ಪಶ್ಚಿಮ ಬಂಗಾಳದಲ್ಲಿ ಮಹತ್ವದ ಬೆಳವಣಿಗೆ: ಬಿಜೆಪಿಗೆ ದೀದಿ ಸೋದರಳಿಯ?

ಪಶ್ಚಿಮ ಬಂಗಾಳದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸೋದರ ಅಳಿಯ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಜೆಪಿಗೆ ಸೇರುವ ಸಾಧ್ಯತೆಯ ಬಗ್ಗೆ ವರದಿಗಳು ಪ್ರಕಟವಾಗಿದೆ.
Abhishek Banerjee with Mamata banerjee
ಮಮತಾ ಬ್ಯಾನರ್ಜಿ ಜೊತೆ ಅವರ ಸೋದರ ಅಳಿಯ ಅಭಿಷೇಕ್ ಬ್ಯಾನರ್ಜಿonline desk
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸೋದರ ಅಳಿಯ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಜೆಪಿಗೆ ಸೇರುವ ಸಾಧ್ಯತೆಯ ಬಗ್ಗೆ ವರದಿಗಳು ಪ್ರಕಟವಾಗಿದೆ.

ಈ ಊಹಾಪೋಹಗಳ ಬಗ್ಗೆ ಟಿಎಂಸಿ ಪ್ರಧಾನಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದು ವರದಿಗಳನ್ನು ಅಲ್ಲಗಳೆದಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಅಭಿಷೇಕ್ ಬ್ಯಾನರ್ಜಿ, ನಾನು ನನ್ನ ಕತ್ತು ಸೀಳಿದರೂ ಮಮತಾ ಬ್ಯಾನರ್ಜಿ ಜಿಂದಾಬಾದ್ ಎಂದು ಮಾತ್ರ ಹೇಳುತ್ತೇನೆ ಎಂದಿದ್ದಾರೆ.

"ಅಭಿಷೇಕ್ ಬ್ಯಾನರ್ಜಿ ಬಿಜೆಪಿ ಸೇರುತ್ತಾರೆ ಎಂಬ ಹೊಸ ಭ್ರಮೆಯನ್ನು ಮಾರುಕಟ್ಟೆಯಲ್ಲಿ ಹರಡಲಾಗುತ್ತಿದೆ. ನೀವು ನನ್ನ ಕತ್ತು ಸೀಳಿದರೂ, 'ಮಮತಾ ಬ್ಯಾನರ್ಜಿ ಜಿಂದಾಬಾದ್' ಎಂಬ ಘೋಷಣೆ ನನ್ನ ಬಾಯಿಂದ ಹೊರಬರುತ್ತದೆ..." ಎಂದು ಬ್ಯಾನರ್ಜಿ ಸಭೆಯನ್ನುದ್ದೇಶಿಸಿ ಹೇಳಿದರು. ಇದಲ್ಲದೆ, ಪಕ್ಷಕ್ಕೆ ಟಿಎಂಸಿ ನಾಯಕರ ಬೆಂಬಲವಿದ್ದರೆ, ಪಕ್ಷವು ಬಿಜೆಪಿಯ ಚಕ್ರವ್ಯೂಹವನ್ನು ಕೆಡವುತ್ತಲೇ ಇರುತ್ತದೆ ಎಂದು ಅವರು ಹೇಳಿದರು.

Abhishek Banerjee with Mamata banerjee
ಮಹಾ ಕುಂಭ ಮೇಳಕ್ಕೆ ಮಮತಾ ಬ್ಯಾನರ್ಜಿ ಅಪಮಾನ: ಜನತೆಯಿಂದ ತಕ್ಕ ಉತ್ತರ- ಬಿಜೆಪಿ

"ನೀವೆಲ್ಲರೂ (ಟಿಎಂಸಿ ನಾಯಕರು) ನಮ್ಮೊಂದಿಗಿರುವವರೆಗೆ, ನಾವು ಬಿಜೆಪಿಯ ಚಕ್ರವ್ಯೂಹವನ್ನು ಕೆಡವುತ್ತಲೇ ಇರುತ್ತೇವೆ... ಪಕ್ಷದ ವಿರುದ್ಧ ಮಾತನಾಡಿದವರನ್ನು ಗುರುತಿಸಲಾಗಿದೆ. ಪಕ್ಷದ ವಿರುದ್ಧ ಹೋದ ಮುಕುಲ್ ರಾಯ್ ಮತ್ತು ಸುವೇಂದು ಅಧಿಕಾರಿಯನ್ನು ಗುರುತಿಸಿದವನು ನಾನೇ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com