ಅರುಣ್ ಜೇಟ್ಲಿ 
ವಾಣಿಜ್ಯ

ಜಿಎಸ್ ಟಿ ಕೌನ್ಸಿಲ್ ನಲ್ಲಿ ಸೇವಾ ತೆರಿಗೆ ಅಂತಿಮ, ಶಿಕ್ಷಣ, ಆರೋಗ್ಯಕ್ಕೆ ವಿನಾಯ್ತಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಷತ್‌ ಶುಕ್ರವಾರ ಸೇವಾ ತೆರಿಗೆ ದರವನ್ನು ಅಂತಿಮಗೊಳಿಸಲಾಗುತ್ತಿದ್ದು, ಇವು ಜುಲೈ 1ರಿಂದ ಜಾರಿಗೆ ಬರಲಿದೆ.

ಶ್ರೀನಗರ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಷತ್‌  ಶುಕ್ರವಾರ ಸೇವಾ ತೆರಿಗೆ ದರವನ್ನು ಅಂತಿಮಗೊಳಿಸಲಾಗುತ್ತಿದ್ದು, ಇವು ಜುಲೈ 1ರಿಂದ ಜಾರಿಗೆ ಬರಲಿದೆ. ಜಿಎಸ್ ಟಿಯಿಂದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ವಿನಾಯ್ತಿ ನೀಡಲಾಗಿದೆ. 
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಇಂದು ನಡೆದ ಜಿಎಸ್‌ಟಿ ಪರಿಷತ್‌ ನ ಎರಡನೇ ದಿನದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ದೂರವಾಣಿ ಹಾಗೂ ಹಣಕಾಸು ಸೇವೆಗಳಿಗೆ ಶೇ 18ರಷ್ಟು, ರೇಸ್ ಕ್ಲಬ್, ಬೆಟ್ಟಿಂಗ್ ಮತ್ತು ಸಿನೆಮಾ ಹಾಲ್ ಗಳಿಗೆ ಶೇ.28ರಷ್ಚು ತೆರಿಗೆ ವಿಧಿಸಲಾಗುತ್ತಿದೆ.
ಇನ್ನು ಓಲಾ ಹಾಗೂ ಉಬರ್ ನಂತಹ ಕ್ಯಾಬ್ ಸೇವೆಗಳಿಗೆ ಶೇ.5ರಷ್ಚು ತೆರಿಗೆ ವಿಧಿಸಿಲು ಜಿಎಸ್ ಟಿ ಪರಿಷತ್ ನಿರ್ಧರಿಸಿದೆ. ಆದರೆ ಚಿನ್ನದ ಮೇಲಿನ ತೆರಿಗೆ ಇನ್ನು ಅಂತಿಮಗೊಂಡಿಲ್ಲ. ಹೀಗಾಗಿ ಜೂನ್ 3ರಂದು ಜಿಎಸ್ ಟಿ ಪರಿಷತ್ ಮತ್ತೆ ಸಭೆ ಸೇರಲಿದೆ ಎಂದು ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ತಿಳಿಸಿದ್ದಾರೆ. 
ಜಿಎಸ್‌ಟಿ ಜಾರಿಯಿಂದ ಆಹಾರಧಾನ್ಯಗಳ ಬೆಲೆ ಇಳಿಕೆಯಾಗಲಿದೆ. ಕೇಶತೈಲ (ಹೇರ್‌ ಆಯಿಲ್‌), ಸೋಪ್‌, ಟೂತ್‌ಪೇಸ್ಟ್‌ ಸೇರಿದಂತೆ ಹಲವು ಸರಕುಗಳ ಜಿಎಸ್‌ಟಿ ದರ ಶೇಕಡ 18ರಷ್ಟು ಇರಲಿದೆ. ಕಲ್ಲಿದ್ದಲಿನ ಜಿಎಸ್‌ಟಿ ದರ ಶೇಕಡ 5ಕ್ಕೆ ಇಳಿಕೆಯಾಗಲಿದೆ. ಸದ್ಯ ಕಲ್ಲಿದ್ದಲಿಗೆ ಶೇಕಡ 11.69ರಷ್ಟು ತೆರಿಗೆಯಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT