ತಮಿಳುನಾಡು ಸರ್ಕಾರ ನೆರವು ನಿರಾಕರಿಸಿಲ್ಲ: ಮುಖ್ಯ ಕಾರ್ಯದರ್ಶಿ ಕೌಶಿಕ್

ಪ್ರವಾಹ ಪೀಡೀತ ತಮಿಳುನಾಡು ರಾಜ್ಯಕ್ಕೆ ಕರ್ನಾಟಕ ಸರ್ಕಾರ ನೀಡಿದ್ದ ೫ ಕೋಟಿ ಪರಿಹಾರವನ್ನು ಸೇರಿದಂತೆ ಉಳಿದ ರಾಜ್ಯಗಳ ನೆರವನ್ನು ಎಐಡಿಎಂಕೆ ಸರ್ಕಾರ
ಪ್ರವಾಹ ಪೀಡೀತ ಚೆನ್ನೈನ ಒಂದು ದೃಶ್ಯ
ಪ್ರವಾಹ ಪೀಡೀತ ಚೆನ್ನೈನ ಒಂದು ದೃಶ್ಯ

ಬೆಂಗಳೂರು: ಪ್ರವಾಹ ಪೀಡೀತ ತಮಿಳುನಾಡು ರಾಜ್ಯಕ್ಕೆ ಕರ್ನಾಟಕ ಸರ್ಕಾರ ನೀಡಿದ್ದ ೫ ಕೋಟಿ ಪರಿಹಾರವನ್ನು ಸೇರಿದಂತೆ ಉಳಿದ ರಾಜ್ಯಗಳ ನೆರವನ್ನು ಎಐಡಿಎಂಕೆ ಸರ್ಕಾರ ನಿರಾಕರಿಸಿದೆ ಎಂಬ ವದಂತಿ ನೆನ್ನೆ ಹಬ್ಬಿತ್ತು. ಈ ವದಂತಿಯನ್ನು ಅಲ್ಲಗೆಳೆದಿರುವ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್, ಈ ಸುದ್ದಿ ನಿಜವಲ್ಲ, ತಮಿಳುನಾಡು ಸರ್ಕಾರಕ್ಕೆ ನಾವು ಘೋಷಿಸಿದ ನೆರವು ನೀಡಲಿದ್ದೇವೆ ಎಂದಿದ್ದಾರೆ.

ತಮಿಳುನಾಡು ಸರ್ಕಾರಕ್ಕೆ ಸಿದ್ಧರಾಮಯ್ಯನವರು ೫ ಕೋಟಿ ನೆರವು ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ನಮ್ಮ ನೆರವನ್ನು ಒಪ್ಪಿಕೊಂಡಿದ್ದಾರೆ. ಅವರ ಸೂಚನೆ ಮೇರೆಗೆ ಮುಂದಿನ ದಿನಗಳಲ್ಲಿ ನೆರವು ಪರಿಹಾರ ನೀಡಲಾಗುತ್ತದೆ ಎಂದು ಕೌಶಿಕ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com