ಪ್ರಶಸ್ತಿ ಸ್ವೀಕರಿಸುತ್ತಿರುವ ಅರುಣ್ ಪ್ರಸಾದ್‍ಕುಮಾರ್‍ 
ಸಾಧನೆ

ಭಾರತದ ಅರುಣ್ ಪ್ರಸಾದ್‍ಕುಮಾರ್‍ಗೆ 'ಹಸಿರು ಪ್ರತಿಭೆ' ಪುರಸ್ಕಾರ

ಜರ್ಮನಿಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ ಪ್ರತಿಷ್ಠಿತ ಸುಸ್ಥಿರ ಅಭಿವೃದ್ಧಿಯಲ್ಲಿ ಉನ್ನತ ಸಾಮರ್ಥ್ಯಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆ ಗ್ರೀನ್...

ಬೆಂಗಳೂರು: ಜರ್ಮನಿಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ ಪ್ರತಿಷ್ಠಿತ ಸುಸ್ಥಿರ ಅಭಿವೃದ್ಧಿಯಲ್ಲಿ ಉನ್ನತ  ಸಾಮರ್ಥ್ಯಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆ ಗ್ರೀನ್ ಟ್ಯಾಲೆಂಟ್ಸ್(ಹಸಿರು ಪ್ರತಿಭೆಗಳು) ಸ್ಪರ್ಧೆಯ 27 ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ಬಿಎಂಬಿಎಫ್ ಸುಸ್ಥಿರತೆ, ಹವಾಮಾನ, ಶಕ್ತಿ ನಿರ್ದೇಶನಾಲಯದ ಮುಖ್ಯಸ್ಥ ವಿಲ್‍ಫ್ರೆಡ್ ಕ್ರಾಸ್ ಅವರು 20 ದೇಶಗಳ 27 ಯುವ ವಿಜ್ಞಾನಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಇವರಲ್ಲಿ ಭಾರತದ 27 ವರ್ಷದ ಅರುಣ್ ಪ್ರಸಾದ್ ಕುಮಾರ್  ಅವರು ಸೇರಿದ್ದಾರೆ.

ಅರುಣ್ ಪ್ರಸಾದ್ ಕುಮಾರ್  ಅವರು ಭೂ ದೂರ ಸಂವೇದಿ ಮತ್ತು ಭೂ ಮಾಹಿತಿ ತಂತ್ರಜ್ಞಾನ ಕುರಿತು ಪಿಎಚ್,ಡಿ ಮಾಡುತ್ತಿದ್ದು, ಅವರಿಗೆ ಜರ್ಮನಿಯ ಪ್ರವಾಸ ಕೈಗೊಂಡು ಈ ಕ್ಷೇತ್ರದಲ್ಲಿ ಮುಂಚೂಣಿಯ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ನೀಡಲಾಗಿದೆ.

ಪ್ರಸಕ್ತ ವರ್ಷದ ಸ್ಪರ್ಧೆ 90ಕ್ಕೂ ಹೆಚ್ಚಿನ ದೇಶಗಳ 550ಕ್ಕೂ ಹೆಚ್ಚಿನ ಅರ್ಜಿದಾರರನ್ನು ಆಕರ್ಷಿಸಿತ್ತು. ನಗರ ಯೋಜನೆ, ಜೈವಿಕ ವೈವಿಧ್ಯತೆ, ನವೀಕರಿಸಬಹುದಾದ ಇಂಧನ ಮತ್ತು ಸಂಪನ್ಮೂಲ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ, ಚಿಂತನೆಯ ಹಂಚಿಕೆಗಳಿಗೆ ಈ ಕಾರ್ಯಕ್ರಮ ಅವಕಾಶ ಮಾಡಿಕೊಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT