಿವಾಸದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದೇನೆ. ಅಂದಿನಿಂದ ಈ ಫತ್ವಾ ಹೊರಡಿಸಲಾಗಿದೆ. ಮೌಲಾನಾಗಳು (ಮೌಲ್ವಿಗಳು)ನಾನು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಕಾರಣ ಹಿಂದೂ ಆಗಿದ್ದೇನೆ ಎಂದು ಹೇಳುತ್ತಿದ್ದಾರೆ. ನನಗೆ ಇಸ್ಲಾಂ ಧರ್ಮದಿಂದ ಬಹಿಷ್ಕರಿಸುವ ಮತ್ತು ನನ್ನ ಕುಟುಂಬವನ್ನು ಜೀವಂತವಾಗಿ ಸುಡುವ ಬೆದರಿಕೆಗಳು ಬರುತ್ತಿವೆ. ನಾನು ಹೊರಗೆ ಹೋದಾಗ, ಜನರು ನನ್ನನ್ನು ಹಿಂದೂ ಎಂದು ಕರೆಯುತ್ತಾರೆ ಎಂದು ಕರೆಯುತ್ತಿದ್ದಾರೆ.

ಧರ್ಮಗುರುಗಳು ಆಕೆಯ ವಿರುದ್ಧ ಫತ್ವಾ ಹೊರಡಿಸಿ ಇಸ್ಲಾಂ ಧರ್ಮದಿಂದ ಬಹಿಷ್ಕಾರ ಹಾಕುವಂತೆ ಕರೆ ನೀಡಿದ್ದಾರೆ. ಜಿಲ್ಲಾಡಳಿತವನ್ನು ಭದ್ರತೆಗಾಗಿ ಕೇಳಿದ್ದೇನೆ ಆದರೆ ಇಲ್ಲಿಯವರೆಗೆ ನನಗೆ ಭದ್ರತೆಯನ್ನು ಒದಗಿಸಿಲ್ಲ ಆದರೆ ನನ್ನ ಮನೆಗೆ ದಿನಕ್ಕೆ ಎರಡು ಅಥವಾ ಮೂರು ಗಂಟೆಗಳ ಕಾಲ ಪೊಲೀಸ್ ಪೇದೆ ಬರುತ್ತಾನೆ. ಇವತ್ತಿಗೆ ನನ್ನ ಭದ್ರತೆಗೆ ಪೊಲೀಸ್ ಠಾಣೆಯಿಂದ ಇಬ್ಬರು ಅಧಿಕಾರಿಗಳನ್ನು ಕಳುಹಿಸಲಾಗಿದೆ. ಅಂತೆಯೇ ತಾನು ಫತ್ವಾಗಳಿಗೆ ಹೆದರುವುದಿಲ್ಲ ಎಂದು ಹೇಳುವ ಮೂಲಕ ಗಣೇಶನ ವಿಗ್ರಹವನ್ನು ಪೂಜಿಸುವುದು ಮತ್ತು ಪ್ರತಿಷ್ಠಾಪಿಸುವುದನ್ನು ಮುಂದುವರಿಸುವುದಾಗಿ ಅವರು ಹೇಳಿದರು.

ನಮ್ಮ ಕುಟುಂಬ ಎಲ್ಲ ಹಬ್ಬಗಳನ್ನು ಅಚರಿಸುತ್ತೇವೆ. ಹೀಗಾಗಿ ಗಣೇಶ ಹಬ್ಬವನ್ನೂ ನಾವು ಅಚರಿಸಿದ್ದು, ಇದಕ್ಕೆ ಕುಟಂಬ ಸದಸ್ಯರು ಎಂದಿಗೂ ವಿರೋಧಿಸಿಲ್ಲ. ಈ ಹಿಂದೆ ರಾಮ ಮಂದಿರದ ಶಂಕುಸ್ಥಾಪನೆ ಬಳಿಕ ತನ್ನ ನಿವಾಸದಲ್ಲಿ ಪೂಜೆ ಸಲ್ಲಿಸಿದಾಗಲೂ ಇದೇ ರೀತಿಯ ಕ್ರಮ ಎದುರಿಸಬೇಕಾಯಿತು ಎಂದು ಬಿಜೆಪಿ ನಾಯಕಿ ಹೇಳಿದ್ದಾರೆ.

''7 ದಿನಗಳ ಕಾಲ ನನ್ನ ಮನೆಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದೇನೆ ಮತ್ತು ಅದನ್ನು ಶ್ರದ್ಧೆಯಿಂದ ನಿಮಜ್ಜನ ಮಾಡುತ್ತೇನೆ, ರಾಮಮಂದಿರದ ಶಂಕುಸ್ಥಾಪನೆ ಮಾಡಿದ ನಂತರವೂ ನಾನು ನನ್ನ ಮನೆಯಲ್ಲಿ ಪೂಜೆ ಮಾಡಿದ್ದೇನೆ ನಂತರ ನನ್ನ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಅವರೆಲ್ಲರೂ ನನ್ನ ವಿರುದ್ಧ ನಿಂತಿದ್ದಾರೆ. ಈಗ ಈ ಜನರು ನನ್ನನ್ನು ಕೊಲ್ಲಲು ಬಯಸುತ್ತಿದ್ದಾರೆ. ನನಗೆ ಬೆದರಿಕೆಗಳು ಬರುತ್ತಿವೆ. ನಾನು ಹೆದರುವವಳಲ್ಲ. ನಾನು ಗಣೇಶನನ್ನು ಮುಳುಗಿಸುತ್ತೇನೆ. ನನ್ನ ಪತಿ ನನ್ನೊಂದಿಗಿದ್ದಾನೆ" ಎಂದು ರೂಬಿ ಖಾನ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com