ಮತ್ತೊಂದು ಮಾಧ್ಯಮ ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾದ ಬಳಿಕ ಹುಟ್ಟಿಕೊಂಡ ಹಿಂದೂ ರಾಷ್ಟ್ರೀಯವಾದವೇ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಹೇಳುವ ಮೂಲಕ ವಿವಾದಕ್ಕೆ ಭಾರತದ ರಾಜಕೀಯ ಒಡಕಿನ ಆಯಾಮ ನೀಡುವ ಪ್ರಯತ್ನವನ್ನು ಮಾಡಿತ್ತು. ಇದಾದ ಬಳಿಕ ಪರ್ವತವನ್ನಾದರೂ ಅಲುಗಾಡಿಸಬಹುದು ಆದರೆ, ನಮ್ಮ ಸೇನೆಯ ಕೂದಲು ಕೊಂಕಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಮತ್ತೊಂದು ಪತ್ರಿಕೆ ಚೀನಾ ವಿರುದ್ಧ ಯುದ್ಧ ಮಾಡಿ ಗೆಲ್ಲುವ ಭ್ರಮೆಯಲ್ಲಿ ಭಾರತವಿದ್ದು, ತನ್ನ ಭ್ರಮೆಯಿಂದ ಭಾರತ ಹೊರಬರಬೇಕಿದೆ ಎಂದು ವ್ಯಂಗ್ಯ ಲೇಖನ ಪ್ರಕಟ ಮಾಡಿತ್ತು.