ಪಾಕ್ ಸಿಖ್ ವ್ಯಕ್ತಿಯಿಂದಲೇ ಸಿಖ್ ಧರ್ಮಕ್ಕೆ ಅಪಚಾರ, ಭಾರತೀಯ ಪತ್ರಕರ್ತ ದೂರು: ತನಿಖೆಗೆ ಇಮ್ರಾನ್ ಖಾನ್ ಸರ್ಕಾರ ಆದೇಶ

ವಿವಾದಾತ್ಮಕ ಫೋಟೋಶೂಟ್ ಅನ್ನು ಪಾಕಿಸ್ತಾನದ ಕರ್ತಾರ್ ಪುರದ ಗುರುದ್ವಾರದಲ್ಲಿ ನಡೆಸಲಾಗಿತ್ತು.
ಪಾಕಿಸ್ತಾನದ ಕರ್ತಾರ್ ಪುರದಲ್ಲಿನ ಗುರುದ್ವಾರ
ಪಾಕಿಸ್ತಾನದ ಕರ್ತಾರ್ ಪುರದಲ್ಲಿನ ಗುರುದ್ವಾರ

ಕರಾಚಿ: ಪಾಕಿಸ್ತಾನದ ಮಾಡೆಲ್ ಆಗಿರುವ ಸಿಖ್ ಧರ್ಮೀಯ ವ್ಯಕ್ತಿಯೋರ್ವ ವಸ್ತ್ರ ಜಾಹೀರಾತಿಗಾಗಿ ಪೇಟಾ ತ್ಯಜಿಸಿ, ತಲೆಗೂದಲನ್ನು ಪ್ರದರ್ಶನ ಮಾಡಿ ಫೋಟೋಶೂಟ್ ನಲ್ಲಿ ಭಾಗವಹಿಸಿದ್ದರು. ಆನ್ ಲೈನಿನಲ್ಲಿ ಈ ಫೋಟೋಗಳು ಹರಿದಾಡಿದ್ದವು. 

ಈ ಫೋಟೋಗಳು ಭಾರತೀಯ ಪತ್ರಕರ್ತ ರವೀಂದರ್ ಸಿಂಗ್ ಎಂಬುವವರ ಕಣ್ಣಿಗೆ ಬಿದ್ದಿತ್ತು. ಅವರು ಆ ಫೋಟೋಗಳನ್ನು ಶೇರ್ ಮಾಡಿ ಆ ವ್ಯಕ್ತಿಯಿಂದ ಸಿಖ್ ಧರ್ಮಕ್ಕೆ ಅಪಚಾರವಾಗಿದೆ ಎಂದು ಟ್ವಿಟರ್ ನಲ್ಲಿ ಸಂದೇಶ ಶೇರ್ ಮಾಡಿದ್ದರು. ಆ ಸಂದೇಶದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನೂ ಟ್ಯಾಗ್ ಮಾಡಿದ್ದರು.

ಈ ಘಟನೆ ಇಮ್ರಾನ್ ಖಾನ್ ಗಮನಕ್ಕೆ ಬಂದಿದ್ದು ತನಿಖೆಗೆ ಆದೇಶಿಸಿದ್ದಾರೆ. ವಿವಾದಾತ್ಮಕ ಫೋಟೋಶೂಟ್ ಅನ್ನು ಪಾಕಿಸ್ತಾನದ ಕರ್ತಾರ್ ಪುರದ ಗುರುದ್ವಾರದಲ್ಲಿ ನಡೆಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com