ಓಂ ಪರ್ವತ 
ಭಕ್ತಿ-ಜ್ಯೋತಿಷ್ಯ

ಓಂ ಆಕೃತಿಯಲ್ಲಿರುವ ಪರ್ವತದ ಮಹತ್ವ, ಅಚ್ಚರಿಗಳೇನು ಗೊತ್ತೇ?

ಅತ್ಯಂತ ಪುರಾತನ ನಾಗರಿಕತೆ ಹೊಂದಿರುವ ಭಾರತದಲ್ಲಿ ಅನೇಕ ಅಚ್ಚರಿಗಳ ತಾಣವಿದೆ. ಕೆಲವು ಪ್ರದೇಶಗಳಿಗಂತೂ ಎತ್ತರದಿಂದ ಅವು ಕಾಣುವ ಆಕಾರಗಳನ್ನೇ ಆ ಪ್ರದೇಶಗಳಿಗೆ ನಾಮಕರಣ ಮಾಡಿರುತ್ತಾರೆ.

ಅತ್ಯಂತ ಪುರಾತನ ನಾಗರಿಕತೆ ಹೊಂದಿರುವ ಭಾರತದಲ್ಲಿ ಅನೇಕ ಅಚ್ಚರಿಗಳ ತಾಣವಿದೆ. ಕೆಲವು ಪ್ರದೇಶಗಳಿಗಂತೂ ಎತ್ತರದಿಂದ ಅವು ಕಾಣುವ ಆಕಾರಗಳನ್ನೇ ಆ ಪ್ರದೇಶಗಳಿಗೆ ನಾಮಕರಣ ಮಾಡಿರುತ್ತಾರೆ. ಉದಾಹರಣೆಗೆ ಹೃದಯದ ಆಕಾರದಲ್ಲೇ ಇರುವ ಪ್ರದೇಶಕ್ಕೆ ಮಾನಸ ಸರೋವರ ಎಂದು ಹೇಳುತ್ತಾರೆ.
ಸರ್ಪವೊಂದು ತನ್ನ 5 ಹೆಡೆಗಳನ್ನು ಅರಳಿಸಿದ ವಿನ್ಯಾಸದಂತೆ ತೋರುವ ಕುಮಾರ ಪರ್ವತವಿರುವ ಪ್ರದೇಶ ಇಂದು ಕುಕ್ಕೆ ಸುಬ್ರಹ್ಮಣ್ಯವಾಗಿದೆ. ಗೂಗಲ್ ಅರ್ಥ್ ಇಲ್ಲದೇ ಇದ್ದ ಕಾಲದಲ್ಲಿಯೂ ಸನಾತನ ಧರ್ಮದ ಋಷಿಗಳ ತಪಸ್ಸಿನ ಸಿದ್ಧಿಯಿಂದಾಗಿ ಆ ಪ್ರದೇಶಗಳು ಅಂತರಿಕ್ಷದಿಂದ ಕಾಣುವ ಆಕೃತಿಯನ್ನು ನಿಖರವಾಗಿ ತಿಳಿಸಿದ್ದರು. ಅಂತೆಯೇ ಕೈಲಾಸದಲ್ಲಿ ಶಿವನಿದ್ದಾನೆ ಎಂಬ ನಂಬಿಕೆಯನ್ನು ನಿಜ ಮಾಡುವಂತೆ ಮತ್ತೊಂದು ಅಚ್ಚರಿಯ ಪ್ರದೇಶ ಹಿಮಾಲಯದಲ್ಲಿದೆ.
ಹಿಂದೂಗಳು ಪವಿತ್ರ ಎಂದು ಭಾವಿಸುವ ಓಂ ಕಾರದ ಚಿನ್ಹೆ ಹಿಮಾಲಯದಲ್ಲಿ ಕಂಡುಬರುತ್ತದೆ. ಅದಕ್ಕೆ ಓಂ ಪರ್ವತ ಎಂದೇ ಹೆಸರು. ಇದೇ ಪರ್ವತದಲ್ಲಿ ಪಾರ್ವತಿ ಸರೋವರ ಇರುವುದು ಮತ್ತೊಂದು ಅಚ್ಚರಿ. ನೋಡುವುದಕ್ಕೆ ಟಿಬೆಟ್ ನಲ್ಲಿರುವ ಮೌಂಟ್ ಕೈಲಾಶ್ ನಂತೆಯೇ ಕಾಣುವ ಓಂ ಪರ್ವತನಲ್ಲಿರುವ ಮತ್ತೊಂದು ಸರೋವರ ಜಾಗ್ಲಿಂಕಾಂಗ್ ಮಾನಸ ಸರೋವರದಷ್ಟೇ ಪವಿತ್ರ ಎಂದು ಹೇಳಲಾಗುತ್ತದೆ.
ಹಿಂದೂಗಳಿಗೆ ಮಾನಸ ಸರೋವರ ಎಷ್ಟು ಪವಿತ್ರವೋ (ॐ) ಆಕಾರದಲ್ಲಿರುವ ಓಂ ಪರ್ವತವೂ ಅಷ್ಟೇ ಪವಿತ್ರವಾಗಿದ್ದು ಮಾನಸಸರೋವರದ ಯಾತ್ರಾರ್ಥಿಗಳು (ॐ) ಪರ್ವತವನ್ನೂ ವೀಕ್ಷಿಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಪ್ರಧಾನಿ ಮೋದಿ ಸಹಾಯದ ಭರವಸೆ; ಕೊಚ್ಚಿಯಲ್ಲಿ 'ವಿಕ್ಷಿತ್ ಕೇರಳಂ'ಗೆ ಚಾಲನೆ

'ರಕ್ಷಿತ್ ಶೆಟ್ಟಿ - ರಶ್ಮಿಕಾ ನಿಶ್ಚಿತಾರ್ಥ ಮುರಿದುಬೀಳಲು ಇದೇ ಕಾರಣ': ತಾಯಿ ಸುಮನ್ ಮಂದಣ್ಣರದ್ದು ಎನ್ನಲಾದ ಆಡಿಯೋ ವೈರಲ್!

IPL 2026: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ: ಮಾರ್ಚ್ 28 ರಂದು RCB vs SRH

ಹಾರ್ಮುಜ್ ಜಲಸಂಧಿ ಬಳಿ ದಾಳಿ: ಭಾರತ ಕಡೆಗೆ ಹೊರಟ್ಟಿದ್ದ ಥಾಯ್ ಕಾರ್ಗೋ ಹಡಗಿನಲ್ಲಿ ಬೆಂಕಿ, ಕಪ್ಪು ಹೊಗೆ! ಹೊಣೆ ಹೊತ್ತ ಇರಾನ್

ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್‌ ದಾಳಿ; ಭಾರತೀಯ ಸೇರಿ ನಾಲ್ವರಿಗೆ ಗಾಯ

SCROLL FOR NEXT