ಅರುಣ್ ಜೇಟ್ಲಿ 
ವಾಣಿಜ್ಯ

ಅಪನಗದೀಕರಣದ ಪರಿಣಾಮಗಳು ನಿರೀಕ್ಷಿತ ಹಾದಿಯಲ್ಲೇ ಇವೆ: ಅರುಣ್ ಜೇಟ್ಲಿ

ಅಪನಗದಿಕರಣ ಕಾರಣ ದೇಶದ ಆರ್ಥಿಕತೆ ಉತ್ತಮ ದಿಕ್ಕಿನತ್ತ ಸಾಗುತ್ತಿದೆ ಆರ್ಥಿಕತೆಗೆ ಇದರಿಂದ ದೀರ್ಘಾವಧಿಯಲ್ಲಿ ಲಾಭವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಹೊಸದಿಲ್ಲಿ: ಅಪನಗದಿಕರಣ ಕಾರಣ ದೇಶದ ಆರ್ಥಿಕತೆ ಉತ್ತಮ ದಿಕ್ಕಿನತ್ತ ಸಾಗುತ್ತಿದೆ,  ಆರ್ಥಿಕತೆಗೆ ಇದರಿಂದ ದೀರ್ಘಾವಧಿಯಲ್ಲಿ ಲಾಭವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬಹುತೇಕ ರದ್ದಾದ ನೋಟುಗಳು ಬ್ಯಾಂಕ್ ಗೆ ಮರಳಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದ ಒಂದು ದಿನದ ನಂತರ, ಜೇಟ್ಲಿ ಈ ಹೇಳಿಕೆ ನೀಡಿದ್ದಾರೆ. ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಲಾಗಿದೆ ಎಂದ ಮಾತ್ರಕ್ಕೆ ಎಲ್ಲಾ ಹಣವೂ ನ್ಯಾಯಸಮ್ಮತ ಹಣವಾಗಿಲ್ಲ. 
"ಅಪನಗದಿಕರಣದ ನಂತರ ಕಪ್ಪು ಹಣವನ್ನು ಸಂಪೂರ್ಣವಾಗಿ ನಾಶಗೊಳಿಸಲಾಗಿದೆ ಎಂದು ಯಾರೂ ಹೇಳುತ್ತಿಲ್ಲ" ಎಂದು ಅವರು ಹೇಳಿದರು.
ಅವರು ಜಿಎಸ್ಟಿ ಜತೆಗೂಡಿ ಅಪನಗದಿಕರಣ ಕಾರಣ ತೆರಿಗೆಯ ಆದಾಯಕ್ಕೆ "ಮಹತ್ವದ ಹೆಚ್ಚಳ" ವನ್ನು ನೀಡಿದೆ, ಏಕೆಂದರೆ ಅನೇಕ ಜನರು ತೆರಿಗೆ ಪಾವತಿದಾರರ ವ್ಯಾಪ್ತಿಯಲ್ಲಿ ಬಂದಿದ್ದಾರೆ ಎಂದರು. ಬ್ಯಾಂಕುಗಳಲ್ಲಿ ಅಗಾಧ ಪ್ರಮಾಣದ ಹಣವನ್ನು ಸಂಗ್ರಹಿಸಿದ್ದರೂ, ಸರ್ಕಾರದ ಕಾಳಜಿ ಇದಾಗಿಲ್ಲ. ಇದೀಗ ಹೆಚ್ಚಿನ ಪ್ರಮಾಣದ ಹಣವು ಫಾರ್ಮಲ್ ಸಿಸ್ಟಮ್ ಮೂಲಕ ಅರ್ಥವ್ಯವಸ್ಥೆಗೆ ಇಳಿದಿದೆ. 
"ಅಪನಗದಿಕರಣ ಪರಿಣಾಮವು ಭವಿಷ್ಯದ ಬೆಳವಣಿಗೆಯಲ್ಲಿದೆ... ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಮಾಡಿದ ಮಾತ್ರಕ್ಕೆ ಅದು ನ್ಯಾಯಸಮ್ಮತ ಹಣವಾಗುವುದಿಲ್ಲ" ಎಂದು ಅವರು ಹೇಳಿದರು, ರಾಜಕೀಯ ಪ್ರತಿರೋಧವಿದ್ದರೂ ಸಹ ದೇಶವು ಅಪನಗದಿಕರಣಕ್ಕೆ ಸಿದ್ದವಾಗಿತ್ತು. 
ಆರ್ ಬಿಐ ನಿನ್ನೆ ತನ್ನ ಹೇಳಿಕೆಯಲ್ಲಿ  ಅಪನಗದಿಕರಣದಿಂದ ಕರೆನ್ಸಿಯ ಶೇ. 99 ರಷ್ಟು ಹಣ (ಸುಮಾರು 15.44 ಲಕ್ಷ ಕೋಟಿ ರೂ.) ಬ್ಯಾಂಕ್ ಗೆ ಸಂದಾಯವಾಗಿದೆ ಎಂದಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT