ಬೃಹದೇಶ್ವರ ದೇವಾಲಯ ಗೋಪುರ 
ಭಕ್ತಿ-ಭವಿಷ್ಯ

ಈ ದೇವಾಲಯದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಗೋಪುರದ ನೆರಳು ಬೀಳುವುದಿಲ್ಲ! ದೇವಾಲಯ ಯಾವುದು ಗೊತ್ತಾ?

ಭಾರತೀಯ ವಾಸ್ತುಶಿಲ್ಪಕಾರರು ಕೇವಲ ಶಿಲ್ಪಿಗಳಷ್ಟೇ ಅಲ್ಲದೇ ಭೌತಶಾಸ್ತ್ರದ ಪ್ರಕಾಂಡ ಪಂಡಿತರೂ ಆಗಿದ್ದರೆಂಬುದಕ್ಕೆ ಹಲವು ಜೀವಂತ ಉದಾಹರಣೆಗಳು ಇಂದಿಗೂ ಕಾಣಸಿಗುತ್ತವೆ. ಈ ಪೈಕಿ...

ಭಾರತ ಪ್ರಾಚೀನ ಕಾಲದಿಂದಲೂ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿದೆ. ಭಾರತೀಯ ವಾಸ್ತುಶಿಲ್ಪಕಾರರು ಕೇವಲ ಶಿಲ್ಪಿಗಳಷ್ಟೇ ಅಲ್ಲದೇ ಭೌತಶಾಸ್ತ್ರದ ಪ್ರಕಾಂಡ ಪಂಡಿತರೂ ಆಗಿದ್ದರೆಂಬುದಕ್ಕೆ ಹಲವು ಜೀವಂತ ಉದಾಹರಣೆಗಳು ಇಂದಿಗೂ ಕಾಣಸಿಗುತ್ತವೆ. ಈ ಪೈಕಿ 1000 ವರ್ಷಗಳ ಇತಿಹಾಸವುಳ್ಳ ತಂಜಾವೂರಿನ ಬೃಹದೇಶ್ವರ ದೇವಾಲಯವೂ ಒಂದಾಗಿದೆ. 
ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಲ್ಪಟ್ಟಿರುವ ಶಿವನ ದೇವಾಲಯವಾಗಿರುವ ತಂಜಾವೂರಿನ ಬೃಹದೇಶ್ವರ ದೇವಾಲಯ ಭಾರತೀಯ ವಾಸ್ತುಶಿಲ್ಪದ ಅಚ್ಚರಿಗಳ ಆಗರವಾಗಿದೆ. ದ್ರಾವಿಡ ಶೈಲಿಯಲ್ಲಿರುವ ದೇವಾಲಯ ಚೋಳ ವಂಶದ ರಾಜ ರಾಜ ಅರಸನ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು, ವಿಶ್ವದ ಅತ್ಯಂತ ಅದ್ಭುತ ವಾಸ್ತುಶಿಲ್ಪಗಳಲ್ಲಿ ಒಂದಾಗಿದೆ. 
ದೇವಾಲಯದ ಗೋಪುರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ವಿಶ್ವದ ಅತ್ಯಂತ ಎತ್ತರದ ಗೋಪುರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸುಂದರ ರಚನೆಗಳು, ಕಲೆಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ಜೊತೆಗೆ ಹೆಸರೇ ಸೂಚಿಸುವಂತೆ ಬೃಹತ್ ಶಿವಲಿಂಗವಿದ್ದು ವಿಶ್ವದಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತಿದೆ. 
ಮೇಲೆ ಹೇಳಿದಂತೆ ಬೃಹದೇಶ್ವರ ದೇವಾಲಯದ ವಾಸ್ತು ಶಿಲ್ಪದ ಅಚ್ಚರಿ ಎಂದರೆ, ಮಧ್ಯಾಹ್ನದ ವೇಳೆ ನೆರಳು ಬೀಳದಂತೆ ಕಟ್ಟಲಾಗಿರುವ ವಿಮಾನ ಗೋಪುರ. ವಿಮಾನ ಗೋಪುರದ ಅಡಿಯ ಭಾಗ ಮೇಲ್ಭಾಗಕ್ಕಿಂತ ದೊಡ್ಡದಾಗಿರುವ ಕಾರಣ ಮಧ್ಯಾಹ್ನದ ಬಿಸಿಲಿನಿಂದ ಉಂಟಾಗುವ ನೆರಳು ಗೋಪುರದ ಅಡಿಯ ಭಾಗದಲ್ಲೇ ಸೇರಿ ಹೋಗುತ್ತದೆ. ನೆಲದ ಮೇಲೆ ಬೀಳುವುದಿಲ್ಲ. ಆದ್ದರಿಂದ ನೆರಳು ಬೀಳುವುದಿಲ್ಲ ಎಂದು ಹೇಳಲಾಗುತ್ತದೆ. ತಂತ್ರಜ್ಞಾನ ಮುಂದುವರೆಯದ ದಿನಗಳಲ್ಲಿ ಬೃಹದೇಶ್ವರ ದೇವಾಲಯದ ಗೋಪುರ ನಿರ್ಮಾತೃ ವಾಸ್ತು ಶಿಲ್ಪಿಗಳ ಬೆಳಕಿನ ಜ್ಞಾನ ನಿಜಕ್ಕೂ ಬೆರಗು ಮೂಡಿಸುವಂತಿದ್ದು, ಇಂದಿಗೂ ವಿಶ್ವವಿಖ್ಯಾತವಾಗಿ ಪ್ರಸಿದ್ಧಿ ಪಡೆದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT