ಜುಲೈ ನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಐಡಿಯಾ, ವೊಡಾಫೋನ್ 
ವಾಣಿಜ್ಯ

ಜುಲೈ ನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಐಡಿಯಾ, ವೊಡಾಫೋನ್

ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಸೇರಿದಂತೆ ನಾಲ್ಕು ಖಾಸಗಿ ಟೆಲಿಕಾಂ ಸಂಸ್ಥೆಗಳು 2017 ರ ಜುಲೈನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ.

ಹೊಸದಿಲ್ಲಿ: ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಸೇರಿದಂತೆ ನಾಲ್ಕು ಖಾಸಗಿ ಟೆಲಿಕಾಂ ಸಂಸ್ಥೆಗಳು 2017 ರ ಜುಲೈನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ. ಭಾರತಿ ಏರ್ಟೆಲ್ ಕಂಪನಿಯು 6 ಲಕ್ಷ ಹೊಸ ಬಳಕೆದಾರರನ್ನು ಸೇರ್ಪಡೆ ಮಾಡಿಕೊಂಡಿದೆ.
ಏರ್ ಸೆಲ್ ಮತ್ತು ಟೆಲಿನಾರ್ ಸೇರಿದಂತೆ ಐದು ಸಿಓಎಐ ಸದಸ್ಯರ ಒಟ್ಟು ಮೊಬೈಲ್ ಸಂಸ್ಥೆಗಳು 83 ಕೋಟಿ ರೂ. ನಿಂದ 82.6 ಕೋಟಿ ರೂ. ಗೆ ಆದಾಯ ಕುಸಿತ ಕಂಡಿದ್ದಾರೆ. "ಪ್ರಸ್ತುತ ಉದ್ಯಮವು ಅನುಭವಿಸುತ್ತಿರುವ ತೀವ್ರ ಆರ್ಥಿಕ ಒತ್ತಡವು ಈ ಸಂಖ್ಯೆಗಳ ಮೇಲೆ ಪರಿಣಾಮವನ್ನು ಬೀರಿದೆ.
ಈ ಉದ್ಯಮವು ಅತಿಯಾದ ಪೈಪೋಟಿಯಲ್ಲಿದೆ ಮತ್ತು ಈ ಸಮಯದಲ್ಲಿ 4.5 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದೆ ಎಂದು ಸಿಓಎಐ ನಿರ್ದೇಶಕ ರಾಜನ್ ಎಸ್ ಮ್ಯಾಥ್ಯೂಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೂಲಭೂತ ಸೌಕರ್ಯಕ್ಕಾಗಿ ರೋಲ್-ಔಟ್ ಮತ್ತು ವಿಸ್ತರಣೆಗೆ 2.5 ಲಕ್ಷ ಕೋಟಿ ರೂ.ಬೇಕಿದೆ ವಿಶೇಷವಾಗಿ ದೇಶದ ದೂರದ ಪ್ರದೇಶಗಳಲ್ಲಿ ಇದರ ಅಗತ್ಯವಿದೆ.
ಭಾರ್ತಿ ಏರ್ ಟೆಲ್ ನ ಚಂದಾದಾರರ ಸಂಖ್ಯೆ ಜುಲೈನಲ್ಲಿ 28.12 ಕೋಟಿ ತಲುಪಿದೆ. ಐಡಿಯಾ 23 ತಿಂಗಳಲ್ಲಿ 23 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು, 13.89 ಲಕ್ಷ ಗ್ರಾಹಕರನ್ನು ವೊಡಾಫೋನ್ ಕಳೆದುಕೊಂಡಿದೆ. ಏರ್ ಸೆಲ್ 3.91 ಲಕ್ಷ ಮತ್ತು ಟೆಲಿನಾರ್ 2.75 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಉತ್ತರ ಪ್ರದೇಶ (ಪೂರ್ವ) ವಲಯವು 8.41 ಕೋಟಿ ಚಂದಾದಾರರನ್ನು ಹೊಂದಿದೆ. ಮಹಾರಾಷ್ಟ್ರ ವಲಯವು ಒಟ್ಟು 7.87 ಕೋಟಿ ಚಂದಾದಾರರನ್ನು ಹೊಂದಿದೆ.
ಒಟ್ಟು 7.62 ಕೋಟಿ ಗ್ರಾಹಕರೊಂದಿಗೆ ಬಿಹಾರವು ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ್ (ಪೂರ್ವ) ಕ್ರಮವಾಗಿ 5.1 ಲಕ್ಷ ಮತ್ತು 4.7 ಲಕ್ಷ ಹೊಸ ಚಂದಾದಾರರೊಂದಿಗೆ ಉತ್ತಮ ಸಾಮರ್ಥ್ಯ ತೋರಿವೆ ಎನ್ನಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT