ಬಜೆಟ್ ಹಿನ್ನೆಲೆ 'ಹಲ್ವಾ' ಸಮಾರಂಭದಲ್ಲಿ ನಿರ್ಮಲಾ ಸೀತರಾಮನ್ ಭಾಗಿ! 
ಕೇಂದ್ರ ಬಜೆಟ್

ಬಜೆಟ್ ಹಿನ್ನೆಲೆ 'ಹಲ್ವಾ' ಸಮಾರಂಭದಲ್ಲಿ ನಿರ್ಮಲಾ ಸೀತರಾಮನ್ ಭಾಗಿ!

ಹಲ್ವಾ ಕಾರ್ಯಕ್ರಮ ಮುಗಿದ ನಂತರ ಬಜೆಟ್ ಪ್ರತಿಗಳ ಮುದ್ರಣದ ಜವಾಬ್ದಾರಿಯನ್ನು ಸಚಿವಾಲಯದ ಅಧಿಕಾರಿಗಳಿಗೆ ವಹಿಸಲಾಗುತ್ತದೆ.

ನವದೆಹಲಿ: 2019-20 ನೇ ಸಾಲಿನ ಕೇಂದ್ರ ಬಜೆಟ್ ಗೆ  ಸಂಬಂಧಿಸಿದ ದಾಖಲೆಗಳ ಮುದ್ರಣ ಆರಂಭದ ಶುಭ  ಸಂಕೇತವಾಗಿ  ಸಂಪ್ರದಾಯಿಕ  “ಹಲ್ವಾ ತಯಾರಿಸುವ”  ಸಮಾರಂಭದಲ್ಲಿ  ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್  ಪಾಲ್ಗೊಂಡಿದ್ದರು
ಹಣಕಾಸು ಖಾತೆ ರಾಜ್ಯಸಚಿವ  ಅನುರಾಗ್ ಠಾಕೂರ್, ಹಣಕಾಸು ಕಾರ್ಯದರ್ಶಿ ಸುಭಾಷ್  ಚಂದ್ರ ಗರ್ಗ್, ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್, ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್  ಪಾಂಡೆ ಹಾಗೂ ವೆಚ್ಚ ಕಾರ್ಯದರ್ಶಿ ಜಿ.ಸಿ. ಮರ್ಮು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಪ್ರದಾಯದಂತೆ  ಬೃಹತ್ ಕಡಾಯಿಯಲ್ಲಿ ಹಲ್ವಾ ಸಿದ್ಧಪಡಿಸಿ, ನಂತರ ಹಣಕಾಸು ಸಚಿವಾಲಯದ ಅಧಿಕಾರಿಗಳಿಗೆ  ವಿತರಿಸಲಾಗುತ್ತದೆ. 
ಮುಂಬರಲಿರುವ ಕೇಂದ್ರ ಬಜೆಟ್  ಪ್ರತಿಗಳ ಮುದ್ರಣ ಪ್ರಕ್ರಿಯೆ ಆರಂಭದ ಸಂಕೇತ ಇದಾಗಿದೆ. ಹಣಕಾಸು ಸಚಿವೆ  ನಿರ್ಮಲಾ ಸೀತರಾಮನ್  ಜುಲೈ 5 ರಂದು  ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವೆಯಾಗಿ  ನಿರ್ಮಲಾ ಅವರು ಮೊದಲ  ಬಜೆಟ್ ಮಂಡಿಸಲಿದ್ದಾರೆ.
ಹಲ್ವಾ ಕಾರ್ಯಕ್ರಮ ಮುಗಿದ ನಂತರ  ಬಜೆಟ್  ಪ್ರತಿಗಳ ಮುದ್ರಣದ ಜವಾಬ್ದಾರಿಯನ್ನು  ಸಚಿವಾಲಯದ ಅಧಿಕಾರಿಗಳಿಗೆ ವಹಿಸಲಾಗುತ್ತದೆ.  ನಾರ್ತ್ ಬ್ಲಾಕ್  ನೆಲ ಮಹಡಿ ಕಟ್ಟಡವನ್ನು ಬಂದ್ ಮಾಡಿ ಯಾರೂ ಪ್ರವೇಶಿಸದಂತೆ ನಿರ್ಬಂಧಿಸಲಾಗುತ್ತದೆ. 
ಬಜೆಟ್ ಮಂಡನೆಯಾಗುವವರೆಗೆ ಬಜೆಟ್ ಪ್ರತಿ ಮುದ್ರಿಸುವವರು, ಬಜೆಟ್ ತಯಾರಿಸುವ ಸರ್ಕಾರಿ ಸಿಬ್ಬಂದಿಗಳ ಮೊಬೈಲ್, ಲ್ಯಾಂಡ್ ಫೋನ್ ಸ್ಥಗಿತಗೊಳಿಸಲಾಗಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT