ದೇವಿ ಮಹಾಗೌರಿ  
ಭಕ್ತಿ-ಜ್ಯೋತಿಷ್ಯ

Navaratri 8th day: ನವರಾತ್ರಿಯ 8ನೇ ದಿನ ಮಹಾಗೌರಿ ಪೂಜೆ

ಹಿಂದೂ ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿಯ ಸಮಯದಲ್ಲಿ, ತಾಯಿ ದುರ್ಗೆಯ 9 ರೂಪಗಳನ್ನು ವಿಧಿ - ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ.

ನವರಾತ್ರಿಯ 8ನೇ ದಿನ ಮಹಾಗೌರಿಯ ದಿನ. ದುರ್ಗಾ ದೇವಿಯ ಅತ್ಯಂತ ಸುಂದರ ರೂಪವಾದ ಗೌರಿ ದೇವಿಯನ್ನು ಈ ದಿನ ಪೂಜಿಸಲಾಗುವುದು.

ಹಿಂದೂ ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿಯ ಸಮಯದಲ್ಲಿ, ತಾಯಿ ದುರ್ಗೆಯ 9 ರೂಪಗಳನ್ನು ವಿಧಿ - ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ನವರಾತ್ರಿಯ ದಿನಗಳಲ್ಲಿ, ದುರ್ಗಾ ದೇವಿಯು ಒಂಬತ್ತು ದಿನಗಳವರೆಗೆ ಭೂಮಿಗೆ ಬಂದು ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಎಂಬುದು ನಂಬಿಕೆ. ಅದೇ ರೀತಿ ನವರಾತ್ರಿಯ ಎಂಟನೇ ದಿನವನ್ನು ಮಾತೆ ಮಹಾಗೌರಿಗೆ ಸಮರ್ಪಿಸಲಾಗಿದೆ. ಮಹಾಗೌರಿಯನ್ನು ಪೂಜಿಸುವುದರಿಂದ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ.

ಮಹಾಗೌರಿ ಕಥೆ

ಸತಿ ದೇವಿಯು ಶಿವನನ್ನು ತನ್ನ ಪತಿಯಾಗಿ ಪಡೆಯಲು ಕಠಿಣ ತಪಸ್ಸು ಮಾಡುತ್ತಿದ್ದಾಗ, ಅವಳ ದೇಹದಾದ್ಯಂತ ಮಣ್ಣು ಸಂಗ್ರಹವಾಯಿತು. ಮಹಾದೇವನು ಸಂತೋಷಗೊಂಡು ಆಕೆಯನ್ನು ತನ್ನ ಪತ್ನಿಯಾಗಿ ಸ್ವೀಕರಿಸಲು ಆಶೀರ್ವದಿಸಿದಾಗ, ದೇವಿಯು ಗಂಗಾ ನೀರಿನಲ್ಲಿ ಸ್ನಾನ ಮಾಡಿದಳು. ನಂತರ ಅವಳ ರೂಪವು ತುಂಬಾ ಪ್ರಕಾಶಮಾನವಾಗಿ ಕಾಣಲು ಪ್ರಾರಂಭಿಸಿತು. ಮಾತೃ ದೇವಿಯ ಸುಂದರವಾದ ಮೈಬಣ್ಣವನ್ನು ನೋಡಿದ ಮಹಾದೇವನು ಅವಳಿಗೆ ಮಹಾಗೌರಿ ಎಂದು ಹೆಸರನ್ನಿಟ್ಟನು.

ಮಹಾಗೌರಿ ಸ್ವರೂಪ

ದುರ್ಗಾ ದೇವಿಯು ಬ್ರಹ್ಮಾಂಡದ ಕಲ್ಯಾಣಕ್ಕಾಗಿ ನಾನಾ ಅವತಾರಗಳನ್ನು ತೆಗೆದುಕೊಂಡಿದ್ದಾಳೆ. ನವರಾತ್ರಿಯ 8ನೇ ದಿನದಂದು ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ನಾಲ್ಕು ಕೈಗಳನ್ನು ಹೊಂದಿದ್ದು, ಗೂಳಿಯ ಮೇಲೆ ಕುಳಿತು ಸಂಚಾರವನ್ನು ಮಾಡುತ್ತಾಳೆ. ತಾಯಿಯು ತನ್ನ ಬಲಗಡೆಯಲ್ಲಿನ ಮೇಲಿನ ಕೈಯಲ್ಲಿ ಅಭಯ ಮುದ್ರೆಯನ್ನು ಹಿಡಿದುಕೊಂಡಿರುತ್ತಾಳೆ ಮತ್ತು ಕೆಳಗಿನ ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡಿರುತ್ತಾಳೆ. ಎಡಭಾಗದ ಮೇಲಿನ ಕೈಯಲ್ಲಿ ಡಮರುವನ್ನು ಮತ್ತು ಕೆಳಗಿನ ಎಡಗೈಯಲ್ಲಿ ವರ ಮುದ್ರೆಯನ್ನು ಹಿಡಿದುಕೊಂಡಿರುತ್ತಾಳೆ.

ನೈವೇದ್ಯ

ದುರ್ಗಾ ದೇವಿಯನ್ನು ಆಕೆಯ ವಿವಿಧ ರೂಪಗಳೊಂದಿಗೆ 9 ದಿನಗಳ ಕಾಲ ಪೂಜಿಸಲಾಗುತ್ತದೆ. ನವರಾತ್ರಿ ಹಬ್ಬದ ಎಂಟನೇ ದಿನದಂದು ದುರ್ಗಾ ದೇವಿಯ ಮಹಾಗೌರಿ ರೂಪಕ್ಕೆ ಆರಾಧನೆ ನಡೆಯಲಿದ್ದು, ಈ ಸಮಯದಲ್ಲಿ ಮಹಾಗೌರಿಗೆ ತೆಂಗಿನಕಾಯಿಯಿಂದ ಮಾಡಿದ ಸಿಹಿತಿಂಡಿಯನ್ನು ನೈವೇದ್ಯವಾಗಿ ಅರ್ಪಿಸಬೇಕು. ಇದನ್ನು ಹೊರತುಪಡಿಸಿ ತಾಯಿಗೆ ಹಲ್ವಾ, ಕಾಳುಗಳನ್ನೂ ಕೂಡ ನೈವೇದ್ಯವಾಗಿ ನೀಡಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT