ಸಾಂದರ್ಭಿಕ ಚಿತ್ರ 
ಭಕ್ತಿ-ಜ್ಯೋತಿಷ್ಯ

ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ತರ್ಪಣ ನೀಡುವ ದಿನ 

ಮಹಾಲಯ ಅಮಾವಾಸ್ಯೆಯನ್ನು ಸರ್ವ ಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ, ಈ ವರ್ಷ ನಾಳೆ(ಅಕ್ಟೋಬರ್ 6 ರಂದು ಬುಧವಾರ) ಆಚರಿಸಲಾಗುತ್ತದೆ.

ಮಹಾಲಯ ಅಮಾವಾಸ್ಯೆಯನ್ನು ಇಂದು ಅಕ್ಟೋಬರ್ 6ರಂದು ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುತ್ತಿದೆ. ಮಹಾಲಯ ಪಿತೃಪಕ್ಷ ಶ್ರಾದ್ಧದ ಕೊನೆಯ ದಿನವಾಗಿದೆ ಮತ್ತು ದುರ್ಗಾಪೂಜೆ, ದಸರಾ ಹಬ್ಬದ ಆರಂಭಕ್ಕೆ ಮುನ್ನುಡಿಯಾಗಿದೆ. ದುರ್ಗಾದೇವಿಯು ಮಹಿಷಾಸುರ ರಾಕ್ಷಸನನ್ನು ಸೋಲಿಸಿದ ದಿನವೆಂದು ಮಹಾಲಯವನ್ನು ಪರಿಗಣಿಸಲಾಗಿದೆ.

ಈ ದಿನ, ಪೂರ್ಣಿಮಾ ತಿಥಿ, ಚತುರ್ದಶಿ ತಿಥಿ ಮತ್ತು ಅಮಾವಾಸ್ಯ ತಿಥಿಯಂದು ಕೊನೆಯುಸಿರೆಳೆದವರಿಗೆ ಶ್ರಾದ್ಧ ಮತ್ತು ತರ್ಪಣ ಆಚರಣೆಗಳನ್ನು ಮಾಡಲಾಗುತ್ತದೆ.

ಮಹಾಲಯ ಅಮಾವಾಸ್ಯೆಯು ಪಿತೃ ಪಕ್ಷ ಅವಧಿಯ ಮುಕ್ತಾಯವನ್ನು ಮತ್ತು ದೇವಿ ಪಕ್ಷದ ಅಂದರೆ ನವರಾತ್ರಿಯ ಆರಂಭದ ಹಿಂದಿನ ದಿನವಾಗಿರುತ್ತದೆ. ಮಹಾಲಯ ಅಮಾವಾಸ್ಯೆಯಿಂದ ತೊಡಗಿ ಕೆಲವು ಭಕ್ತರು ಒಂಬತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ, ನವದುರ್ಗೆಯನ್ನು ಪೂಜಿಸುತ್ತಾರೆ. 

ಈ ದಿನ, ದುರ್ಗಾ ದೇವಿಯು ತನ್ನ ಸ್ವರ್ಗ ನಿವಾಸ ಅಥವಾ ಕೈಲಾಸದಿಂದ ಪಲ್ಲಕಿ, ದೋಣಿ, ಆನೆ ಅಥವಾ ಕುದುರೆಯ ಮೇಲೆ ಭೂಮಿಗೆ ಇಳಿಯುತ್ತಾಳೆ ಎಂದು ಭಕ್ತರು ನಂಬುತ್ತಾರೆ, ಹೀಗಾಗಿ ಮಹಾಲಯ ಅಮಾವಾಸ್ಯೆಯ ನಂತರ ದುರ್ಗಾ ಪೂಜೆಯ ಆಚರಣೆಗಳು ನಡೆಯುತ್ತದೆ. 

ಒಂದರ್ಥದಲ್ಲಿ ಮಹಾಲಯ ಅಮವಾಸ್ಯೆ ದುರ್ಗಾ ಪೂಜೆಯ ಆರಂಭಕ್ಕೆ ಬಾಗಿಲು ತೆರೆಯುವ ದಿನವಾಗಿದೆ. ದುರ್ಗೆಯನ್ನು ಆರಾಧಿಸುವ ಬಂಗಾಳಿಯರು ಬೆಳಗ್ಗೆಯೇ ಎದ್ದು ಸ್ನಾನಾದಿಗಳನ್ನು ಮಾಡಿ ಮಹಿಷಾಸುರ ಮರ್ದಿನಿಯ ಶ್ಲೋಕ, ಮಂತ್ರಗಳನ್ನು ಪಠಿಸುತ್ತಾರೆ.

ಮಹಾಲಯ ಅಮವಾಸ್ಯೆ ಆಚರಣೆ: ಈ ದಿನದ ಪ್ರಮುಖ ಆಚರಣೆ ಎಂದರೆ ಕುಟುಂಬದಲ್ಲಿ ಅಗಲಿದ ಆತ್ಮವನ್ನು ಸ್ಮರಿಸಲು ತರ್ಪಣ ನೀಡುವುದು. ತಮ್ಮ ಪೂರ್ವಜರ ಉದ್ಧಾರಕ್ಕಾಗಿ ಮುಂಜಾನೆಯೇ ಅನೇಕ ಜನರು ಪಿತೃ ತರ್ಪಣವನ್ನು ನೀಡುತ್ತಾರೆ. ಈ ದಿನ ದುರ್ಗೆ ಮಾತೆಯನ್ನು ಜನರು ಮಂತ್ರಗಳನ್ನು ಪಠಿಸುವ ಮೂಲಕ ಭೂಮಿಗೆ ಇಳಿಯುವಂತೆ ಆಹ್ವಾನಿಸುತ್ತಾರೆ. ಈ ದಿನವು 'ದೇವಿ-ಪಕ್ಷ'ದ ಆರಂಭ ಮತ್ತು' ಪಿತೃ-ಪಕ್ಷ'ದ ಅಂತ್ಯವನ್ನು ಸೂಚಿಸುತ್ತದೆ, ಹಿಂದೂ ಧರ್ಮೀಯರು ತಮ್ಮ ಪೂರ್ವಜರಿಗೆ ಗೌರವ ಸಲ್ಲಿಸಿ ತಮ್ಮ ಜೀವನಕ್ಕೆ ಹಿರಿಯರು ನೀಡಿದ ಕೊಡುಗೆಗೆ ಕೃತಜ್ಞತೆ ಸಲ್ಲಿಸುತ್ತಾರೆ. 

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಹಾಲಯ ಅಮಾವಸ್ಯೆಯ ಅಂಗವಾಗಿ ತಮ್ಮ ಪೂರ್ವಜರಿಗೆ ತಿಲ ತರ್ಪಣ ನೀಡಿ, ಪೂಜಿಸುವ ಸಂಪ್ರದಾಯ ರೂಢಿಯಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

SCROLL FOR NEXT