ಸಾಂದರ್ಭಿಕ ಚಿತ್ರ 
ವಾಣಿಜ್ಯ

ದಂತೆರಸ್: ಚಿನ್ನದ ವ್ಯಾಪಾರ ಏರಿಕೆ ನಿರೀಕ್ಷೆ, ಇಟಿಎಫ್, ಬಾಂಡ್ ಗಳ ವಹಿವಾಟು ಅವಧಿ ವಿಸ್ತರಣೆ

ಶುಕ್ರವಾರವಾದ ಇಂದು ದಂತೆರಸ್ ಹಬ್ಬ. ಹಾಗಾಗಿ ದೇಶಾದ್ಯಂತ ಚಿನ್ನಕ್ಕೆ ಬೇಡಿಕೆ ಕುದುರುವ ನಿರೀಕ್ಷೆಯಿದೆ. ಈ ದಿನ ಹಳದಿ...

ನವದೆಹಲಿ: ಶುಕ್ರವಾರವಾದ ಇಂದು ದಂತೆರಸ್ ಹಬ್ಬ. ಹಾಗಾಗಿ ದೇಶಾದ್ಯಂತ ಚಿನ್ನಕ್ಕೆ ಬೇಡಿಕೆ ಕುದುರುವ ನಿರೀಕ್ಷೆಯಿದೆ. ಈ ದಿನ ಹಳದಿ ಲೋಹವಾದ ಚಿನ್ನ ಖರೀದಿಸಲು ಪ್ರಶಸ್ತ ದಿನ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಚಿನ್ನದ ಮಾರಾಟ ಭರ್ಜರಿಯಿಂದ ನಡೆಯಲಿದೆ ಎನ್ನಲಾಗುತ್ತಿದೆ.
ಸಾಗರೋತ್ತರದಲ್ಲಿ ವ್ಯಾಪಾರ ನಿಷ್ಕ್ರಿಯಗೊಂಡದ್ದರಿಂದ ಎರಡು ದಿನಗಳ ನಂತರ ಚಿನ್ನದ ಬೆಲೆ ನಿನ್ನೆ 15ರಿಂದ 30 ರೂಪಾಯಿಗಳಷ್ಟು ಕಡಿಮೆಯಾಗಿದೆ. ಬೆಳ್ಳಿಯ ಬೆಲೆ ಕೂಡ ಕೆಜಿಗೆ 300 ರೂಪಾಯಿಯಷ್ಟು ಇಳಿಕೆ ಕಂಡು 42 ಸಾವಿರದ 700ರಲ್ಲಿದೆ. ಕೈಗಾರಿಕೆಗಳಲ್ಲಿ ಮತ್ತು ನಾಣ್ಯ ತಯಾರಕರು ಬೆಳ್ಳಿ ಖರೀದಿಯಲ್ಲಿ ಕುಂಠಿತ ಮಾಡಿದ್ದರಿಂದ ಬೆಳ್ಳಿಯ ಬೆಲೆಯೂ ಇಳಿಮುಖವಾಗಿದೆ.
ದಂತೆರಸ್, ದೀಪಾವಳಿ ಮತ್ತು ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವುದು ಪ್ರಶಸ್ತ ಎಂದು ಭಾರತೀಯರು ಭಾವಿಸುತ್ತಾರೆ.
ಈ ಬಾರಿ ಉತ್ತಮ ಮಾನ್ಸೂನ್ ನಿಂದಾಗಿ ಆದಾಯ ಹೆಚ್ಚಿರುವುದರಿಂದ ಜನ ಸಾಮಾನ್ಯರು ಚಿನ್ನ ಖರೀದಿಸುವುದು ಹೆಚ್ಚಾಗಬಹುದು. ಹಾಗಾಗಿ ಚಿನ್ನ ಖರೀದಿ ಶೇಕಡಾ 25ರಷ್ಟು ಹೆಚ್ಚಾಗಬಹುದು ಎಂದು ಭಾರತದ ಚಿನ್ನ ಮತ್ತು ಮುತ್ತು ವ್ಯಾಪಾರಿಗಳ ಸಂಘ ನಿರೀಕ್ಷಿಸಿದೆ.
ದಂತೆರಸ್ ದಿನ ಷೇರು ವಿನಿಮಯ ಮಾರುಕಟ್ಟೆ ಗೋಲ್ಡ್ ಇಟಿಎಫ್ ಸೆಕ್ಯುರಿಟಿಸ್ ಅಂಡ್ ಸಾವಿರಿನ್ ಗೋಲ್ಡ್ ಬಾಂಡ್ ಸೆಕ್ಯುರಿಟಿಸ್ ನಲ್ಲಿ ನೇರ ವ್ಯಾಪಾರ ನಡೆಸಲು ಉದ್ದೇಶಿಸಿದೆ ಎಂದು ಮುಂಬೈ ಷೇರು ವಿನಿಮಯ ಮಾರುಕಟ್ಟೆ ತಿಳಿಸಿದೆ. ಇಂದು ಅಪರಾಹ್ನ 3.30ರವರೆಗೆ ಷೇರು ವಹಿವಾಟು ಮುಗಿದ ನಂತರ ಸಾಯಂಕಾಲ 4.30ಕ್ಕೆ ಚಿನ್ನ ಇಟಿಎಫ್ ವ್ಯಾಪಾರ, ವಹಿವಾಟು ಸಾಯಂಕಾಲ 7 ಗಂಟೆಯವರೆಗೆ ನಡೆಯಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT