ಆಷಾಢಮಾಸದಲ್ಲಿ ಕೃತಿಕಾ ನಕ್ಷತ್ರವು ಆಗಸ್ಟ್ 6 ರ ಗುರುವಾರ ರಾತ್ರಿ 8:13 ಕ್ಕೆ ಪ್ರಾರಂಭವಾಗುತ್ತದೆ. ಆದ್ದರಿಂದ, ದೇವಾಲಯಗಳಲ್ಲಿ ಪೂಜೆಗಳು ಮತ್ತು ಉಪವಾಸಗಳನ್ನು ಮುಖ್ಯವಾಗಿ ಆಗಸ್ಟ್ 6 (ಗುರುವಾರ) ರಿಂದ ಆಗಸ್ಟ್ 7 (ಶುಕ್ರವಾರ) ವರೆಗೆ ಆಚರಿಸಲಾಗುತ್ತದೆ.
ಆಡಿ ಕೃತಿಕಾ ಮಹತ್ವ
ಸುಬ್ರಹ್ಮಣ್ಯ ಸ್ವಾಮಿಯ ಜನನಕ್ಕೆ ಸಂಬಂಧಿಸಿದ ಆರು ಕೃತಿಕಾ ನಕ್ಷತ್ರಗಳನ್ನು (ಕಾರ್ತಿಕ ನಕ್ಷತ್ರದ ದೇವತೆಗಳು) ಗೌರವಿಸುವ ದಿನವಾಗಿದೆ. ಆಡಿ ಕೃತಿಕಾ (ಆದಿ ಕೃತಿಗೈ) ಎನ್ನುವುದು ಹಿಂದೂ ಧರ್ಮದಲ್ಲಿ, ವಿಶೇಷವಾಗಿ ತಮಿಳು ಕ್ಯಾಲೆಂಡರ್ನ ಆಷಾಡ ಮಾಸದಲ್ಲಿ ಕೃತಿಕಾ ನಕ್ಷತ್ರದ ದಿನದಂದು ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ಇದು ಶಿವ ಮತ್ತು ಪಾರ್ವತಿಯ ಮಗನಾದ ಸುಬ್ರಹ್ಮಣ್ಯ ಸ್ವಾಮಿ (ಮುರುಗನ್) ಅವರಿಗೆ ಸಮರ್ಪಿತವಾದ ಪವಿತ್ರ ದಿನವಾಗಿದೆ. ಈ ವರ್ಷ (2026) ಈ ಹಬ್ಬವು ಆಗಸ್ಟ್ 7 ರಂದು ಬಂದಿದೆ.
ಪೌರಾಣಿಕ ಹಿನ್ನೆಲೆ
ಶಿವನ ಮೂರನೇ ಕಣ್ಣಿನಿಂದ ಉದ್ಭವಿಸಿದ ದಿವ್ಯ ಕಿಡಿಗಳು ಶರವಣ ಪೋಯಿಗೆಯನ್ನು ಸೇರಿ ಆರು ಶಿಶುಗಳಾದವು. ಈ ಆರು ಮಕ್ಕಳನ್ನು ಕಾರ್ತಿಕಾ ನಕ್ಷತ್ರದ ಆಕಾಶದ ಅಪ್ಸರೆಯರು (ಕೃತಿಕಾ ಸ್ತ್ರೀಯರು) ಸಾಕಿ ಬೆಳೆಸಿದರು. ತಾಯಿ ಪಾರ್ವತಿಯು ಈ ಆರು ಮಕ್ಕಳನ್ನು ಒಂದಾಗಿ ಸೇರಿಸಿ ಆರು ಮುಖಗಳಿರುವ 'ಷಣ್ಮುಖ' (ಕಾರ್ತಿಕೇಯ) ರೂಪವನ್ನು ನೀಡಿದಳು. ಮುರುಗ ದೇವನು ಕೃತಿಕಾ ನಕ್ಷತ್ರದವರ ಆರೈಕೆಯಲ್ಲಿ ಬೆಳೆದ ಕಾರಣ, ಆ ನಕ್ಷತ್ರ ಬರುವ ಆಡಿ ತಿಂಗಳ ಕೃತಿಕಾ ದಿನವು ಅತ್ಯಂತ ವಿಶೇಷವಾಯಿತು.
ಪಾಪಮುಕ್ತಿ ಮತ್ತು ಇಷ್ಟಾರ್ಥ ಸಿದ್ಧಿ
ಆಡಿ ಕೃತಿಕಾ ದಿನದಂದು ಮುರುಗನನ್ನು ಪೂಜಿಸುವುದರಿಂದ ಸಾಲಗಳು ತೀರುತ್ತವೆ, ಶತ್ರುಗಳು ಮತ್ತು ದುಷ್ಟಶಕ್ತಿಗಳು ದೂರವಾಗುತ್ತವೆ. ಶಿಕ್ಷಣ ಮತ್ತು ಕೆಲಸದಲ್ಲಿ ಪ್ರಗತಿಗೆ ಕಾರಣವಾಗುತ್ತವೆ ಎಂದು ನಂಬಲಾಗಿದೆ. ಭಕ್ತರು ಹರಕೆ ತೀರಿಸಲು ಕಾವಾಡಿ ಹೊತ್ತು ದೇವರ ದರ್ಶನ ಪಡೆಯುತ್ತಾರೆ. ಮನೆಯ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ಮುರುಗನ ವಿಗ್ರಹ ಅಥವಾ ಚಿತ್ರಪಟಕ್ಕೆ ಹೂವುಗಳಿಂದ ಅಲಂಕರಿಸಿ, ವಿಶೇಷವಾಗಿ ಕೃತಿಕಾ ನಕ್ಷತ್ರದ ಸಂಕೇತವಾಗಿ ದೀಪಗಳನ್ನು ಹಚ್ಚಿ ಪೂಜಿಸಲಾಗುತ್ತದೆ.
ಉಪವಾಸ (ವ್ರತ)
ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಎದ್ದು, ಸ್ನಾನ ಮಾಡಿ ಮತ್ತು ಉಪವಾಸವನ್ನು ಪ್ರಾರಂಭಿಸಿ. ಸಂಪೂರ್ಣ ಉಪವಾಸ ಮಾಡಲು ಸಾಧ್ಯವಾಗದಿದ್ದವರು ಹಾಲು, ಹಣ್ಣು ಸೇವಿಸುವ ಮೂಲಕ ಲಘು ಉಪವಾಸ ಮಾಡಬಹುದು.
ಕಾವಡಿ ಸೇವೆ
ಸಮೀಪದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಪಲಾಭಿಷೇಕ ಮತ್ತು ಪಂಚಾಮೃತಾಭಿಷೇಕಗಳು ಈ ದಿನದ ಪ್ರಮುಖ ನೈವೇದ್ಯಗಳಾಗಿವೆ. ಭಕ್ತರು ತಮ್ಮ ಭಕ್ತಿಯ ಸಂಕೇತವಾಗಿ ಮಯೂರ (ನೆವಿಲು ಗರಿ) ಹಾಗೂ ಹೂವುಗಳಿಂದ ಅಲಂಕರಿಸಿದ ಕಾವಡಿಯನ್ನು ಹೆಗಲ ಮೇಲೆ ಹೊತ್ತು ದೇವಸ್ಥಾನಕ್ಕೆ ಯಾತ್ರೆ ಮಾಡುತ್ತಾರೆ. ತೀವ್ರ ಭಕ್ತಿಯ ಸಂಕೇತವಾಗಿ ಕೆಲ ಭಕ್ತರು ತಮ್ಮ ನಾಲಿಗೆ ಅಥವಾ ಕೆನ್ನೆಗಳಿಗೆ ಸಣ್ಣ ವೇಲ್ (ಅಲಗು/ತ್ರಿಶೂಲ) ಚುಚ್ಚಿಕೊಂಡು ಮೌನ ವ್ರತದೊಂದಿಗೆ ದೇವಸ್ಥಾನಕ್ಕೆ ಹೆಜ್ಜೆ ಹಾಕುತ್ತಾರೆ. ದೇವಸ್ಥಾನ ತಲುಪಿದ ನಂತರ ತಾವು ತಂದ ಹಾಲು, ಜೇನುತುಪ್ಪ ಅಥವಾ ಪಂಚಾಮೃತವನ್ನು ಸ್ವಾಮಿಯ ಅಭಿಷೇಕಕ್ಕೆ ಸಮರ್ಪಿಸುತ್ತಾರೆ.
ನಾಮಜಪ ಮತ್ತು ಮಂತ್ರ ಪಠಣ:
ಮನೆಯಲ್ಲಿ ಅಥವಾ ದೇವಾಲಯದಲ್ಲಿ ಕುಳಿತು "ಓಂ ಸರವಣ ಭವಾಯ ನಮಃ" ಅಥವಾ "ಓಂ ವಲ್ಲಿ ದೇವಸೇನ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿಯೇ ನಮಃ" ಎಂಬ ಮಂತ್ರಗಳನ್ನು ಪಠಿಸಿ. ಸ್ಕಂದಷಷ್ಟಿ ಕವಚವನ್ನು ಕೇಳುವುದು ಮತ್ತು ಪಠಿಸುವುದು ಬಹಳ ವಿಶೇಷವಾಗಿದೆ. ವೇಲ್ ಮುರುಗ ನಾಮಜಪವನ್ನು ಶ್ರದ್ಧೆಯಿಂದ ಕೇಳುವುದು ಮತ್ತು ಜಪಿಸುವುದರಿಂದ ದೇವರ ಕೃಪೆಗೆ ಪಾತ್ರರಾಗಬಹುದಾಗಿದೆ.
ದಾನ:
ಭಕ್ತರು/ಬಡವರಿಗೆ ಆಹಾರವನ್ನು (ವಿಶೇಷವಾಗಿ ಕಾಣಿಕೆಗಳನ್ನು) ನೀಡುವುದು ಅತ್ಯಂತ ಪವಿತ್ರವಾಗಿದೆ.ಮುರುಗನನ್ನು ನಾಳೆ ಅರಳಿ ಹೂವುಗಳು ಮತ್ತು ನವಿಲು ಗರಿಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ.
ಜೇನುತುಪ್ಪ ಮತ್ತು ರಾಗಿ ಪುಡಿಯೊಂದಿಗೆ ಮಿಶ್ರಣ ಮಾಡಿದ ವಿಶೇಷ ಖಾದ್ಯವನ್ನು ಪ್ರಸಾದದ ರೂಪದಲ್ಲಿ ಮುರುಗನಿಗೆ ಅರ್ಪಿಸಲಾಗುತ್ತದೆ.
ಆಡಿ ಕೃತಿಕಾ ದಿನದಂದು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ವಿದ್ಯಾರ್ಥಿಗಳಿಗೆ ಆಹಾರ, ಹಾಲು, ಹಣ್ಣುಗಳು, ಅಧ್ಯಯನ ಸಾಮಗ್ರಿಗಳನ್ನು ವಿತರಿಸುವುದು ಮತ್ತು ದೇವಾಲಯದ ಭಕ್ತರಿಗೆ ಪ್ರಸಾದವನ್ನು ಮುರುಗನನ್ನು ಮೆಚ್ಚಿಸುವ ಒಳ್ಳೆಯ ಕಾರ್ಯಗಳೆಂದು ಪರಿಗಣಿಸಲಾಗುತ್ತದೆ.
ಪೋಷಕರು ತಮ್ಮ ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಯಶಸ್ಸಿಗೆ ಮುರುಗ ದೇವಾಲಯಗಳಿಗೆ ಹಾಲು ಅರ್ಪಿಸುತ್ತಾರೆ. ಹಾಲು ಅರ್ಪಿಸುವ ಪದ್ಧತಿ ಅನೇಕ ಪ್ರದೇಶಗಳಲ್ಲಿ ಪ್ರಚಲಿತವಾಗಿದೆ. ಕೇರಳದ ಪಳನಿ, ತಿರುಚೆಂಡೂರ್, ಸ್ವಾಮಿಮಲೈ ಮತ್ತು ಪಳಮುತಿರ್ ಚೋಲೈನಂತಹ ಅನೇಕ ಸುಬ್ರಹ್ಮಣ್ಯ ದೇವಾಲಯಗಳಲ್ಲಿ, ವಿಶೇಷ ಆಡಿ ಕೃತಿಕಾ ದಿನದಂದು ಪೂಜೆ, ಭಜನೆ ಮಾಡಿ, ನೈವೇದ್ಯ ಅರ್ಪಿಸಿ ಭಕ್ತಿಯಿಂದ ದೀಪ ಪೂಜೆ ಮಾಡಲಾಗುತ್ತದೆ.
ಡಾ. ಪಿ. ಬಿ. ರಾಜೇಶ್
ಜ್ಯೋತಿಷಿಗಳು ಮತ್ತು ಸಂಖ್ಯಾಶಾಸ್ತ್ರಜ್ಞರು