ರಘುರಾಮ್ ರಾಜನ್ 
ವಾಣಿಜ್ಯ

ಆರ್ ಬಿಐ ಸ್ವಾಯತ್ತತೆ ಕಾಪಾಡಿ: ಕೇಂದ್ರ ಸರ್ಕಾರಕ್ಕೆ ರಾಜನ್ ಸಲಹೆ

ಟೀಕಾಕಾರರಿಗೆ ಮಂಗಳವಾರ ತಿರುಗೇಟು ನೀಡಿರುವ ಆರ್ ಬಿಐ ಗವರ್ನರ್ ರುಘುರಾಮ್ ರಾಜನ್ ಅವರು, ಕೇಂದ್ರ ಬ್ಯಾಂಕ್ ನ ಸ್ವಾಯತ್ತತೆ ಕಾಪಾಡಲು...

ಮುಂಬೈ: ಟೀಕಾಕಾರರಿಗೆ ಮಂಗಳವಾರ ತಿರುಗೇಟು ನೀಡಿರುವ ಆರ್ ಬಿಐ ಗವರ್ನರ್ ರುಘುರಾಮ್ ರಾಜನ್ ಅವರು, ಕೇಂದ್ರ ಬ್ಯಾಂಕ್ ನ ಸ್ವಾಯತ್ತತೆ ಕಾಪಾಡಲು ಪ್ರಚೋದಿತ ಟೀಕೆಗಳ ಹಿಂದಿರುವ ಉದ್ದೇಶವನ್ನು ಗಮನಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅತಿ ವೇಗವಾಗಿ ಬೆಳೆಯುತ್ತಿರುವ ಭಾರತದ ಅಭಿವೃದ್ಧಿ ದರಕ್ಕೆ ಆರ್ ಬಿಐ ಅಡ್ಡಿಯಾಗುತ್ತಿದೆ ಎಂಬ ಟೀಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ನಿರ್ಗಮಿತ ಆರ್ ಬಿಐ ಮುಖ್ಯಸ್ಥ, ಅದೃಷ್ಟವಶಾತ್ ಹಣದುಬ್ಬರ ಬಹಳಷ್ಟು ಕಡಿಮೆಯಾಗಿದೆ. ಆದರೆ ಇದಕ್ಕೆ ಆರ್ ಬಿಐ ನೀತಿ ಕಾರಣವಲ್ಲ. ತೈಲ ಬೆಲೆ ಇಳಿಕೆ ಕಾರಣ ಎಂದಿದ್ದಾರೆ.
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಇಳಿಕೆ ಒಂದು ಗಮನಾರ್ಹ ಅಂಶವಾದರೂ ಸರ್ಕಾರ ಅದರ ಲಾಭವನ್ನು ಸ್ಥಳೀಯವಾಗಿ ವರ್ಗಾಯಿಸದೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿದೆ ಎಂದು ರಘುರಾಮ್ ರಾಜನ್ ಅವರು ಹೇಳಿದ್ದಾರೆ.
ಎರಡನೇ ಅವಧಿಗೆ ಆರ್ ಬಿಐ ಗವರ್ನರ್ ಆಗಿ ಮುಂದುವರೆಯಲು ನಿರಾಕರಿಸಿರುವ ರಾಜನ್ ಅವರು ತಮ್ಮ ವಿರುದ್ಧದ ವೈಯಕ್ತಿಕ ಟೀಕೆಗಳನ್ನು ಸಹ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. 
ಹಣದುಬ್ಬರವನ್ನು ಗಮದಲ್ಲಿಟ್ಟುಕೊಂಡು ಬಡ್ಡಿದರ ಕಡಿಮೆ ಮಾಡದ ರಘುರಾಮ್ ರಾಜನ್ ಮಾನಸಿಕರಾಗಿ ಭಾರತೀಯರಾಗಿಲ್ಲ ಎಂದು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಆರೋಪ ಮಾಡಿದ್ದರು. ಅಲ್ಲದೆ ರಘುರಾಮ್ ರಾಜನ್ ಕಾಂಗ್ರೆಸ್ ನ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT