ಹಂಪಿಯಲ್ಲಿ ಪ್ರವಾಸಿಗರ ದಂಡು 
ವಾಹನ

ರಾಜ್ಯ ಪ್ರವಾಸೋದ್ಯಮಕ್ಕೆ ಹೊಸ ವರ್ಷದ ಬೂಸ್ಟರ್ ಡೋಸ್; ರೆಸಾರ್ಟ್‌, ಹೋಂಸ್ಟೇಗಳು ಹೌಸ್ ಫುಲ್

ಹೊಸ ವರ್ಷದ ಸಂಭ್ರಮಕ್ಕೆ ಇನ್ನು 20 ದಿನಗಳು ಬಾಕಿ ಇರುವಂತೆಯೇ ಉತ್ತರ ಕರ್ನಾಟಕದ ಪ್ರವಾಸೋದ್ಯಮ ತಾಣಗಳಿಗೆ ಭಾರಿ ಬೇಡಿಕೆ ಬಂದಿದೆ.

ಹುಬ್ಬಳ್ಳಿ: ಹೊಸ ವರ್ಷದ ಸಂಭ್ರಮಕ್ಕೆ ಇನ್ನು 20 ದಿನಗಳು ಬಾಕಿ ಇರುವಂತೆಯೇ ಉತ್ತರ ಕರ್ನಾಟಕದ ಪ್ರವಾಸೋದ್ಯಮ ತಾಣಗಳಿಗೆ ಭಾರಿ ಬೇಡಿಕೆ ಬಂದಿದೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಕಠಿಣ ಸಮಯವನ್ನು ಎದುರಿಸಿದ ಪ್ರವಾಸೋದ್ಯಮ ಈ ವರ್ಷ ಸಂಪೂರ್ಣ ಚೇತರಿಸಿಕೊಂಡಿದೆ. ಹೊಸ ವರ್ಷದ ಸಂಭ್ರಮಕ್ಕಾಗಿ ಈಗ ಹಂಪಿ, ಗೋಕರ್ಣ, ಜೋಯಿಡಾ ಮತ್ತು ದಾಂಡೇಲಿಯಂತಹ ತಾಣಗಳಲ್ಲಿ ಪ್ರವಾಸಿಗರು ರೆಸಾರ್ಟ್, ಮತ್ತು ಹೋಸ್ಟೇಗಳನ್ನು ಬುಕ್ ಮಾಡುತ್ತಿದ್ದಾರೆ.

ಹಂಪಿ ಮತ್ತು ಸುತ್ತಮುತ್ತಲಿನ ಅನೇಕ ರೆಸಾರ್ಟ್‌ಗಳು, ಹೋಮ್‌ಸ್ಟೇಗಳನ್ನು ದೇಶಿ ಮತ್ತು ವಿದೇಶಿ ಪ್ರವಾಸಿಗರು ಬುಕ್ ಮಾಡಿದ್ದಾರೆ. ಸ್ಥಳೀಯ ಮಾರ್ಗದರ್ಶಕರ ಪ್ರಕಾರ ಹಂಪಿಯಲ್ಲಿ ವಿದೇಶಿ ಪ್ರಜೆಗಳ ನೋಂದಣಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಡಬಲ್ ಆಗಿದೆ.

"ಡಿಸೆಂಬರ್ ಮೊದಲ ವಾರದಲ್ಲಿಯೇ ಅತಿಥಿ ಬುಕಿಂಗ್‌ಗಾಗಿ ವಿಚಾರಿಸಲಾಗುತ್ತದೆ. ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಡಿಸೆಂಬರ್ ಮತ್ತು ಜನವರಿಯಲ್ಲಿ ಗೋವಾಕ್ಕೆ ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಹಂಪಿ, ಕಮಲಾಪುರ ಮತ್ತು ಆನೆಗುಂದಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ" ಎಂದು ಹಂಪಿಯ ಹಿರಿಯ ಪ್ರವಾಸಿ ಮಾರ್ಗದರ್ಶಿ ನಾಗರಾಜ್ ಎನ್ ಅವರು ತಿಳಿಸಿದ್ದಾರೆ.

ಗಣೇಶಗುಡಿಯ ಹಾರ್ನ್‌ಬಿಲ್ ರೆಸಾರ್ಟ್‌ನ ಮಾಲೀಕ ಉಮೇಶ್ ಜಿ ಇ ಮಾತನಾಡಿ, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. "ದಾಂಡೇಲಿಗೆ ಭೇಟಿ ನೀಡುವ ಅನೇಕ ಪ್ರವಾಸಿಗರು ಕಾಳಿ ನದಿಯ ಉದ್ದಕ್ಕೂ ಜಲಕ್ರೀಡೆಗಳನ್ನು ಆಯ್ಕೆ ಮಾಡುತ್ತಾರೆ. ವಿವಿಧ ರೀತಿಯ ಜಲಕ್ರೀಡೆಗಳನ್ನು ಒದಗಿಸುವ ಅನೇಕ ಪರವಾನಗಿ ಪಡೆದ ನಿರ್ವಾಹಕರು ಇದ್ದಾರೆ" ಎಂದು ಅವರು ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಿರುಮಲ ಬಳಿಕ ಶಬರಿಮಲೆ ತುಪ್ಪದಲ್ಲೂ ಗೋಲ್ ಮಾಲ್: ವಿಜಿಲೆನ್ಸ್ ತನಿಖೆಗೆ ಕೇರಳ ಹೈಕೋರ್ಟ್ ಆದೇಶ!

Iran Unrest: ಪ್ರತಿಭಟನೆ ಮುಂದುವರೆಸಿ- ಜನತೆಗೆ ಟ್ರಂಪ್ ಕರೆ ಬೆನ್ನಲ್ಲೇ UNSC ಗೆ ಇರಾನ್ ಪತ್ರ!

ಯಾವ ಸಂದೇಶವೂ ಇಲ್ಲ, ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲ್ಲ: ಡಿ.ಕೆ. ಶಿವಕುಮಾರ್

ಇರಾನ್ ಹಿಂಸಾಚಾರ: ಆಡಳಿತ ವಿರೋಧಿ ಪ್ರತಿಭಟನಾಕಾರನ ಗಲ್ಲಿಗೇರಿಸಲು ಸರ್ಕಾರ ಆದೇಶ!

ನಿಷೇಧದ ನಡುವೆಯೂ ಕಬಿನಿಯಲ್ಲಿ ಅಕ್ರಮ ದೋಣಿ ಸಫಾರಿ: ಪರಿಸರವಾದಿಗಳ ಕಳವಳ

SCROLL FOR NEXT