ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2016-17 ಸಾಲಿನ ಆಯವ್ಯಯ ಪತ್ರದಲ್ಲಿ ಬೆಂಗಳೂರು ನಗರಕ್ಕೆ ಏನು, ಎಷ್ಟು ದೊರೆಯಿತು ಎಂಬುದರ ಮಾಹಿತಿ ಇಲ್ಲಿದೆ.
- ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 100 ಕೋಟಿ ರು. ಅನುದಾನ
- ಬೆಂಗಳೂರಿನಲ್ಲಿ 51.56 ಕಿಲೋ ಮೀಟರ್ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ.
- ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 112 ರಸ್ತೆಗಳ ಅಭಿವೃದ್ಧಿ.
- ಬಿಎಂಟಿಸಿಗೆ 660 ಬಸ್ ಖರೀದಿಗೆ ನಿರ್ಧಾರ. 3 ಹೊಸ ಬೆಂಗಳೂರು ಒನ್ ಸ್ಥಾಪನೆ.
- ಬೆಂಗಳೂರಿನಲ್ಲಿ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ 8 ಕೋಟಿ
- ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ರು. 100 ಕೋಟಿ
- ಘನ ತ್ಯಾಜ್ಯ ನಿರ್ವಹಣೆಗೆ ರು. 500 ಕೋಟಿ
- ಮಳೆ ನೀರು ಚರಂಡಿ ನಿರ್ಮಾಣಕ್ಕೆ 800 ಕೋಟಿ
- ಬೆಂಗಳೂರಿನಲ್ಲಿ ಬಡವರಿಗಾಗಿ 3 ಸಾವಿರ ಬಿಡಿಎ ನಿವೇಶನ ಸ್ಥಾಪನೆ
- 2016-17ನೇ ಸಾಲಿನಲ್ಲಿ ಬಿಡಿಎನಿಂದ 3 ಸಾವಿರ ಹೊಸ ಫ್ಲಾಟ್ ಗಳ ನಿರ್ಮಾಣ.
- 2017ರೊಳಗೆ ಕೆಂಪೇಗೌಡ ಬಡಾವಣೆಯ 10 ಸಾವಿರ ನಿವೇಶನಗಳ ಹಂಚಿಕೆ.
- ದಕ್ಷಿಣ ಪಿನಾಕಿನಿ ನದಿಗೆ ಬೆಂಗಳೂರಿನಿಂದ ಸಂಸ್ಕರಿಸಿದ ಕೊಳಚೆ ನೀರು ಹರಿಸಲು ಕ್ರಮ
- ನಿವೇಶನ ರಹಿತ ಬಡ ಫಲಾನುಭವಿಗಳಿಗೆ ಸೈಟ್.
- ಗ್ರಾಮೀಣ ಪ್ರದೇಶದಲ್ಲಿ 10 ಸಾವಿರ ನಿವೇಶನ ಹಂಚಿಕೆ.
- ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪುನಶ್ಚೇತನಕ್ಕೆ ಕ್ರಮ
- ವಾಹನ ಸಂಚಾರ ಸುಗಮಗೊಳಿಸಲು 100 ಕಿ.ಮೀ ಉದ್ದದ ಸುಮಾರು ರು.18,000 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ- ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಹೆಬ್ಬಾಳ ಜಂಕ್ಷನ್, ಕೆಆರ್ ಪುರಂ ನಿಂದ ತುಮಕೂರು ರಸ್ತೆ ಮತ್ತು ವರ್ತೂರು ಕೋಡಿಯಿಂದ ಮೈಸೂರು ರಸ್ತೆ
- ರು.797 ಕೋಟಿ ವೆಚ್ಚದಲ್ಲಿ ವಾರ್ಡ್ ಮಟ್ಟದ ರಸ್ತೆಗಳ ಕಾಮಗಾರಿ
- ಬೆಂಗಳೂರಿನಲ್ಲಿ ವಾಲ್ಮೀಕಿ ಮಹರ್ಷಿ ಪುತ್ತಳಿಗೆ 1ಕೋಟಿ .
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos