ತಮಿಳುನಾಡು: ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳ್ಇಸೈ ಸೌಂದರರಾಜನ್ ಬಿಜೆಪಿ ಸೇರ್ಪಡೆ

ತೆಲಂಗಾಣ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ ತಮಿಳ್ಇಸೈ ಸೌಂದರರಾಜನ್ ಅವರು ತಮಿಳುನಾಡಿನಲ್ಲಿ ಇಂದು ಬಿಜೆಪಿಗೆ ಮರುಸೇರ್ಪಡೆಗೊಂಡಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಚೆನ್ನೈನಲ್ಲಿರುವ ಪಕ್ಷದ ಕೇಂದ್ರ ಕಚೇರಿ ‘ಕಮಲಾಲಯ’ದಲ್ಲಿ ಸೌಂದರರಾಜನ್ ಅವರಿಗೆ ಪಕ್ಷದ ಸದಸ್ಯತ್ವದ ಕಾರ್ಡ್ ನೀಡಿದರು.
ತಮಿಳ್ಇಸೈ ಸೌಂದರರಾಜನ್
ತಮಿಳ್ಇಸೈ ಸೌಂದರರಾಜನ್
Updated on

ಚೆನ್ನೈ: ತೆಲಂಗಾಣ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ ತಮಿಳ್ಇಸೈ ಸೌಂದರರಾಜನ್ ಅವರು ತಮಿಳುನಾಡಿನಲ್ಲಿ ಇಂದು ಬಿಜೆಪಿಗೆ ಮರುಸೇರ್ಪಡೆಗೊಂಡಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಚೆನ್ನೈನಲ್ಲಿರುವ ಪಕ್ಷದ ಕೇಂದ್ರ ಕಚೇರಿ ‘ಕಮಲಾಲಯ’ದಲ್ಲಿ ಸೌಂದರರಾಜನ್ ಅವರಿಗೆ ಪಕ್ಷದ ಸದಸ್ಯತ್ವದ ಕಾರ್ಡ್ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಮಿಳ್ಇಸೈ ಸೌಂದರರಾಜನ್, ತಮ್ಮ ಹುದ್ದೆ ತೊರೆಯುವುದು ಕಠಿಣ ನಿರ್ಧಾರವಾಗಿದ್ದರೂ, ಪಕ್ಷಕ್ಕಾಗಿ ಮತ್ತೆ ಕೆಲಸ ಮಾಡಲು ಸಂತೋಷವಾಗಿದೆ. ವನತಿ ಶ್ರೀನಿವಾಸನ್ ಇಲ್ಲಿ ಕುಳಿತುಕೊಳ್ಳುತ್ತಿದ್ದರು. ಅವರು ರಾಜಕೀಯದಲ್ಲಿ ಯಶಸ್ವಿಯಾದ ಮಹಿಳೆಗೆ ಉದಾಹರಣೆಯಾಗಿದ್ದಾರೆ. ಇದು ಅತ್ಯಂತ ಸಂತೋಷದ ದಿನ. ಇದು ಕಠಿಣ ನಿರ್ಧಾರವಾಗಿತ್ತು' ಎಂದು ಅವರು ಹೇಳಿದರು.

'ರಾಜ್ಯಪಾಲರಾಗಿ ನನಗೆ ಹಲವು ಸೌಲಭ್ಯಗಳು ಇದ್ದವು. ಆದರೆ, ನಾನು ಒಂದು ಪರ್ಸೆಂಟ್ ಕೂಡ ಪಶ್ಚಾತ್ತಾಪ ಪಡುವುದಿಲ್ಲ. ನಾನು ತೆಲಂಗಾಣದಲ್ಲಿ ಹಲವು ಸವಾಲುಗಳನ್ನು ಕಂಡಿದ್ದೇನೆ. ನಾನು ರಾಜ್ಯಪಾಲರಾಗಿದ್ದ ಸಮಯದಲ್ಲಿ ನಾಲ್ವರು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ತಮಿಳುನಾಡಿನಲ್ಲಿ ಕಮಲ ಅರಳುವುದು ಖಚಿತ' ಎಂದರು.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಮಾತನಾಡಿ, ರಾಜ್ಯಕ್ಕೆ ಕೊಡುಗೆ ನೀಡಲು ಬಯಸಿದ್ದರಿಂದ ತಮಿಳ್ಇಸೈ ಅವರು ತಮ್ಮ ಸ್ಥಾನವನ್ನು ತೊರೆದಿದ್ದಾರೆ ಎಂದು ಹೇಳಿದರು.

'ಇದು ಸುಲಭದ ನಿರ್ಧಾರವಾಗಿರಲಿಲ್ಲ. ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಆದ್ದರಿಂದ ತಮಿಳಿಸೈ ರಾಜಕೀಯದಲ್ಲಿ ಇರಲು ಬಯಸುತ್ತಾರೆ ಮತ್ತು ಬಿಜೆಪಿಗೆ ಕೊಡುಗೆ ನೀಡಲು ಬಯಸುತ್ತಾರೆ. ನಿನ್ನೆ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಇಂದು ಅವರು ಮತ್ತೆ ಬಿಜೆಪಿ ಕೇಡರ್‌ಗೆ ಸೇರಿದ್ದಾರೆ' ಎಂದು ತಿಳಿಸಿದರು.

ತಮಿಳ್ಇಸೈ ಸೌಂದರರಾಜನ್
Tamilisai Soundararajan: ತೆಲಂಗಾಣ, ಪುದುಚೇರಿ ರಾಜ್ಯಪಾಲೆ ತಮಿಳ್​ಇಸಯ್ ಸೌಂದರ್ ರಾಜನ್ ರಾಜೀನಾಮೆ; ಲೋಕಸಭೆಗೆ ಸ್ಪರ್ಧೆ?

'ಇದು ಅವರು (ತಮಿಳಿಸೈ) ಜನರನ್ನು ಮತ್ತು ಬಿಜೆಪಿ ಪಕ್ಷವನ್ನು ಹೇಗೆ ಪ್ರೀತಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಕಿಶನ್ ರೆಡ್ಡಿ ಅವರು ಮೈತ್ರಿ ಮತ್ತು ಸೀಟು ಹಂಚಿಕೆ ಮಾತುಕತೆಗಾಗಿ ಐದು ದಿನಗಳಿಂದ ಚೆನ್ನೈನಲ್ಲಿದ್ದಾರೆ. ತಮಿಳಿಸೈ ಅವರು ಸಾಕಷ್ಟು ಆಡಳಿತಾತ್ಮಕ ಅನುಭವದೊಂದಿಗೆ ಬಂದಿದ್ದಾರೆ. ನಾವು ಅವರನ್ನು ನಮ್ಮ ಪಕ್ಷಕ್ಕೆ ಮರಳಿ ಸ್ವಾಗತಿಸುತ್ತೇವೆ' ಎಂದರು.

ಈಮಧ್ಯೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಸೌಂದರರಾಜನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಸದ್ಯ ಜಾರ್ಖಂಡ್‌ನ ರಾಜ್ಯಪಾಲರಾದ ಸಿಪಿ ರಾಧಾಕೃಷ್ಣನ್ ಅವರನ್ನು ಹೆಚ್ಚುವರಿಯಾಗಿ ತೆಲಂಗಾಣದ ಗವರ್ನರ್ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ.

ಇದಕ್ಕೂ ಮುನ್ನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಎಂಕೆ ಸ್ಟಾಲಿನ್ 2024ರ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು. ಸ್ಟಾಲಿನ್ ಪಕ್ಷದ ಪ್ರಣಾಳಿಕೆಯನ್ನು ಪ್ರಕಟಿಸಿದರು ಮತ್ತು ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ದೇಶವನ್ನು ನಾಶಪಡಿಸಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com