ಕೇಂದ್ರ ಸಚಿವ ಪಿಯೂಷ್ ಗೋಯಲ್ ರಿಂದ ಬಜೆಟ್ ಮಂಡನೆ 
ಕೇಂದ್ರ ಬಜೆಟ್

ಕೇಂದ್ರ ಮಧ್ಯಂತರ ಬಜೆಟ್ ನಲ್ಲಿ ಕರ್ನಾಟಕದ ರೈಲ್ವೆ ವಲಯಕ್ಕೆ 1,828 ಕೋಟಿ ರೂ.

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ನೈರುತ್ಯ ವಿಭಾಗದ ರೈಲ್ವೆಗೆ 2019-20ನೇ ಸಾಲಿನಲ್ಲಿ 1,828...

ಬೆಂಗಳೂರು: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ನೈರುತ್ಯ ವಿಭಾಗದ ರೈಲ್ವೆಗೆ 2019-20ನೇ ಸಾಲಿನಲ್ಲಿ 1,828 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಕಳೆದ ವರ್ಷಕ್ಕಿಂತ ಈ ಮೊತ್ತ ಶೇಕಡಾ 20ರಷ್ಟು ಹೆಚ್ಚಾಗಿದೆ.

ನೈರುತ್ಯ ರೈಲ್ವೆಗೆ ಈ ವರ್ಷದ ಮಧ್ಯಂತರ ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆಯಾಗಲಿ, ಹೊಸ ರೈಲನ್ನು ಪ್ರಕಟಿಸಿಲ್ಲ. ಈಗಾಗಲೇ ಘೋಷಣೆಯಾಗಿರುವ ಯೋಜನೆಗಳನ್ನು ಪೂರ್ಣಗೊಳಿಸುವುದು ಮತ್ತು ಯೋಜನೆಗಳನ್ನು ತ್ವರಿತಗೊಳಿಸುವುದು ಆಗಿದೆ.

ಬೆಂಗಳೂರು ನಗರದ ಉದ್ದೇಶಿತ ಉಪನಗರ ರೈಲು ಕಾರಿಡಾರ್ ಗೆ 23 ಸಾವಿರ ಕೋಟಿ ರೂಪಾಯಿಗಳ ಪ್ರಸ್ತಾವನೆಗೆ 10 ಕೋಟಿ ರೂಪಾಯಿ ಘೋಷಿಸಲಾಗಿದೆ. ರೈಲ್ವೆ ಹೊಸ ಮಾರ್ಗಕ್ಕೆ 243 ಕೋಟಿ ರೂಪಾಯಿ, ರೋಲಿಂಗ್ ಸ್ಟಾಕ್ ಗಳಿಗೆ 38 ಕೋಟಿ ರೂಪಾಯಿ, ಬಂಡವಾಳದ ಘಟಕ 389 ಕೋಟಿ ರೂಪಾಯಿ, ಪ್ರಯಾಣಿಕರ ಸೌಲಭ್ಯಗಳಿಗೆ 187 ಕೋಟಿ ರೂಪಾಯಿ, ಕಾರ್ಯಾಗಾರಗಳು187 ಕೋಟಿ ರೂಪಾಯಿ ಮತ್ತು ಇತರ ಕೆಲಸಗಳಿಗೆ 36 ಕೋಟಿ ರೂಪಾಯಿ ನೀಡಲಾಗಿದೆ.

ಮುಂಬರುವ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸೌಕರ್ಯಗಳಿಗೆ 171 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಬೆಂಗಳೂರು ರೈಲ್ವೆ ವಲಯದ ಬೆಂಗಳೂರು ಕಂಟೋನ್ಮೆಂಟ್, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಿಲ್ದಾಣ, ಬಾಣಸವಾಡಿ, ಕೃಷ್ಣರಾಜಪುರ, ಮಂಡ್ಯ ಮತ್ತು ಹಾಸನ ರೈಲು ನಿಲ್ದಾಣಗಳಲ್ಲಿ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಮೈಸೂರು ವಿಭಾಗದ ಮೈಸೂರು, ದಾವಣಗೆರೆ ಮತ್ತು ಹಾಸನ ರೈಲು ನಿಲ್ದಾಣಗಳಿಗೆ ಫೇಸ್ ಲಿಫ್ಟ್, ಧಾರವಾಡ, ಹೊಸಪೇಟೆ, ವಾಸ್ಕೊ ಡ ಗಾಮ, ಬಳ್ಳಾರಿ ರೈಲು ನಿಲ್ದಾಣಗಳ ಅಭಿವೃದ್ಧಿಯು ಈ ಸಾಲಿನ ಬಜೆಟ್ ನಲ್ಲಿ ಸೇರಿಕೊಂಡಿದೆ. ಹುಬ್ಬಳ್ಳಿ ವಿಭಾಗದಲ್ಲಿ ಒಟ್ಟು 83 ಪ್ಲಾಟ್ ಫಾರ್ಮ್ ಗಳನ್ನು ಉನ್ನತ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುತ್ತದೆ.

ಈಗಾಗಲೇ ಮುಂದುವರಿದಿರುವ ಯೋಜನೆಗಳಾದ ಹುಬ್ಬಳ್ಳಿ-ಅಂಕೋಲಾ(255 ಕೋಟಿ), ರಾಯದುರ್ಗ-ತುಮಕೂರು ಕಲ್ಯಾಣದುರ್ಗ ಮಾರ್ಗವಾಗಿ 135 ಕೋಟಿ ರೂಪಾಯಿ, ಬಾಗಲಕೋಟೆ-ಕುಡಚಿ 20 ಕೋಟಿ ರೂ, ತುಮಕೂರು-ಚಿತ್ರದುರ್ಗ-ದಾವಣಗೆರೆ 100 ಕೋಟಿ ರೂ ಮತ್ತು ಗದಗ-ವಾಡಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ನೆರವೇರಲಿದೆ.

ರೈಲ್ವೆ ಮಾರ್ಗ ದಿಗುಣಕ್ಕೆ ಈಗಾಗಲೇ ಅನುದಾನ ಸಿಕ್ಕಿರುವ ಯಶವಂತಪುರ-ಚನ್ನಸಂದ್ರ, ಬೈಯಪ್ಪನಹಳ್ಳಿ-ಹೊಸೂರು, ಹೊಸಪೇಟೆ-ಹುಬ್ಬಳ್ಳಿ-ಲೊಂಡಾ-ಟಿನೈಗಾಟ್-ವಾಸ್ಕೊ ಡ ಗಾಮ, ಹೊಟ್ಗಿ-ಕುಡ್ಗಿ-ಗದಗ್, ಯಲಹಂಕ-ಪೆನುಕೊಂಡ, ಹುಬ್ಬಳ್ಳಿ-ಚಿಕ್ಕಜಾಜೂರು ಮತ್ತು ಅರಸೀಕೆರೆ-ತುಮಕೂರು ರೈಲು ಮಾರ್ಗಗಳ ಕಾಮಗಾರಿ ಮುಂದುವರಿಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT