ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆಯ ವೇಳೆಗೆ ಅಂದರೆ ಈ ವರ್ಷದ ಅಕ್ಟೋಬರ್ 2 ರೊಳಗೆ ಭಾರತ ಬಯಲುಶೌಚ ಮುಕ್ತ ದೇಶವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 2, 2019 ರೊಳಗೆ ಭಾರತವನ್ನು ಬಯಲುಮುಕ್ತ ಶೌಚ ದೇಶವನ್ನಾಗಿ ಮಾಡುವ ಪ್ರತಿಜ್ಞೆ ಮಾಡಿದ್ದರು. ಅದರಂತೆ ಅಕ್ಟೋಬರ್ ವೇಳೆಗೆ ದೇಶ ಬಯಲು ಶೌಚ ಮುಕ್ತವಾಗಲಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ ಎಂದರು.
ಇದೇ ಅಕ್ಟೋಬರ್ 2 ರಂದು ದೇಶವು ಮಹಾತ್ಮಗಾಂಧಿಯವರ 150 ನೇ ಜನ್ಮ ಶತಮಾನೋತ್ಸವ ಆಚರಿಸಲಿದೆ.
ಅಕ್ಟೋಬರ್ 2, 2014 ರಿಂದ ಇಲ್ಲಿಯವರೆಗೆ 9.6 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 5.6 ಲಕ್ಷಕ್ಕೂ ಹೆಚ್ಚು ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ. ಪ್ರತಿ ಹಳ್ಳಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಸ್ವಚ್ಛ ಭಾರತ್ ಮಿಷನ್ ವಿಸ್ತರಿಸಲಾಗುವುದು. ಈಗಾಗಲೇ ಶೇ.95 ರಷ್ಟು ನಗರಗಳು ಬಯಲು ಶೌಚ ಮುಕ್ತವಾಗಿವೆ ಎಂದು ಸಚಿವೆ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos