Ghar wapsi': ಶೀಘ್ರದಲ್ಲೇ PoK ಭಾರತಕ್ಕೆ ಮರು ಸೇರ್ಪಡೆ: ಇಮಾಮ್ ಸಂಘಟನೆ ಮುಖ್ಯಸ್ಥ

ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಭಾಗವಾಗಿದ್ದು, ಭವಿಷ್ಯದಲ್ಲಿ ಅದು ಮತ್ತೆ ಭಾರತಕ್ಕೆ ವಿಲೀನವಾಗುವುದು ಅನಿವಾರ್ಯ. “ಇದು ಕೇವಲ ರಾಜಕೀಯ ವಿಚಾರವಲ್ಲ, ಇದು ದೇಶದ ಏಕತೆ ಮತ್ತು ಅಖಂಡತೆಯ ಪ್ರಶ್ನೆ. “ಘರ್ ವಾಪ್ಸಿ ಶೀಘ್ರದಲ್ಲೇ ನಡೆಯಲಿದೆ”
Chief Imam of the All India Imam Organisation Umer Ahmed Ilyasi
ಆಲ್ ಇಂಡಿಯಾ ಇಮಾಮ್ ಸಂಘಟನೆ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ
Updated on

ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರ (PoK) ಮತ್ತೆ ಭಾರತಕ್ಕೆ ಸೇರ್ಪಡೆಯಾಗಲಿದೆ ಎಂದು ಆಲ್ ಇಂಡಿಯಾ ಇಮಾಮ್ ಸಂಘಟನೆ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರು ಹೇಳಿದ್ದಾರೆ. ಈ ಹೇಳಿಕೆ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಭಾಗವಾಗಿದ್ದು, ಭವಿಷ್ಯದಲ್ಲಿ ಅದು ಮತ್ತೆ ಭಾರತಕ್ಕೆ ವಿಲೀನವಾಗುವುದು ಅನಿವಾರ್ಯ. “ಇದು ಕೇವಲ ರಾಜಕೀಯ ವಿಚಾರವಲ್ಲ, ಇದು ದೇಶದ ಏಕತೆ ಮತ್ತು ಅಖಂಡತೆಯ ಪ್ರಶ್ನೆ. “ಘರ್ ವಾಪ್ಸಿ ಶೀಘ್ರದಲ್ಲೇ ನಡೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಬದಲಾವಣೆಗಳನ್ನೂ ಅವರು ಶ್ಲಾಘಿಸಿದ್ದಾರೆ.

ಕಾಶ್ಮೀರದಲ್ಲಿ ನಿಂತು ನಾನು "ನಮ್ಮ ನೆರೆಯ ರಾಷ್ಟ್ರಕ್ಕೆ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ, ಭಾರತದ ಅವಿಭಾಜ್ಯ ಅಂಗವಾಗಿರುವ ಪಿಒಕೆ ಖಂಡಿತವಾಗಿಯೂ ಭಾರತಕ್ಕೆ ಮತ್ತೆ ಸೇರುತ್ತದೆ ಏಕೆಂದರೆ ಏಕೆಂದರೆ ಪಿಒಕೆ ಜನರು ಅಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಬಯಸುತ್ತಾರೆಂದು ಹೇಳಿದ್ದಾರೆ.

ಪಿಒಕೆ ನಿವಾಸಿಗಳು ಭಾರತದೊಂದಿಗೆ ಸೇರ್ಪಡೆಗೊಳ್ಳಲು ಬಯಸುತ್ತಾರೆ, "ದೇವರ ಇಚ್ಛಾಶಕ್ತಿ ಇದ್ದರೆ, ಅವರ 'ಘರ್ ವಾಪ್ಸಿ' ಶೀಘ್ರದಲ್ಲೇ ನಡೆಯಲಿದೆ. ಅಲ್ಲಿನ ಜನರು ಅದನ್ನು ಬಯಸುತ್ತಾರೆ. ಕಾಶ್ಮೀರದ ಅಭಿವೃದ್ಧಿಯನ್ನು ನೋಡಿ ಅವರು ಸಂತೋಷಪಡುತ್ತಾರೆ. ಇಂದು ಕಾಶ್ಮೀರ ಹೇಗೆ ಪ್ರಗತಿ ಹೊಂದುತ್ತಿದೆ ಎಂಬುದನ್ನು ನೋಡಿದರೆ, ಪಿಒಕೆ ಶೀಘ್ರದಲ್ಲೇ ಭಾರತದೊಂದಿಗೆ ಮತ್ತೆ ಸೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Chief Imam of the All India Imam Organisation Umer Ahmed Ilyasi
ಗಡಿ ನುಗ್ಗಿ RSS ಶಿಬಿರ-ಮನೆಗಳ ಮೇಲೆ ನೇರ ದಾಳಿ: ಮತ್ತೆ ಬಾಲ ಬಿಚ್ಚಿದ ಪಾಕ್‌; ಭಾರತಕ್ಕೆ ಗೊಡ್ಡು ಬೆದರಿಕೆ

370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಈ ಭಾಗದಲ್ಲಿ ಆದ ಪ್ರಗತಿಯಿಂದ ಸಂತಸವಾಗಿದೆ. ಒಂದು ಸಮಯದಲ್ಲಿ ಇಲ್ಲಿನ ಸಣ್ಣ ವಯಸ್ಸಿನ ಮಕ್ಕಳು ಕೈಯಲ್ಲಿ ಕಲ್ಲಿಡಿದು ಎಸೆಯುವ ಕೆಲಸ ಮಾಡುತ್ತಿದ್ದರು, ಆದರೆ, ಇಂದು ಅದೇ ಕೈಗಳಲ್ಲಿ ಪೆನ್ನು ಹಿಡಿದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು ಹೊಸ ಕಾಶ್ಮೀರವಾಗಿದೆ. ಇಂದಿನ ಕಾಶ್ಮೀರ ಸಮೃದ್ದಿಯಿಂದ ಕೂಡಿದ್ದು, ಅದ್ಬುತವಾಗಿದೆ. ಮತ್ತು ಇಲ್ಲಿನ ಪ್ರವಾಸೋದ್ಯಮ ಬೆಳೆದಿದೆ ಎಂದು ತಿಳಿಸಿದ್ದಾರೆ.

ಪಹಲ್ಗಾಮ್‌ ದಾಳಿ ಘಟನೆಯ ಬಳಿಕ ಕಾಶ್ಮೀರದಲ್ಲಿ ಪ್ರವಾಸೋದ್ಯಮದಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದು, ಕಾಶ್ಮೀರಕ್ಕೆ ಭೇಟಿ ನೀಡಬೇಕೆಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ, ಏಕೆಂದರೆ ಈಗ ಭಯದ ವಾತಾವರಣವಿಲ್ಲ. ಹಾಗಾಗಿ ಇಲ್ಲಿಗೆ ಜನರು ಭೇಟಿ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಕುರಿತು ಮಾತನಾಡಿ, "ಯುದ್ಧ ವಿನಾಶದ ಸಂಕೇತ. ಎಲ್ಲರಿಗೂ ಹಾನಿ ಮಾಡುತ್ತವೆ. ನಮ್ಮ ದೇಶದ ಪ್ರಧಾನಿ ಮೋದಿ ಅವರ ಮೇಲೆ ನನಗೆ ಭರವಸೆ ಇದೆ. ದೇವರು ಇಚ್ಛಿಸಿದರೆ, ಅವರು ಮಧ್ಯಸ್ಥಿಕೆ ವಹಿಸುತ್ತಾರೆ, ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ... ಶಾಂತಿ ಮತ್ತು ನೆಮ್ಮದಿ ಇರುತ್ತದೆ" ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com