ಸಂಗ್ರಹ ಚಿತ್ರ 
ವಾಣಿಜ್ಯ

5 ತಿಂಗಳ ಬಳಿಕ ಚೇತರಿಕೆ ಕಂಡ ಭಾರತದ ಸಗಟು ಹಣದುಬ್ಬರ!

ಕಳೆದು ತಿಂಗಳಿಂದ ಇಳಿಕೆಯತ್ತ ಮುಖಮಾಡಿದ್ದ ಸಗಟು ಹಣದುಬ್ಬರ ಇದೇ ಮೊದಲ ಬಾರಿಗೆ ಚೇತರಿಕೆ ಕಂಡಿದ್ದು, ಶೇ.0.63ರಷ್ಟು ಏರಿಕೆಯಾಗಿದೆ.

ನವದೆಹಲಿ: ಕಳೆದು ತಿಂಗಳಿಂದ ಇಳಿಕೆಯತ್ತ ಮುಖಮಾಡಿದ್ದ ಸಗಟು ಹಣದುಬ್ಬರ ಇದೇ ಮೊದಲ ಬಾರಿಗೆ ಚೇತರಿಕೆ ಕಂಡಿದ್ದು, ಶೇ.0.63ರಷ್ಟು ಏರಿಕೆಯಾಗಿದೆ.

ಅಂಕಿಅಂಶಗಳು ಮತ್ತು ಯೋಜನೆ ಅನುಷ್ಠಾನ ಸಚಿವಾಲಯದ ಕೇಂದ್ರೀಯ ಅಂಕಿಅಂಶ ಕಾರ್ಯಾಲಯವು ಈ ತಿಂಗಳ ಹಣದುಬ್ಬರ ವಿವರಗಳನ್ನು ಇಂದು ಬಿಡುಗಡೆ ಮಾಡಿದ್ದು, ಸಗಟು ದರ ಸೂಚ್ಯಂಕ ಜುಲೈ ತಿಂಗಳಲ್ಲಿ 1.88ಕ್ಕೆ  ಏರಿಕೆಯಾಗಿದೆ. ಕಳೆದ ವರ್ಷದ ಜುಲೈ ತಿಂಗಳ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.0.63ರಷ್ಟು ಚೇತರಿಕೆ ಕಂಡುಬಂದಿದೆ.

ಸಗಟು ಆಹಾರ ಧಾನ್ಯಗಳ ದರ ಕೂಡ ಜುಲೈ ತಿಂಗಳಲ್ಲಿ 2.12ರಷ್ಟಿದ್ದು, ಈ ಹಿಂದಿನ ಅಂದರೆ ಜೂನ್ ತಿಂಗಳಲ್ಲಿ ಈ ಪ್ರಮಾಣ 1.25ರಷ್ಟಿತ್ತು. ಇದೀಗ ಹಣದುಬ್ಬರ ದರ ಚೇತರಿಕೆಯಿಂದಾಗಿ ಆರ್ ಬಿಐ ಮೇಲಿದ್ದ ಒತ್ತಡವನ್ನು ಕೊಂಚ  ಮಟ್ಟಿಗೆ ತಗ್ಗಿಸಿದ್ದು, ಈ ಹಿಂದೆ ಹಣದುಬ್ಬರ ನಿಯಂತ್ರಣಕ್ಕಾಗಿ ಆರ್ ಬಿಐ ತನ್ನ ಆರ್ಥಿಕ ನೀತಿಯ ಮೂಲ ಅಂಕಗಳನ್ನು 25ಕ್ಕೆ ಇಳಿಸಿಕೊಂಡಿತ್ತು. ಇದು 2010 ನವೆಂಬರ್ ನ ಅಂಕಿ ಅಂಶಗಳಿಗೆ ಹೋಲಿಕೆ ಮಾಡಿದರೆ ಇದು ಶೇ.6ರಷ್ಟು   ಕುಸಿತವಾಗಿತ್ತು.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಅನ್ವಯ ಗ್ರಾಹಕ ಹಣದುಬ್ಬರ ಪ್ರಮಾಣ ಕೂಡ ಚೇತರಿಕೆ ಕಾಣುವ ಮುನ್ಸೂಚನೆ ನೀಡಿದೆ. ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿರುವಂತೆ ಗ್ರಾಹಕ ಹಣದುಬ್ಬರ ಪ್ರಮಾಣ 1.87 ಕ್ಕೆ  ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೂನ್ ತಿಂಗಳಲ್ಲಿ ಗ್ರಾಹಕ ಹಣದುಬ್ಬರ ಪ್ರಮಾಣ 1.54ರಷ್ಟಿತ್ತು. ಅಂತೆಯೇ ಚಿಲ್ಲರೆ ಹಣದುಬ್ಬರ ಪ್ರಮಾಣ ಕೂಡ ಚೇತರಿಕೆ ಕಾಣುವ ಸಾಧ್ಯತೆ ಇದೆ ಎಂದು ಆರ್ ಬಿಐ  ಅಭಿಪ್ರಾಯಪಟ್ಟಿದ್ದು, ಅಕ್ಟೋಬರ್ ನಿಂದ ಡಿಸೆಂಬರ್ ವೇಳೆಗೆ ಶೇ.3.5 ರಿಂದ 4.5 ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT