ಕಾಮಾಕ್ಯ ದೇವಾಲಯ ಅಸ್ಸಾಂ ರಾಜ್ಯದಲ್ಲಿರುವ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿ ದೇವಾಲಯವಾಗಿದೆ.
ಕಾಳಿಕಾ ಪುರಾಣದ ಪ್ರಕಾರ, ಕಾಮಾಕ್ಯ ದೇವಸ್ಥಾನದ ಸ್ಥಳವು ಸತಿಯು ತನ್ನ ಪ್ರಣಯವನ್ನು ಶಿವನೊಂದಿಗೆ ಈಡೇರಿಸಿಕೊಳ್ಳಲು ರಹಸ್ಯವಾಗಿ ಸಂಧಿಸುತ್ತಿದ್ದ ಏಕಾಂತ ಸ್ಥಳ ಹಾಗೂ ಶಿವನು ಸತಿಯ ಕಳೇಬರದೊಂದಿಗೆ ನೃತ್ಯ ಮಾಡಿದ ನಂತರ ಅವಳ ಯೋನಿ ಯು ಬಿದ್ದ ಸ್ಥಳವೂ ಕೂಡ ಆಗಿದೆ ಹೇಳಲಾಗಿದೆ. ಕೃತಿಯಾದ ಯೋಗಿನಿ ತಂತ್ರ ಕೃತಿಯಾದ ಕಾಳಿಕಾ ಪುರಾಣ ದಲ್ಲಿ ನೀಡಿರುವ ಕಾಮಾಕ್ಯದ ಮೂಲವನ್ನು ನಿರ್ಲಕ್ಷಿಸಿದೆ ಮತ್ತು ಅದು ಕಾಮಾಕ್ಯಳನ್ನು ದೇವಿ ಕಾಳಿಯೊಂದಿಗೆ ಸಂಬಂಧ ಕಲ್ಪಿಸುತ್ತದೆ ಮತ್ತು ಯೋನಿ ಯ ರಚನಾ ಸಂಕೇತಿಸುವಿಕೆಗೆ ಪ್ರಾಧಾನ್ಯತೆ ನೀಡುತ್ತದೆ. ಪುರಾಣ ಕಥೆಯೊಂದರ ಅನುಸಾರ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸದಂತೆ ಕೋಚ್ ಬಿಹಾರ್ ರಾಜಮನೆತನದವರನ್ನು ಸ್ವತಃ ದೇವಿಯೇ ನಿಷೇಧಿಸಿದ್ದಳು. ಈ ಶಾಪದ ಭಯದಿಂದ, ಇಂದಿಗೂ ಸಹ ಕುಟುಂಬದ ವಂಶಸ್ಥರು ಕಾಮಾಕ್ಯ ಬೆಟ್ಟದ ಬಳಿ ಸಾಗುವಾಗ ಬೆಟ್ಟದ ಕಡೆಗೆ ಕಣ್ಣೆತ್ತಿ ಸಹ ನೋಡುವ ಧೈರ್ಯವನ್ನು ಮಾಡುವುದಿಲ್ಲ.
ಕಾಮಾಕ್ಯ ದೇವತೆಯನ್ನು ವಾಮಾಚಾರ (ಎಡಗೈ-ವಿಧಾನ) ಜೊತೆಗೆ ದಕ್ಷಿಣಾಚಾರ (ಬಲಗೈ-ವಿಧಾನ) ಹೀಗ ಎರಡೂ ಪೂಜಾ ಪದ್ಧತಿಗಳ ಪ್ರಕಾರವಾಗಿ ಪೂಜಿಸಲಾಗುತ್ತದೆ (ಕಾಕತಿ, 1989 ಪು45). ದೇವಿಗೆ ಸಾಮಾನ್ಯವಾಗಿ ಹೂವುಗಳನ್ನು ಸಮರ್ಪಿಸಲಾಗುತ್ತದೆ, ಆದರೆ ಪ್ರಾಣಿಗಳ ಬಲಿಕೊಡುವುದನ್ನು ಒಳಗೊಂಡಿರಬಹುದು. ಸಾಮಾನ್ಯವಾಗಿ ಸ್ತ್ರೀ ಪ್ರಾಣಿಗಳನ್ನು ಬಲಿಕೊಡಲಾಗುವುದಿಲ್ಲ, ಈ ನಿಯಮವನ್ನು ಸಾಮೂಹಿಕ ಬಲಿಕೊಡುವಿಕೆಯ ಸಂದರ್ಭದಲ್ಲಿ ಸಡಿಲಿಸಲಾಗುತ್ತದೆ (ಕಾಕತಿ 1989, ಪು65) ಸಂಸ್ಕೃತದಲ್ಲಿನ ಪ್ರಾಚೀನ ಸಾಹಿತ್ಯವಾದ ಕಲಿಕಾ ಪುರಾಣವು ಕಾಮಾಕ್ಯಳನ್ನು ಎಲ್ಲಾ ಆಸೆಗಳ ಫಲ ನೀಡುವವಳೆಂದು, ಶಿವನ ಕಿರಿಯ ವಧುವೆಂದು, ಮತ್ತು ಮುಕ್ತಿಯ ನೀಡುಗಳೆಂದು ವಿವರಿಸುತ್ತದೆ.ಶಕ್ತಿಯು ಕಾಮಾಕ್ಯ ಎಂದು ಹೆಸರುವಾಸಿಯಾಗಿದೆ. ಅಸ್ಸಾಂನಲ್ಲಿನ ಆರ್ಯನ್ ಮತ್ತು ಆರ್ಯನ್ ಅಲ್ಲದ ಪ್ರಕೃತಿ ಶಕ್ತಿಗಳ "ನಂಬಿಕೆಗಳ ಸಮ್ಮಿಳನ ಮತ್ತು ಅಭ್ಯಾಸಗಳನ್ನು" ಅಸ್ಸಾಂನಲ್ಲಿನ ಕಾಮಾಕ್ಯ ದೇವಾಲಯವು ಪ್ರತಿನಿಧಿಸುತ್ತದೆ.
ದೇವಾಲಯವು ಮೂರು ಪ್ರಮುಖವಾದ ಪ್ರಾಂಗಣಗಳನ್ನು ಒಳಗೊಂಡಿದೆ. ಪಶ್ಚಿಮದ ಪ್ರಾಂಗಣವು ದೊಡ್ಡದಾಗಿ ಆಯತಾಕಾರದಲ್ಲಿದೆ ಮತ್ತು ಅದನ್ನು ಪೂಜಾಕಾರ್ಯಗಳಿಗೆ ಸಾಮಾನ್ಯ ತೀರ್ಥ ಯಾತ್ರಾರ್ಥಿಗಳಿಂದ ಬಳಸಲಾಗುವುದಿಲ್ಲ. ಮಧ್ಯದ ಪ್ರಾಂಗಣವು ಚೌಕವಾಗಿದ್ದು, ನಂತರದ ಸೇರ್ಪಡೆಯಾದ ದೇವತೆಯ ಚಿಕ್ಕ ವಿಗ್ರಹವನ್ನು ಹೊಂದಿದೆ. ಸಭಾಂಗಣದ ಗೋಡೆಗಳು ನಾರಾಯಣನ ಶಿಲ್ಪಕೃತಿಯ ಚಿತ್ರಗಳನ್ನು, ಸಂಬಂಧಿತ ಶಾಸನಗಳನ್ನು ಮತ್ತು ಇತರ ದೇವರುಗಳನ್ನು ಒಳಗೊಂಡಿದೆ. ಮಧ್ಯದ ಪ್ರಾಂಗಣವು ಗುಹೆಯ ರೂಪದಲ್ಲಿ ದೇವಸ್ಥಾನದ ಗರ್ಭಗುಡಿ ಗೆ ಪ್ರವೇಶವನ್ನು ಹೊಂದಿದ್ದು, ಅದು ಯಾವುದೇ ಚಿತ್ರಗಳನ್ನು ಒಳಗೊಂಡಿರದೇ ಸ್ವಾಭಾವಿಕ ನೆಲದಡಿಯ ಚಿಲುಮೆಯನ್ನು ಹೊಂದಿದ್ದು ಅದು ತಳಬಂಡೆಯಲ್ಲಿ ಯೋನಿ -ಆಕಾರದ ಸೀಳಿನ ಮೂಲಕ ಹರಿಯುತ್ತದೆ. ಪ್ರತಿ ಬೇಸಿಗೆಯಲ್ಲಿ ಅಂಬುವಾಸಿ ಹಬ್ಬದ ಸಂದರ್ಭದಲ್ಲಿ, ಕಾಮಾಕ್ಯ ತಾಯಿಯ ಋತುಚಕ್ರವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಮುಖ್ಯ ದೇವಾಲಯದಲ್ಲಿನ ನೀರು ಕಬ್ಬಿಣದ ಆಕ್ಸೈಡ್ ತರಹ ಋತುಚಕ್ರದ ಸ್ರವಿಕೆಯಂತೆ ಕೆಂಪು ಬಣ್ಣದಲ್ಲಿ ಹರಿಯುತ್ತದೆ.
ಕೋಚ್ ಬಿಹಾರ್ ವಂಶಸ್ಥರ ಬೆಂಬಲವಿಲ್ಲದೇ ದೇವಸ್ಥಾನವು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿತು. 1658 ರ ಕೊನೆಯಲ್ಲಿ ರಾಜ ಜಯದ್ವಜ ಸಿಂಘಾ ಅವರ ನೇತೃತ್ವದಲ್ಲಿ ಅಹೋಮಾಗಳು ಕೆಳಗಿನ ಅಸ್ಸಾಂ ಅನ್ನು ಜಯಿಸಿದರು ಮತ್ತು ಅವರು ದೇವಾಲಯದ ಬೆಳವಣಿಗೆಯಲ್ಲಿ ಆಸಕ್ತಿ ತೋರಿಸಿದರು. ಅಹೋಮಾ ರಾಜರ ನಂತರದ ದಶಕಗಳ ನಂತರದವರು ಶೈವಸ್ಥರು ಅಥವಾ ಶಕ್ತರ ಧರ್ಮನಿಷ್ಠರಾಗಿದ್ದು, ದೇವಾಲಯವನ್ನು ಮರು ನಿರ್ಮಾಣ ಮಾಡುವ ಅಥವಾ ನವೀಕರಿಸುವ ಮೂಲಕ ಬೆಂಬಲವನ್ನು ಮುಂದುವರಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos