ಸಾಂದರ್ಭಿಕ ಚಿತ್ರ 
ವಾಣಿಜ್ಯ

5 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ.ಗಳ 23 ಸಾವಿರ ಬ್ಯಾಂಕ್ ವಂಚನೆ ಕೇಸುಗಳು: ಆರ್ ಬಿಐ

ಕಳೆದ ಐದು ವರ್ಷಗಳಲ್ಲಿ ಹಲವಾರು ಬ್ಯಾಂಕುಗಳಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿ ವಂಚನೆ ...

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಹಲವಾರು ಬ್ಯಾಂಕುಗಳಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿ ವಂಚನೆ ಮಾಡಿರುವ 23,000ಕ್ಕೂ ಅಧಿಕ ಕೇಸುಗಳು ವರದಿಯಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

2016-17ರಲ್ಲಿ 5,000ಕ್ಕೂ ಅಧಿಕ ವಂಚನೆ ಪ್ರಕರಣಗಳು ವರದಿಯಾದರೆ, ಏಪ್ರಿಲ್ 2017ರಿಂದ ಮಾರ್ಚ್ 1, 2018ರವರೆಗೆ ಒಟ್ಟು 5,152 ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಆರ್ ಟಿಐ ಉತ್ತರದಲ್ಲಿ ಹೇಳಲಾಗಿದೆ.

ಏಪ್ರಿಲ್ 2017ರಿಂದ ಮಾರ್ಚ್ 1, 2018ರವರೆಗೆ 28,459 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ವರದಿಯಾಗಿದೆ ಎಂದು ಆರ್ ಬಿಐ ತಿಳಿಸಿದೆ.

2016-17ರಲ್ಲಿ 5,076 ಬ್ಯಾಂಕ್ ವಂಚನೆ ಕೇಸುಗಳು ವರದಿಯಾಗಿದ್ದು 23,933 ಕೋಟಿ ರೂಪಾಯಿ ವಂಚನೆ ಒಳಗೊಂಡಿದೆ.

2013ರಿಂದ ಮಾರ್ಚ್ 1, 2018ರವರೆಗೆ 1 ಲಕ್ಷ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು 23,866 ಕೇಸುಗಳು ವರದಿಯಾಗಿವೆ. ಒಟ್ಟು 1,00,718 ಕೋಟಿ ರೂಪಾಯಿ ಎಲ್ಲಾ ಕೇಸುಗಳನ್ನು ಸೇರಿಸಿದರೆ ಆಗುತ್ತದೆ ಎಂದು ಆರ್ ಟಿಐಯಲ್ಲಿ ಹೇಳಲಾಗಿದೆ.

ಇಂತಹ 4,693 ಕೇಸುಗಳು ಮತ್ತು 4,639 ಕೇಸುಗಳು 2015-16 ಮತ್ತು 2014-15ರಲ್ಲಿ ವರದಿಯಾಗಿವೆ ಎಂದು ಆರ್ ಬಿಐ ಹೇಳಿದೆ. 2013-14ರಲ್ಲಿ ಬ್ಯಾಂಕುಗಳಲ್ಲಿ 4,306 ವಂಚನೆ ಕೇಸುಗಳು ವರದಿಯಾಗಿದ್ದು 10,170 ಕೋಟಿ ರೂಪಾಯಿ ಒಳಗೊಂಡಿದೆ ಎಂದು ಆರ್ ಬಿಐ ತಿಳಿಸಿದೆ.

ಉಲ್ಲೇಖಿತ ವಂಚನೆ ಕೇಸುಗಳನ್ನು ಪರಿಷ್ಕರಿಸಿ ವಾಸ್ತವಾಂಶ ಮತ್ತು ವೈಯಕ್ತಿಕ ಕೇಸುಗಳ ಪರಿಸ್ಥಿತಿಗಳಿಗನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರ್ ಬಿಐ ಹೇಳಿದೆ.

ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಉದ್ಯಮಿಗಳು ಭಾಗಿಯಾಗಿರುವ ಬೃಹತ್ ಮೊತ್ತದ ಬ್ಯಾಂಕ್ ವಂಚನೆ ಕೇಸುಗಳ ಬಗ್ಗೆ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಅಂಕಿಅಂಶಗಳು ಭಾರೀ ಮಹತ್ವ ಪಡೆದಿವೆ.



ಬ್ಯಾಂಕು ವಂಚನೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಪಂಜಾಬ್ ನ್ಯಾಷನಲ್ ಬ್ಯಾಂಕಿನ 13,000 ಕೋಟಿ ರೂಪಾಯಿಗಳ ವಂಚನೆ ಪ್ರಕರಣ. ಸಿಬಿಐ ಇತ್ತೀಚೆಗೆ ಸಾರ್ವಜನಿಕ ವಲಯ ಬ್ಯಾಂಕಾದ ಐಡಿಬಿಐ ಬ್ಯಾಂಕಿನ ಮಾಜಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕ, ಮಾಜಿ ಏರ್ ಸೆಲ್ ಪ್ರವರ್ತಕ ಸಿ. ಶಿವಶಂಕರನ್, ಅವರ ಪುತ್ರ ಬ್ಯಾಂಕಿನಿಂದ 600 ಕೋಟಿ ರೂಪಾಯಿ ಸಾಲ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸು ದಾಖಲಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT