ರಾಂಚಿ: ಪಾಠ ಮಾಡಲು ವಿನೂತನ ದಾರಿ ಕೊಂಡುಕೊಂಡ ಜಾರ್ಖಂಡ್ ನ ಶಿಕ್ಷಕ ಸಪನ್ ಕುಮಾರ್ ರನ್ನು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ನವದೆಹಲಿಗೆ ಆಹ್ವಾನಿಸಿದ್ದಾರೆ. ಅಲ್ಲಿ ಅವರು ತಮ್ಮ ವಿನೂತನ ಮಾರ್ಗದ ಕುರಿತು ಪ್ರವಚನ ನೀಡಲಿದ್ದಾರೆ.
ದುಮರ್ತುರ್ ಗ್ರಾಮದಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸಪನ್ ಕುಮಾರ್ ನರೇಂದ್ರ ಮೋದಿಯವರ ಮನ್ ಕಿ ಬಾತ್ ನಿಂದಾಗಿ ಇತ್ತೀಚಿಗೆ ಸುದ್ದಿಯಾಗಿದ್ದರು. ಗ್ರಾಮದ ಮನೆಗಳ ಗೋಡೆಗಳ ಮೇಲೆ ಅವರು ಅಕ್ಷರ ಮಾಲೆ, ಪಾಠ ಪ್ರವಚನಗಳನ್ನು ಬರೆದು ಗ್ರಾಮದ ಮನೆಗಳನ್ನು ಹಲಗೆಯನ್ನಾಗಿ ಮಾರ್ಪಡಿಸಿದ್ದರು.
ಕೊರೊನಾ ಸಾಂಕ್ರಾಮಿಕದಿಂದಾಗಿ ದೇಶದೆಲ್ಲೆಡೆ ಮಕ್ಕಳು ಮೊಬೈಲು ಫೋನುಗಳಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ, ಆದರೆ ಸಪನ್ ಕುಮಾರ್ ಗ್ರಾಮದಲ್ಲಿ ಬಹುತೇಕರ ಬಳಿ ಮೊಬೈಲ್ ಫೋನುಗಳು ಇಲ್ಲದ ಕಾರಣ ಸಪನ್ ಕುಮಾರ್ ಈ ವಿನೂತನ ಮಾರ್ಗ ಅನುಸರಿಸಿದ್ದರು. ಪಾಠ ಮಾಡಲು ಅವರು ಧ್ವನಿವರ್ಧಕಗಳನ್ನೂ ಬಳಕೆ ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮ ಶೀಗೆಹಳ್ಳಿಯ ವಿದ್ಯಾರ್ಥಿನಿ ಚೈತ್ರ ಹೆಗಡೆಗೆ 20 ಚಿನ್ನದ ಪದಕ!
ಆನ್ ಲೈನ್ ಲ್ಲಿ ಮಕ್ಕಳಿಗೆ ಆಸಕ್ತಿದಾಯಕವಾಗಿ ಪಾಠ ಹೇಳಿಕೊಡುವುದು ಹೇಗೆ? ಸುರೇಂದ್ರ ಸಮಗಾರ ಕಂಡುಕೊಂಡ ಐಡಿಯಾ ಇದು!
ಲಾಕ್ ಡೌನ್ ಸಮಯದಲ್ಲಿ ವಿನೂತನವಾಗಿ ಧ್ವನಿವರ್ಧಕದಲ್ಲಿ ಪಾಠ ಮಾಡಿದ ಮೇಷ್ಟ್ರು: MX Player ನಲ್ಲಿ ಸಾಕ್ಷ್ಯಚಿತ್ರ
ಬೆಂಗಳೂರಿಗರಿಗೆ ಲಾಕ್ ಡೌನ್ ಕಲಿಸಿದ ಪಾಠ
Advertisement