ಚೆರ್ನೋಬಿಲ್ ದುರಂತದ ನಿಷೇಧಿತ ಪ್ರದೇಶದ ಒಂದು ದೃಶ್ಯ 
ಕೃಷಿ-ಪರಿಸರ

ಚೆರ್ನೋಬಿಲ್ ನಲ್ಲಿ ವನ್ಯಜೀವಿಗಳ ಸಂತತಿ ವೃದ್ಧಿ: ಅಧ್ಯಯನ

1986 ರಲ್ಲಿ ನಡೆದ ಅಣು ವಿಕಿರಣ ದುರಂತದಿಂದ ಸುತ್ತಲಿನ ಪರಿಸರ ಸಂಪೂರ್ಣ ನಾಶವಾಗಿ, ಅಲ್ಲಿಂದ ಜನರನ್ನು ಸ್ಥಳಾಂತರ ಮಾಡಬೇಕಾಗಿ ಬಂದಿತ್ತು. ಈಗ ಅದೇ ಪ್ರದೇಶದಲ್ಲಿ

ನ್ಯೂಯಾರ್ಕ್: 1986 ರಲ್ಲಿ ನಡೆದ ಅಣು ವಿಕಿರಣ ದುರಂತದಿಂದ ಸುತ್ತಲಿನ ಪರಿಸರ ಸಂಪೂರ್ಣ ನಾಶವಾಗಿ, ಅಲ್ಲಿಂದ ಜನರನ್ನು ಸ್ಥಳಾಂತರ ಮಾಡಬೇಕಾಗಿ ಬಂದಿತ್ತು. ಈಗ ಅದೇ ಪ್ರದೇಶದಲ್ಲಿ ವನ್ಯಮೃಗಗಳ ವೃದ್ಧಿಯಾಗಿದೆ ಎನ್ನುತ್ತದೆ ಅಂತರಾಷ್ಟ್ರೀಯ ಸಂಶೋಧಕರ ತಂಡದ ಅಧ್ಯಯನವೊಂದು.

ಇಲಿಗಳ ಸಂತತಿ, ರೋ ಜಿಂಕೆಗಳು, ಕಾಡು ಹಂದಿಗಳು ಮತ್ತು ತೋಳಗಳ ಸಂಖ್ಯೆಯಲ್ಲಿ ಅಪಾರ ವೃದ್ಧಿಯಾಗಿದೆಯಂತೆ. ಉಕ್ರೇನಿನ ಈ ಪ್ರದೇಶ ಈಗ ದುರಂತ ಸ್ಥಳಕ್ಕಿಂತಲೂ ಪರಿಸರ ಸಂರಕ್ಷಕ ಸ್ಥಳದಂತೆ ಕಾಣುತ್ತಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ. ೩೦ ವರ್ಷದ ಹಿಂದೆ ನಡೆದ ಈ ದುರಂತ ವಿಶ್ವದ ಅತಿ ದೊಡ್ಡ ಅಣುದುರಂತ ಎಂದೇ ಬಣ್ಣಿಸಲಾಗುತ್ತದೆ.

ಈ ೧೬೨೧ ಚದರ ಮೈಲಿಯ ಚೆರ್ನೋಬಿಲ್ ನಿಷೇಧಿತ ಪ್ರದೇಶದಲ್ಲಿ ವಿಕಿರಣ ಸೋರಿಕೆಯಿಂದ ವನ್ಯಮೃಗ ಸಂತತಿ ಇಳಿಮುಖವಾಗುತ್ತಿದ್ದನ್ನು ಹಿಂದಿನ ಸಂಶೋಧನೆಗಳು ಗುರುತಿಸಿದ್ದವು. ಈಗಿನ ಸಂಶೋಧನೆ ಆಶಾವಾದವನ್ನು ನೀಡಿವೆ.

"ಇದರ ಅರ್ಥ ವಿಕಿರಣ ಸೋರಿಕೆ ವನ್ಯಜೀವಕ್ಕೆ ಒಳ್ಳೆಯದು ಎಂದಲ್ಲ. ಆದರೆ ಭೇಟೆ, ಕೃಷಿ ಮತ್ತು ಕಾಡಿನ ನಾಶ ಕಡಿಮೆಯಾಗಿರುವುದರಿಂದ ವನ್ಯ ಜೀವಿಗಲ್ಲಿ ಏರಿಕೆ ಕಂಡಿದೆ" ಎಂದು ಸಂಶೋಧಕರ ತಂಡದ ಪ್ರೊಫೆಸರ್ ಜಿಮ್ ಸ್ಮಿತ್ ಸ್ಪಷ್ಟಪಡಿಸಿದ್ದಾರೆ.

ಹತ್ತಿರದ ಸಂರಕ್ಷಕ ಅಭಯಾರಣ್ಯಕ್ಕಿಂತಲೂ ಇಲ್ಲಿ ತೋಳಗಳ ಸಂಖ್ಯೆಯಲ್ಲಿ ಏಳು ಪಟ್ಟು ಹೆಚ್ಚಳ ಕಂಡಿದೆ ಎನ್ನುತ್ತದೆ ಅಧ್ಯಯನ.

ಈ ಅಧ್ಯಯನ ಕರಂಟ್ ಬಯಾಲಜಿಯಲ್ಲಿ ಪ್ರಕಟವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT