ಬುಕ್ ಸೈಟ್

ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು

ಸಾಹಿತಿ ಮಿತ್ರ ಹರಿಹರಪ್ರಿಯ ಅವರು ತಾವು ಸಂಕಲಿಸಿರುವ 'ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು' ಎಂಬ ಸಂಕಲನಕ್ಕೆ ...

'ಪುಸ್ತಕಮನೆ' ಹರಿಹರಪ್ರಿಯ ಅವರು ಸಂಕಲಿಸಿರುವ 'ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು' ಎಂಬ ಪುಸ್ತಕದ ಬೆನ್ನುಡಿಯಲ್ಲಿ ಸಿ.ಎನ್. ರಾಮಚಂದ್ರನ್ ಅವರು ಪುಸ್ತಕದ ಬಗ್ಗೆ ಬರೆದದ್ದು ಹೀಗೆ:


ಸಾಹಿತಿ ಮಿತ್ರ ಹರಿಹರಪ್ರಿಯ ಅವರು ತಾವು ಸಂಕಲಿಸಿರುವ 'ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು' ಎಂಬ ಸಂಕಲನಕ್ಕೆ ಮುನ್ನುಡಿಯನ್ನು ಬರೆಯಲು ಕೇಳಿದಾಗ , ಇಬ್ಬರು ಪರಿಚಿತ ವಿದ್ವಾಂಸರ ನಡುವೆ ಪತ್ರ ಮುಖೇನ ನಡೆದಿರುವ ಸಂವಾದವನ್ನು ತಿಳಿಯುವ ಕುತೂಹಲ ನನಗೂ ಇದ್ದು ಸಂತೋಷದಿಂದ ಆ ಕಾರ್ಯವನ್ನು ಒಪ್ಪಿಕೊಂಡೆ..ಈ ನೆಲೆಯಲ್ಲಿ , ಈ ಸಂಕಲನ ಬನ್ನಂಜೆಯವರ ಪ್ರಾಚೀನ-ಅರ್ವಾಚೀನ ಸಾಹಿತ್ಯ ಕ್ಷೇತ್ರದಲ್ಲಿರುವ ಅಗಾಧ ಪಾಂಡಿತ್ಯ, ಉದಯೋನ್ಮುಖ ಲೇಖಕನ ಬಗ್ಗೆ ಅವರಿಗಿರುವ ಪ್ರೀತಿ-ಸೌಜನ್ಯಗಳು, ಮತ್ತು ಪತ್ರಿಕೋದ್ಯಮದ ಚೌಕಟ್ಟಿನಲ್ಲಿ ಅವರು ಅನುಭವಿಸುತ್ತಿದ್ದ ಒತ್ತಡಗಳು ಇವೆಲ್ಲವನ್ನೂ ಪ್ರತಿಫಲಿಸುತ್ತದೆ...ಓದುಗರಿಗೂ ಈ ಕೃತಿಯಿಂದ ಅನೇಕ ಹೊಸ ಒಳನೋಟಗಳು, ಹಳೆಯ ವಿಚಾರಗಳನ್ನು ಪುನರ್ವಿಮರ್ಶಿಸುವ ಅವಕಾಶ, ಇತ್ಯಾದಿ ದೊರೆಯುತ್ತವೆಂದು ನಾನು ನಂಬಿದ್ದೇನೆ."

-ಸಿ.ಎನ್. ರಾಮಚಂದ್ರನ್


ಈ ವಾರದ ಹೊತ್ತಗೆ: ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು

ಸಂಕಲನ:
'ಪುಸ್ತಕಮನೆ' ಹರಿಹರಪ್ರಿಯ


ಪ್ರಕಾಶಕರು:
ಆಕೃತಿ ಪುಸ್ತಕ
ರಾಜಾಜಿನಗರ, ಬೆಂಗಳೂರು

ಬೆಲೆ: ರು.99

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...." ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾ ನೇರಾ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

ಧರ್ಮಸ್ಥಳ ಪ್ರಕರಣ: ಹೊಸ ದೂರು ದಾಖಲು, ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ!

Thyroid Cancer: ಗುರುತೇ ಸಿಗಲಾರದಷ್ಟು ಬದಲಾದ ನಟ! 'ರಾಯ್' ಗೆ ಬೇಕಾಗಿದೆ ನೆರವಿನ ಹಸ್ತ..Video

SCROLL FOR NEXT