ಕಾರುಗಳ ಮಾರಾಟದಲ್ಲಿ ಚೇತರಿಕೆ, ದ್ವಿಚಕ್ರ ವಾಹನ ಮಾರಾಟ ಕುಸಿತ 
ವಾಹನ

ನೋಟು ನಿಷೇಧ ಪರಿಣಾಮ: ಕಾರುಗಳ ಮಾರಾಟದಲ್ಲಿ ಚೇತರಿಕೆ, ದ್ವಿಚಕ್ರ ವಾಹನ ಮಾರಾಟ ಕುಸಿತ!

ನೋಟು ನಿಷೇಧವಾಗಿ ನಾಲ್ಕು ತಿಂಗಳ ನಂತರ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಂಡಿದ್ದರೆ, ದ್ವಿಚಕ್ರ ವಾಹನಗಳ ಮಾರಾಟ ಇನ್ನೂ ಚೇತರಿಕೆ ಕಂಡಿಲ್ಲ

ಚೆನ್ನೈ: 500, 1000 ರೂ ಮುಖಬೆಲೆಯ ನೋಟು ನಿಷೇಧದ ನಂತರ ದ್ವಿಚಕ್ರ ವಾಹನ, ಕಾರುಗಳ ಮಾರಾಟ ಕುಸಿದಿತ್ತು. ನೋಟು ನಿಷೇಧವಾಗಿ ನಾಲ್ಕು ತಿಂಗಳ ನಂತರ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಂಡಿದ್ದರೆ, ದ್ವಿಚಕ್ರ ವಾಹನಗಳ ಮಾರಾಟ ಇನ್ನೂ ಚೇತರಿಕೆ ಕಂಡಿಲ್ಲ ಎಂದು ಇಂಡಿಯನ್ ಆಟೋಮೊಬೈಲ್ ಉತ್ಪಾದಕರ ಸೊಸೈಟಿ ಮಾಹಿತಿ ನೀಡಿದೆ. 
ಫೆಬ್ರವರಿ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ.9.01 ರಷ್ಟು ಏರಿಕೆಯಾಗಿದ್ದು ಕಳೆದ ವರ್ಷ ಇದೇ ತಿಂಗಳಲ್ಲಿ 2,34,244 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿದ್ದರೆ ಈ ವರ್ಷದ ಫೆಬ್ರವರಿಯಲ್ಲಿ 2,55,359 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿವೆ ಎಂದು ಎಸ್ಐಎಎಂ ಹೇಳಿದೆ. 
ದೇಶೀಯ ಕಾರು ಮಾರಾಟ ವ್ಯಾಪರದಲ್ಲಿ ಶೇ.4.9 ರಷ್ಟು ಏರಿಕೆಯಾಗಿದ್ದು ಕಳೆದ ವರ್ಷ 1,64,559 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿದ್ದರೆ, ಈ ವರ್ಷದ ಫೆಬ್ರವರಿಯಲ್ಲಿ 1,72,623 ಯುನಿಟ್ ನಷ್ಟು ವಾಹನಗಳು ಮಾರಾಟವಾಗಿದೆ. ನೋಟು ನಿಷೇಧದ ನಂತರದ ತಿಂಗಳಲ್ಲಿ ಅಂದರೆ 2016 ರ ಡಿಸೆಂಬರ್ ನಲ್ಲಿ ಶೇ.4.4 ರಷ್ಟು ಕುಸಿತ ಕಂಡಿತ್ತು. ಆದರೆ ಜನವರಿಯಲ್ಲಿ ಶೇ.14.4 ರಷ್ಟು ಏರಿಕೆಯಾಗುವ ಮೂಲಕ ಚೇತರಿಕೆ ಕಂಡಿತ್ತು. ನೋಟು ನಿಷೇಧದ ಪರಿಣಾಮದಿಂದ ಕಾರುಗಳ ಮಾರಾಟ ಚೇತರಿಕೆ ಕಂಡಿದೆಯಾದರೂ ದ್ವಿಚಕ್ರ ವಾಹನ, ಬೈಕ್ ಗಳ ಮಾರಾಟ ಇನ್ನೂ ಚೇತರಿಕೆ ಕಂಡಿಲ್ಲ. ಕಳೆದ ವರ್ಷದ ಫೆಬ್ರವರಿಯಲ್ಲಿ 8,59,582 ಯುನಿಟ್ ನಷ್ಟು ಮಾರಾಟವಾಗಿದ್ದ ದ್ವಿಚಕ್ರವಾಹನಗಳು ಈ ವರ್ಷದ ಫೆಬ್ರವರಿಯಲ್ಲಿ ಕೇವಲ 8,32,697 ಯುನಿಟ್ ಗಳಿಗಷ್ಟೇ ಸೀಮಿತವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

Maharashtra: ಶಾಲಾ ಹಾಸ್ಟೆಲ್‌ನಲ್ಲಿ ಭೀಕರ ದುರಂತ: ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!

ಶಾಲೆಗಳಿಗೆ ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಮಂದಿಗೆ ನೋ ಎಂಟ್ರಿ: ಉತ್ತರ ಪ್ರದೇಶ ಸರ್ಕಾರದ ಖಡಕ್ ಆದೇಶ

'ಬಿಜೆಪಿಗೆ ಖುಷಿ ಕೊಡುವ ಹೇಳಿಕೆ ನೀಡಬೇಡಿ': Rahul Gandhi ಕುರಿತ ಕಾಂಗ್ರೆಸ್ ಸಂಸದ ಶಶಿತರೂರ್ ಹೇಳಿಕೆಗೆ KC ವೇಣುಗೋಪಾಲ್ ಖಡಕ್ ವಾರ್ನಿಂಗ್