ದಕ್ಷಿಣ ಭಾರತದಲ್ಲಿವೆ ಪಂಚಭೂತಗಳನ್ನು ಪ್ರತಿನಿಧಿಸುವ ಶಿವಲಿಂಗಗಳು! 
ಭಕ್ತಿ-ಜ್ಯೋತಿಷ್ಯ

ದಕ್ಷಿಣ ಭಾರತದಲ್ಲಿವೆ ಪಂಚಭೂತಗಳನ್ನು ಪ್ರತಿನಿಧಿಸುವ ಶಿವಲಿಂಗಗಳು!

ಈಶ್ವರನ ಸ್ವರೂಪವಾಗಿರುವ ಲಿಂಗವೂ ಪಂಚಭೂತಗಳನ್ನು ಪ್ರತಿನಿಧಿಸುತ್ತದೆ. ಪಂಚಭೂತಗಳನ್ನು ಪ್ರತಿನಿಧಿಸುವ ಶಿವ ಲಿಂಗಗಳು ದಕ್ಷಿಣ ಭಾರತದಲ್ಲಿದೆ ಎಂಬುದು ವಿಶೇಷ.

ಈಶಾವಾಸ್ಯಮ್ ಇದಂ ಸರ್ವಂ ಎಂದಿವೆ ಉಪನಿಷತ್ ಗಳು. ಅಂದರೆ ಜಗತ್ತಿನಲ್ಲಿರಿಯುವ ಸಕಲ ಚರಾಚರಗಳೂ ಈಶ್ವರನ ಆವಾಸಸ್ಥಾನ ಎಂಬುದು ಇದರ ತಾತ್ಪರ್ಯ. ಪಂಚಭೂತಗಳು ಸಹ ಇದಕ್ಕೆ ಹೊರತಾದುದ್ದಲ್ಲ. ಅಂತೆಯೇ ಈಶ್ವರನ ಸ್ವರೂಪವಾಗಿರುವ ಲಿಂಗವೂ ಪಂಚಭೂತಗಳನ್ನು ಪ್ರತಿನಿಧಿಸುತ್ತದೆ. 
ಶಿವಲಿಂಗವನ್ನು ಪರಮಶಕ್ತಿಯುಳ್ಳ ಮೂರ್ತ ಸ್ವರೂಪ ಎಂದೇ ಆರಾಧಿಸಲಾಗುತ್ತದೆ. ಇಂತಹ ಶಿವ ಲಿಂಗ ಅಥವಾ ಶಿವನನ್ನ ಜಗತ್ತಿನ ಲಯಕರ್ತ ಎಂದೂ ಹೇಳಲಾಗುತ್ತದೆ. ಜಗತ್ತಿನ ಲಯಕರ್ತ ಎಂದರೆ ಅಕ್ಷರಸಹ ನಾಶ ಮಾಡುವುದು ಎಂದಲ್ಲ. ಬದಲಾಗಿ ಮನುಷ್ಯನಲ್ಲಿರುವ ದುರ್ಗುಣಗಳನ್ನು ನಾಶ ಮಾಡುವುದು ಎಂದರ್ಥ ಬರುತ್ತದೆ. ಸನಾತನ ಧರ್ಮವು ಇದನ್ನೇ ಹೇಳಿದ್ದು, ಪ್ರಕೃತಿಗೆ ಅತ್ಯಂತ ನಿಕಟವಾದ ಅಂಶಗಳನ್ನು ಹೊಂದಿದೆ. 
ಪ್ರಕೃತಿಯ ಪಂಚಭೂತ (ಅಗ್ನಿ, ವಾಯು, ಜಲ, ಪೃಥ್ವಿ, ಆಕಾಶ) ಗಳನ್ನು ಶಿವ ಲಿಂಗ ಪ್ರತಿನಿಧಿಸುತ್ತದೆ. ಇದನ್ನೇ ಪ್ರತಿನಿಧಿಸುವ ಲಿಂಗ ಸ್ವರೂಪದಲ್ಲಿರುವ ಶಿವನ ದೇವಾಲಯಗಳು ದಕ್ಷಿಣ ಭಾರತದಲ್ಲಿದೆ. ಯಾವ ದೇವಾಲಯ, ಯಾವ ಪಂಚಭೂತಗಳನ್ನು ಪ್ರತಿನಿಧಿಸುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. 
ಏಕಾಂಬರೇಶ್ವರ ದೇವಾಲಯ, ಕಾಂಚಿಪುರಂ: ಪೃಥ್ವಿಲಿಂಗ, ಪೃಥ್ವಿ ತತ್ವವನ್ನು ಪ್ರತಿನಿಧಿಸುತ್ತದೆ. 
ಜಂಬುಕೇಶ್ವರ ದೇವಾಲಯ, ತಿರುವನೈಕಾವಲ್ ತಿರ್ಚಿ ಹತ್ತಿರ: ಜಂಬು ಲಿಂಗ ಜಲದ ಪ್ರತಿನಿಧಿ 
ಅರುಣಾಚಲೇಶ್ವರ ದೇವಾಲಯ ತಿರುವಣ್ಣಾಮಲೈ: ಅಗ್ನಿ ಲಿಂಗದ ದೇವಾಲಯ: ಅಗ್ನಿಯ ಪ್ರತಿನಿಧಿ 
ಕಾಳಹಸ್ತೇಶ್ವರ ದೇವಾಲಯ, ಕಾಳಹಸ್ತಿ ಆಂಧ್ರಪ್ರದೇಶ; ವಾಯು ಲಿಂಗ, ವಾಯು ಪ್ರತಿನಿಧಿ 
ತಿಲ್ಲೈ ನಟರಾಜ ದೇವಾಲಯ ಚಿದಂಬರಂ, ಆಕಾಶ ಲಿಂಗ; ಆಕಾಶ ತತ್ವವನ್ನು ಪ್ರತಿನಿಧಿಸಲಿದ್ದು, ಈ ಎಲ್ಲಾ ದೇವಾಲಯಗಳು ದಕ್ಷಿಣ ಭಾರತದಲ್ಲಿವೆ ಎಂಬುದು ವಿಶೇಷವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT