ಕರ್ನಾಟಕಕ್ಕೆ ಭರ್ಜರಿ ಜಯ

ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ತಮಿಳುನಾಡು ವಿರುದ್ಧ ಪ್ರಾಬಲ್ಯ ಮೆರೆದ ಕರ್ನಾಟಕ ತಂಡ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ...
ಕರ್ನಾಟಕಕ್ಕೆ ಭರ್ಜರಿ ಜಯ (ಸಂಗ್ರಹ ಚಿತ್ರ)
ಕರ್ನಾಟಕಕ್ಕೆ ಭರ್ಜರಿ ಜಯ (ಸಂಗ್ರಹ ಚಿತ್ರ)

ಕೊಚ್ಚಿ: ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ತಮಿಳುನಾಡು ವಿರುದ್ಧ ಪ್ರಾಬಲ್ಯ ಮೆರೆದ ಕರ್ನಾಟಕ ತಂಡ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ 8 ವಿಕೆಟ್‍ಗಳ ಗೆಲವು ದಾಖಲಿಸಿದೆ.

ಶುಕ್ರವಾರ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಆರಂಭಿಸಿತು. ನಂತರ ತಮಿಳುನಾಡು ತಂಡವನ್ನು 13.5 ಓವರ್‍ಗಳಲ್ಲಿ 61 ರನ್‍ಗಳಿಗೆ ಆಲೌಟ್ ಮಾಡಿತು. ನಂತರ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ 9.1 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 65 ರನ್ ದಾಖಲಿಸಿ ಗೆಲವಿನ ದಡ ಸೇರಿತು. ತಮಿಳುನಾಡು ತಂಡದ ಪರ ಸೂರ್ಯಪ್ರಕಾಶ್ 24, ಶಾರುಖ್ ಖಾನ್ 12 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್‍ಮನ್ ಎರಡಂಕಿ ರನ್ ದಾಖಲಿಸಲಿಲ್ಲ.

ಕರ್ನಾಟಕದ ಪರ ಬೌಲಿಂಗ್‍ನಲ್ಲಿ ಜೆ.ಸುಚಿತ್ 1 ಓವರ್ ಮಾಡಿ 2 ರನ್ ನೀಡಿ 3 ವಿಕೆಟ್ ಪಡೆದರು. ರೋನಿತ್ ಮತ್ತು ಉದಿತ್ ತಲಾ 2 ಹಾಗೂ ನವೀನ್ ಮತ್ತು ಶರತ್ ತಲಾ 1 ವಿಕೆಟ್ ಪಡೆದರು. ಕರ್ನಾಟಕದ ಪರ ಸಮರ್ಥ್ ಅಜೇಯ 24, ಮಾಯಂಕ್ 26, ಕರುಣ್ ಅಜೇಯ 10 ರನ್ ದಾಖಲಿಸಿದರು. ತಮಿಳುನಾಡು ಪರ ಆಂಥೋನಿ ದಾಸ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ತಮಿಳುನಾಡು 13.5 ಓವರ್‍ಗಳಲ್ಲಿ 61
(ಸೂರ್ಯಪ್ರಕಾಶ್ 24, ಶಾರುಖ್ ಖಾನ್ 12, ಜೆ.ಸುಚಿತ್ 2ಕ್ಕೆ3)

ಕರ್ನಾಟಕ 9.1 ಓವರ್‍ಗಳಲ್ಲಿ 65
(ಸಮರ್ಥ್ ಅಜೇಯ 24, ಮಾಯಾಂಕ್ 26, ಆಂಥೋನಿ 15ಕ್ಕೆ1)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com