ದೇವಿ ಮಹಾಗೌರಿ  
ಭಕ್ತಿ-ಭವಿಷ್ಯ

Navaratri 8th day: ನವರಾತ್ರಿಯ 8ನೇ ದಿನ ಮಹಾಗೌರಿ ಪೂಜೆ

ಹಿಂದೂ ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿಯ ಸಮಯದಲ್ಲಿ, ತಾಯಿ ದುರ್ಗೆಯ 9 ರೂಪಗಳನ್ನು ವಿಧಿ - ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ.

ನವರಾತ್ರಿಯ 8ನೇ ದಿನ ಮಹಾಗೌರಿಯ ದಿನ. ದುರ್ಗಾ ದೇವಿಯ ಅತ್ಯಂತ ಸುಂದರ ರೂಪವಾದ ಗೌರಿ ದೇವಿಯನ್ನು ಈ ದಿನ ಪೂಜಿಸಲಾಗುವುದು.

ಹಿಂದೂ ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿಯ ಸಮಯದಲ್ಲಿ, ತಾಯಿ ದುರ್ಗೆಯ 9 ರೂಪಗಳನ್ನು ವಿಧಿ - ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ನವರಾತ್ರಿಯ ದಿನಗಳಲ್ಲಿ, ದುರ್ಗಾ ದೇವಿಯು ಒಂಬತ್ತು ದಿನಗಳವರೆಗೆ ಭೂಮಿಗೆ ಬಂದು ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಎಂಬುದು ನಂಬಿಕೆ. ಅದೇ ರೀತಿ ನವರಾತ್ರಿಯ ಎಂಟನೇ ದಿನವನ್ನು ಮಾತೆ ಮಹಾಗೌರಿಗೆ ಸಮರ್ಪಿಸಲಾಗಿದೆ. ಮಹಾಗೌರಿಯನ್ನು ಪೂಜಿಸುವುದರಿಂದ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ.

ಮಹಾಗೌರಿ ಕಥೆ

ಸತಿ ದೇವಿಯು ಶಿವನನ್ನು ತನ್ನ ಪತಿಯಾಗಿ ಪಡೆಯಲು ಕಠಿಣ ತಪಸ್ಸು ಮಾಡುತ್ತಿದ್ದಾಗ, ಅವಳ ದೇಹದಾದ್ಯಂತ ಮಣ್ಣು ಸಂಗ್ರಹವಾಯಿತು. ಮಹಾದೇವನು ಸಂತೋಷಗೊಂಡು ಆಕೆಯನ್ನು ತನ್ನ ಪತ್ನಿಯಾಗಿ ಸ್ವೀಕರಿಸಲು ಆಶೀರ್ವದಿಸಿದಾಗ, ದೇವಿಯು ಗಂಗಾ ನೀರಿನಲ್ಲಿ ಸ್ನಾನ ಮಾಡಿದಳು. ನಂತರ ಅವಳ ರೂಪವು ತುಂಬಾ ಪ್ರಕಾಶಮಾನವಾಗಿ ಕಾಣಲು ಪ್ರಾರಂಭಿಸಿತು. ಮಾತೃ ದೇವಿಯ ಸುಂದರವಾದ ಮೈಬಣ್ಣವನ್ನು ನೋಡಿದ ಮಹಾದೇವನು ಅವಳಿಗೆ ಮಹಾಗೌರಿ ಎಂದು ಹೆಸರನ್ನಿಟ್ಟನು.

ಮಹಾಗೌರಿ ಸ್ವರೂಪ

ದುರ್ಗಾ ದೇವಿಯು ಬ್ರಹ್ಮಾಂಡದ ಕಲ್ಯಾಣಕ್ಕಾಗಿ ನಾನಾ ಅವತಾರಗಳನ್ನು ತೆಗೆದುಕೊಂಡಿದ್ದಾಳೆ. ನವರಾತ್ರಿಯ 8ನೇ ದಿನದಂದು ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ನಾಲ್ಕು ಕೈಗಳನ್ನು ಹೊಂದಿದ್ದು, ಗೂಳಿಯ ಮೇಲೆ ಕುಳಿತು ಸಂಚಾರವನ್ನು ಮಾಡುತ್ತಾಳೆ. ತಾಯಿಯು ತನ್ನ ಬಲಗಡೆಯಲ್ಲಿನ ಮೇಲಿನ ಕೈಯಲ್ಲಿ ಅಭಯ ಮುದ್ರೆಯನ್ನು ಹಿಡಿದುಕೊಂಡಿರುತ್ತಾಳೆ ಮತ್ತು ಕೆಳಗಿನ ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡಿರುತ್ತಾಳೆ. ಎಡಭಾಗದ ಮೇಲಿನ ಕೈಯಲ್ಲಿ ಡಮರುವನ್ನು ಮತ್ತು ಕೆಳಗಿನ ಎಡಗೈಯಲ್ಲಿ ವರ ಮುದ್ರೆಯನ್ನು ಹಿಡಿದುಕೊಂಡಿರುತ್ತಾಳೆ.

ನೈವೇದ್ಯ

ದುರ್ಗಾ ದೇವಿಯನ್ನು ಆಕೆಯ ವಿವಿಧ ರೂಪಗಳೊಂದಿಗೆ 9 ದಿನಗಳ ಕಾಲ ಪೂಜಿಸಲಾಗುತ್ತದೆ. ನವರಾತ್ರಿ ಹಬ್ಬದ ಎಂಟನೇ ದಿನದಂದು ದುರ್ಗಾ ದೇವಿಯ ಮಹಾಗೌರಿ ರೂಪಕ್ಕೆ ಆರಾಧನೆ ನಡೆಯಲಿದ್ದು, ಈ ಸಮಯದಲ್ಲಿ ಮಹಾಗೌರಿಗೆ ತೆಂಗಿನಕಾಯಿಯಿಂದ ಮಾಡಿದ ಸಿಹಿತಿಂಡಿಯನ್ನು ನೈವೇದ್ಯವಾಗಿ ಅರ್ಪಿಸಬೇಕು. ಇದನ್ನು ಹೊರತುಪಡಿಸಿ ತಾಯಿಗೆ ಹಲ್ವಾ, ಕಾಳುಗಳನ್ನೂ ಕೂಡ ನೈವೇದ್ಯವಾಗಿ ನೀಡಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ರಾಹುಲ್ ಗಾಂಧಿ ಎದೆಗೆ ಗುಂಡು ಹೊಡೆಯುತ್ತೇವೆ': ಕೇರಳ BJP ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ; ಅಮಿತ್ ಶಾಗೆ ಪತ್ರ ಬರೆದ ಕಾಂಗ್ರೆಸ್, ಕ್ರಮಕ್ಕೆ ಆಗ್ರಹ

ಮೈಸೂರಿನಲ್ಲಿ ವರ್ಜಿನ್ ಸೆಕ್ಸ್ ದಂಧೆ ಬಯಲು; ಋತುಮತಿಯಾದ ಬಾಲಕಿಯರೇ ಟಾರ್ಗೆಟ್!

ಯಾವುದೇ ನಾಯಕರು ತಮ್ಮ ಅಭಿಮಾನಿಗಳ ಸಾವು ಬಯಸಲ್ಲ, ವದಂತಿ ಹರಡಬೇಡಿ: ಸ್ಟಾಲಿನ್

ದೇವಾಲಯದ ಹೊರಗೆ ಹಿಂದೂಯೇತರರು ಪ್ರಸಾದ ಮಾರಾಟ ಮಾಡುವುದು ಕಂಡರೆ ಹೊಡೆಯಿರಿ: ಪ್ರಜ್ಞಾ ಠಾಕೂರ್

2008 Mumbai Attacks: 'ಚಿದಂಬರಂ ರಹಸ್ಯ' ಬಯಲು; ಸೋನಿಯಾ ವಿರುದ್ಧ ಬಿಜೆಪಿ ಕಿಡಿ!

SCROLL FOR NEXT