ವಾಣಿಜ್ಯ

ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಗಡುವು ವಿಸ್ತರಣೆ ಇಲ್ಲ: ಹಸ್ಮುಖ್ ಅಧಿಯಾ

Srinivas Rao BV
ಬೆಂಗಳೂರು: ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಮಾಡುವುದಕ್ಕೆ ವಿಧಿಸಲಾಗಿದ್ದ ಗಡುವನ್ನು ಇನ್ನು ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 
ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಸಾಕಷ್ಟು ಗಡುವು ವಿಧಿಸಲಾಗಿದೆ. ಇನ್ನು ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದ್ದಾರೆ. ಗ್ರೂಪ್ ಆಫ್ ಮಿನಿಸ್ಟರ್ಸ್ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಹಸ್ಮುಖ್ ಅಧಿಯಾ, ಡಿಸೆಂಬರ್ ವರೆಗೆ  ಸ್ವತಃ ತೆರಿಗೆ ಮೌಲ್ಯಮಾಪನ ಮಾಡಿ ಜಿಎಸ್ ಟಿ ರಿಟರ್ನ್ಸ್ ನ್ನು ಸಲ್ಲಿಕೆ ಮಾಡಲು ಜಿಎಸ್ ಟಿ ಕೌನ್ಸಿಲ್ ಅವಕಾಶ ನೀಡಿದೆ, ಡಿಸೆಂಬರ್ ನಂತರ ಗಡುವು ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
SCROLL FOR NEXT