ಪೊಲೀಸ್ ತರಬೇತಿ ವೇಳೆ ಕುರಾನ್ ಪಠಣೆಗೆ ಮುಸ್ಲಿಂ ಗುಂಪುಗಳ ಒತ್ತಾಯ; ಭಗವದ್ಗೀತೆ ಪಠಣಕ್ಕೆ ತೀವ್ರ ವಿರೋಧ!

ಮಧ್ಯಪ್ರದೇಶದಲ್ಲಿ ಮುಸ್ಲಿಂ ಸಂಘಟನೆಗಳು ಪೊಲೀಸ್ ಅಕಾಡೆಮಿಗಳಲ್ಲಿ ತರಬೇತಿ ವೇಳೆ ಪ್ರತಿದಿನ ಕುರಾನ್ ಪಠಣೆ ಮಾಡಿಸಬೇಕೆಂದು ಆಗ್ರಹಿಸಿವೆ.
Bhagavad Gita- Police (file photo)
ಭಗವದ್ಗೀತೆ- ಪೊಲೀಸ್ (ಸಂಗ್ರಹ ಚಿತ್ರ)online desk
Updated on

ಭೋಪಾಲ್: ಪೊಲೀಸ್ ಅಕಾಡೆಮಿಗಳಲ್ಲಿ ತರಬೇತಿ ವೇಳೆ ಪ್ರತಿದಿನ ಕುರಾನ್ ಪಠಣೆಗೆ ಮುಸ್ಲಿಂ ಗುಂಪುಗಳು ಒತ್ತಾಯಿಸಿವೆ.

ಮಧ್ಯಪ್ರದೇಶದಲ್ಲಿ ಮುಸ್ಲಿಂ ಸಂಘಟನೆಗಳು ಪೊಲೀಸ್ ಅಕಾಡೆಮಿಗಳಲ್ಲಿ ತರಬೇತಿ ವೇಳೆ ಪ್ರತಿದಿನ ಕುರಾನ್ ಪಠಣೆ ಮಾಡಿಸಬೇಕೆಂದು ಆಗ್ರಹಿಸಿವೆ. ಅಖಿಲ ಭಾರತ ಮುಸ್ಲಿಂ ಸಮಿತಿಯ ಸಂಚಾಲಕ ಶಮ್ಸುಲ್ ಹಸನ್, ಪೊಲೀಸ್ ತರಬೇತಿಯಲ್ಲಿ ಗೀತಾ ಪಠಣ ಸೇರಿಸಬಹುದಾದರೆ, ಕುರಾನ್ ಬೋಧನೆಗಳನ್ನು ಸಹ ಪರಿಚಯಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದಕ್ಕೂ ಮೊದಲು ಪೊಲೀಸ್ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿರುವ ಪೊಲೀಸ್ ಕಾನ್‌ಸ್ಟೆಬಲ್‌ಗಳು ಪ್ರತಿದಿನ ಭಗವದ್ಗೀತೆಯನ್ನು ಓದಬೇಕೆಂದು ನಿರ್ದೇಶನ ನೀಡಲಾಗಿತ್ತು. ಭಗವದ್ಗೀತೆ ಓದುವುದಕ್ಕೆ ನಿಡಿದ್ದ ಆದೇಶಕ್ಕೆ ಮುಸ್ಲಿಂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹೆಚ್ಚುವರಿ ಮಹಾನಿರ್ದೇಶಕ (ತರಬೇತಿ) ರಾಜಬಾಬು ಸಿಂಗ್ ಹೊರಡಿಸಿದ ಆದೇಶದ ಪ್ರಕಾರ, ಕಾನ್‌ಸ್ಟೆಬಲ್‌ಗಳು ಒಂದು ತಿಂಗಳ ಕಾಲ ಪ್ರತಿದಿನ ಭಗವದ್ಗೀತೆಯ ಕನಿಷ್ಠ ಒಂದು ಅಧ್ಯಾಯವನ್ನು ಓದಬೇಕು ಎಂದು ಹೇಳಲಾಗಿದೆ.

Bhagavad Gita- Police (file photo)
ಮಧ್ಯಪ್ರದೇಶ: ದಲಿತ ಯುವಕನನ್ನು ಕ್ರೂರವಾಗಿ ಥಳಿಸಿ ಮೂತ್ರ ಕುಡಿಸಿ ಹಿಂಸೆ!

ಈ ಪದ್ಧತಿಯನ್ನು ಎಲ್ಲಾ ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ಜಾರಿಗೆ ತರಲಾಗುತ್ತಿದೆ. ದೈನಂದಿನ ಧ್ಯಾನ ಅವಧಿಗಳ ಮೊದಲು ಗೀತಾ ಪಠಣ ಅವಧಿಗಳನ್ನು ನಡೆಸಲಾಗುತ್ತಿದೆ. ಭಗವದ್ಗೀತೆಯನ್ನು ಓದುವುದು ತರಬೇತಿ ಪಡೆಯುವವರು ಹೆಚ್ಚು ಆಧ್ಯಾತ್ಮಿಕ ಜೀವನವನ್ನು ನಡೆಸಲು ಮತ್ತು ಭಗವಾನ್ ಕೃಷ್ಣನ ಬೋಧನೆಗಳಿಂದ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಪೊಲೀಸ್ ಇಲಾಖೆ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ಪೊಲೀಸ್ ತರಬೇತಿಯ ವೇಳೆ ಭಗವದ್ಗೀತೆ ಓದುವ ಆದೇಶವನ್ನು ಕಾಂಗ್ರೆಸ್ ಪಕ್ಷ ಟೀಕಿಸಿದೆ. ಸಂಸದ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಮುಖೇಶ್ ನಾಯಕ್ ಈ ಕ್ರಮವನ್ನು ಜಾತ್ಯತೀತ ತತ್ವಗಳ ಉಲ್ಲಂಘನೆ ಎಂದು ದೂರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com