ಆರೋಗ್ಯ, ಅಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಳ್ಳಲು ಧರಿಸಿ ಸ್ಪಟಿಕ ಮಾಲೆ ! 
ಭಕ್ತಿ-ಜ್ಯೋತಿಷ್ಯ

ಆರೋಗ್ಯ, ಅಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಳ್ಳಲು ಧರಿಸಿ ಸ್ಪಟಿಕ ಮಾಲೆ !

ಸ್ಪಟಿಕ ಅತ್ಯಂತ ಶಕ್ತಿಯುಳ್ಳ ವಸ್ತು. ಸ್ಪಟಿಕದಿಂದ ತಯಾರಿಸಿರುವ ಮಾಲೆ ಧರಿಸುವುದರಿಂದ ಸುತ್ತಮುತ್ತಲಿರುವ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಸಕಾರಾತ್ಮಕ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸ್ಪಟಿಕ ಅತ್ಯಂತ ಶಕ್ತಿಯುಳ್ಳ ವಸ್ತು. ಸ್ಪಟಿಕದಿಂದ ತಯಾರಿಸಿರುವ ಮಾಲೆ ಧರಿಸುವುದರಿಂದ ಸುತ್ತಮುತ್ತಲಿರುವ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಸಕಾರಾತ್ಮಕ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಸಕಾರಾತ್ಮಕ ಶಕ್ತಿಯನ್ನು ಗ್ರಹಿಸಿ ಸಮತೋಲನ ಕಾಯ್ದುಕೊಳ್ಳುವುದಕ್ಕೂ ಸಹ ಸ್ಪಟಿಕ ಮಾಲೆ ಸಹಕಾರಿಯಾಗಿದೆ. 
ಆಧ್ಯಾತ್ಮಿಕವಾಗಿ ಸ್ಪಟಿಕದ ಮಾಲೆ ಉಪಯೋಗವಾಗುವಂತೆ, ಮಾಲೆ ಧರಿಸುವುದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನೂ ವೃದ್ಧಿಸುತ್ತದೆ. ವಾಮಾಚಾರದಿಂದ ರಕ್ಷಿಸುವುದು ಹಾಗೂ ದೇಹದ ಉಷ್ಣತೆ ತಗ್ಗಿಸುವುದು ಸೇರಿದಂತೆ ಹಲವು ವಿಧಗಳಲ್ಲಿ ಚಿಕಿತ್ಸಕ ರೂಪದಲ್ಲಿ ವರ್ತಿಸುವುದು ಸ್ಪಟಿಕ ಮಾಲೆಯ ಮತ್ತೊಂದು ವೈಷಿಷ್ಟ್ಯ. ಸಾಮಾನ್ಯವಾಗಿ 108 ಮಣಿಗಳಿಂದ ತಯಾರಾಗಿರುವ ಸ್ಪಟಿಕ ಮಾಲೆಗಳು ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಪ್ರತಿನಿಧಿಸುತ್ತವೆ.  ಸ್ಪಟಿಕ ಮಾಲೆಯನ್ನು ಧರಿಸಿ ಜಪ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಹಾಗೂ ದೇಹ, ಮನಸ್ಸನ್ನು ತಂಪಾಗಿಸುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಯೋಗಿಗಳು/ ಸಾಧು ಸಂತರು ಹೆಚ್ಚಾಗಿ ಸ್ಪಟಿಕ ಮಾಲೆ ಧರಿವುದನ್ನು ಕಾಣಬಹುದಾಗಿದೆ.   
ಧ್ಯಾನದಲ್ಲಿ ಆಸಕ್ತಿಯುಳ್ಳವರಿಗೆ ಸಾಮಾನ್ಯವಾಗಿ ಸ್ಪಟಿಕ ಮಾಲೆ ಧರಿಸಿ ಧ್ಯಾನ ಮಾಡುವುದಕ್ಕೆ ಸೂಚಿಸಲಾಗುತ್ತದೆ. ಅದರಲ್ಲಿರುವ ಶೀತಲ ಗುಣ ಧ್ಯಾನಾಸಕ್ತನಾಗುವ ವ್ಯಕ್ತಿಯಲ್ಲಿನ ಬಾಹ್ಯ, ಆಂತರಿಕ ಒತ್ತಡಗಳನ್ನು ಕಡಿಮೆ ಮಾಡಿ ಮನಸ್ಸನ್ನೂ ಶೀತಲವಾಗಿರಿಸುತ್ತದೆ. ಗಾಯತ್ರಿ ಜಪ, ಸರಸ್ವತಿ ಜಪ, ರಾಮ ಜಪ ಸೇರಿದಂತೆ ಹಲವು ದೇವರುಗಳ ಕುರಿತಾದ ಜಪಗಳಿಗೆ ಸ್ಪಟಿಕ ಮಾಲೆ ಧರಿಸಿ ಜಪ ಮಾಡುವುದು ಸೂಕ್ತ ಎಂಬ ನಂಬಿಕೆ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!