ಬೆಂಗಳೂರು: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಗಾಂಧಿ-ಮಂಡೇಲಾ ಸರಣಿಗೆ ಭಾರತ ತಂಡದ ಆಯ್ಕೆ ಮಾಡಲಾಗಿದ್ದು, ಟಿ-20 ಹಾಗೂ ಏಕದಿನ ನಾಯಕತ್ವವನ್ನು ಎಂ.ಎಸ್.ಧೋನಿಗೆ ವಹಿಸಲಾಗಿದೆ.
ಬಿಸಿಸಿಐನ ಆಯ್ಕೆ ಸಮಿತಿಯ ಅಧ್ಯಕ್ಷ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಇದೇ ಅ. 2ರಂದು ಆರಂಭವಾಗಲಿರುವ ಆಫ್ರಿಕಾ ವಿರುದ್ಧದ ಮೂರು ಟಿ-20, ಐದು ಏಕದಿನ ಪಂದ್ಯಗಳ ಕ್ರಿಕೆಟ್ಸರಣಿಗೆ ತಂಡವನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕದ ಎಸ್.ಅರವಿಂದ್, ಸ್ಟುವರ್ಟ್ಬಿನ್ನಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಟಿ-20 ಹಾಗೂ ಏಕದಿನ ಸರಣಿಗೆ ಭಾರತೀಯ ತಂಡ ಇಂತಿದೆ: ಎಂ.ಎಸ್.ಧೋನಿ(ನಾಯಕ), ವಿರಾಟ್ಕೊಹ್ಲಿ (ಉಪನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಅಂಬಾಟಿ ರಾಯಿಡು, ಹರ್ಭಜನ್ ಸಿಂಗ್, ಅಮಿತ್ ಮಿಶ್ರಾ, ಅಕ್ಷರ್ ಪಟೇಲ್, ಎಸ್. ಅರವಿಂದ್, ಗುರುಕೀರತ್ ಸಿಂಗ್, ಸ್ಟುವರ್ಟ್ಬಿನ್ನಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಇಶಾಂತ್ ಶರ್ಮ.
Advertisement