ಬಜೆಟ್ ಹಿನ್ನೆಲೆ 'ಹಲ್ವಾ' ಸಮಾರಂಭದಲ್ಲಿ ನಿರ್ಮಲಾ ಸೀತರಾಮನ್ ಭಾಗಿ! 
ಕೇಂದ್ರ ಬಜೆಟ್

ಬಜೆಟ್ ಹಿನ್ನೆಲೆ 'ಹಲ್ವಾ' ಸಮಾರಂಭದಲ್ಲಿ ನಿರ್ಮಲಾ ಸೀತರಾಮನ್ ಭಾಗಿ!

ಹಲ್ವಾ ಕಾರ್ಯಕ್ರಮ ಮುಗಿದ ನಂತರ ಬಜೆಟ್ ಪ್ರತಿಗಳ ಮುದ್ರಣದ ಜವಾಬ್ದಾರಿಯನ್ನು ಸಚಿವಾಲಯದ ಅಧಿಕಾರಿಗಳಿಗೆ ವಹಿಸಲಾಗುತ್ತದೆ.

ನವದೆಹಲಿ: 2019-20 ನೇ ಸಾಲಿನ ಕೇಂದ್ರ ಬಜೆಟ್ ಗೆ  ಸಂಬಂಧಿಸಿದ ದಾಖಲೆಗಳ ಮುದ್ರಣ ಆರಂಭದ ಶುಭ  ಸಂಕೇತವಾಗಿ  ಸಂಪ್ರದಾಯಿಕ  “ಹಲ್ವಾ ತಯಾರಿಸುವ”  ಸಮಾರಂಭದಲ್ಲಿ  ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್  ಪಾಲ್ಗೊಂಡಿದ್ದರು
ಹಣಕಾಸು ಖಾತೆ ರಾಜ್ಯಸಚಿವ  ಅನುರಾಗ್ ಠಾಕೂರ್, ಹಣಕಾಸು ಕಾರ್ಯದರ್ಶಿ ಸುಭಾಷ್  ಚಂದ್ರ ಗರ್ಗ್, ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್, ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್  ಪಾಂಡೆ ಹಾಗೂ ವೆಚ್ಚ ಕಾರ್ಯದರ್ಶಿ ಜಿ.ಸಿ. ಮರ್ಮು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಪ್ರದಾಯದಂತೆ  ಬೃಹತ್ ಕಡಾಯಿಯಲ್ಲಿ ಹಲ್ವಾ ಸಿದ್ಧಪಡಿಸಿ, ನಂತರ ಹಣಕಾಸು ಸಚಿವಾಲಯದ ಅಧಿಕಾರಿಗಳಿಗೆ  ವಿತರಿಸಲಾಗುತ್ತದೆ. 
ಮುಂಬರಲಿರುವ ಕೇಂದ್ರ ಬಜೆಟ್  ಪ್ರತಿಗಳ ಮುದ್ರಣ ಪ್ರಕ್ರಿಯೆ ಆರಂಭದ ಸಂಕೇತ ಇದಾಗಿದೆ. ಹಣಕಾಸು ಸಚಿವೆ  ನಿರ್ಮಲಾ ಸೀತರಾಮನ್  ಜುಲೈ 5 ರಂದು  ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವೆಯಾಗಿ  ನಿರ್ಮಲಾ ಅವರು ಮೊದಲ  ಬಜೆಟ್ ಮಂಡಿಸಲಿದ್ದಾರೆ.
ಹಲ್ವಾ ಕಾರ್ಯಕ್ರಮ ಮುಗಿದ ನಂತರ  ಬಜೆಟ್  ಪ್ರತಿಗಳ ಮುದ್ರಣದ ಜವಾಬ್ದಾರಿಯನ್ನು  ಸಚಿವಾಲಯದ ಅಧಿಕಾರಿಗಳಿಗೆ ವಹಿಸಲಾಗುತ್ತದೆ.  ನಾರ್ತ್ ಬ್ಲಾಕ್  ನೆಲ ಮಹಡಿ ಕಟ್ಟಡವನ್ನು ಬಂದ್ ಮಾಡಿ ಯಾರೂ ಪ್ರವೇಶಿಸದಂತೆ ನಿರ್ಬಂಧಿಸಲಾಗುತ್ತದೆ. 
ಬಜೆಟ್ ಮಂಡನೆಯಾಗುವವರೆಗೆ ಬಜೆಟ್ ಪ್ರತಿ ಮುದ್ರಿಸುವವರು, ಬಜೆಟ್ ತಯಾರಿಸುವ ಸರ್ಕಾರಿ ಸಿಬ್ಬಂದಿಗಳ ಮೊಬೈಲ್, ಲ್ಯಾಂಡ್ ಫೋನ್ ಸ್ಥಗಿತಗೊಳಿಸಲಾಗಿರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT